ಆ್ಯಪ್ನಗರ

ಸಂಜೀವರಾಯಸ್ವಾಮಿ ಜಾತ್ರೆಗೆ ರಸ್ತೆ ಗುಂಡಿಗಳ ಸ್ವಾಗತ!

ಇದೇ ತಿಂಗಳ 25ರಂದು ನಡೆಯಲಿರುವ ಶ್ರೀಸಂಜೀವರಾಯಸ್ವಾಮಿ ಜಾತ್ರೆಗೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಆದರೆ ಅವರನ್ನು ಸ್ವಾಗತಿಸಲು ಡಾಂಬರೀಕರಣವಾದ ರಸ್ತೆಗಳಿಲ್ಲ. ದೊಡ್ಡ ದೊಡ್ಡ ಗುಂಡಿ ಬಿದ್ದ ರಸ್ತೆಗಳೇ ಸ್ವಾಗತಿಸಲಿವೆ.

Vijaya Karnataka 12 Jul 2018, 5:00 am
ಚನ್ನಪಟ್ಟಣ: ಇದೇ ತಿಂಗಳ 25ರಂದು ನಡೆಯಲಿರುವ ಶ್ರೀಸಂಜೀವರಾಯಸ್ವಾಮಿ ಜಾತ್ರೆಗೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಆದರೆ ಅವರನ್ನು ಸ್ವಾಗತಿಸಲು ಡಾಂಬರೀಕರಣವಾದ ರಸ್ತೆಗಳಿಲ್ಲ. ದೊಡ್ಡ ದೊಡ್ಡ ಗುಂಡಿ ಬಿದ್ದ ರಸ್ತೆಗಳೇ ಸ್ವಾಗತಿಸಲಿವೆ.
Vijaya Karnataka Web welcome to road buttons for sanjeevayaswamy fair
ಸಂಜೀವರಾಯಸ್ವಾಮಿ ಜಾತ್ರೆಗೆ ರಸ್ತೆ ಗುಂಡಿಗಳ ಸ್ವಾಗತ!


ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ದೇವಸ್ಥಾನದ ಆವರಣದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಬಿದ್ದು ರಸ್ತೆ ಹಾಳಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯು ಗುಂಡಿ ಬಿದ್ದು ವರ್ಷ ಕಳೆದಿದ್ದರೂ ಈ ಬಗ್ಗೆ ಹಲವು ಬಾರಿ ಲಿಖಿತ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಾತ್ರೆ ಸಮಯದಲ್ಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂರು ದಿನದ ಜಾತ್ರæ: ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀಸಂಜೀವರಾಯಸ್ವಾಮಿ ಕ್ಷೇತ್ರದಲ್ಲಿ ಪ್ರತಿವರ್ಷ ಜುಲೈ ತಿಂಗಳ ಆಷಾಢ ಮಾಸದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯ ಜಾತ್ರೆ ನಡೆಯಲಿದ್ದು, ಈ ಮೂರು ದಿನ ಜಾತ್ರೆಯಲ್ಲಿ ಶ್ರೀಲಕ್ಷ್ಮೀವೆಂಕಟೇಶ್ವಸ್ವಾಮಿ ಬ್ರಹ್ಮರಥೋತ್ಸವ, ಕಲ್ಯಾಣೋತ್ಸವಗಳು ನಡೆಯಲಿವೆ. ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಸೇರಲಿದ್ದಾರೆ.

ಗ್ರಾಮಸ್ಥರ ಆತಂಕ: ಶ್ರೀ ಸಂಜೀವರಾಯಸ್ವಾಮಿ ಜಾತ್ರೆಯ ಪ್ರಯುಕ್ತ ನಡೆಯುವ ಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದ್ದು, ಆದರೆ ದೇವಸ್ಥಾನದ ಆವರಣದ ಎರಡೂ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ರಥೋತ್ಸವಕ್ಕೂ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಅಪಘಾತಗಳೇ ಹೆಚ್ಚು: ಪಟ್ಟಣದ ರೈಲ್ವೇ ಗೇಟ್‌ನಿಂದ ಎಲೇಕೇರಿ ಮೂಲಕ ದೇವರಹೊಸಹಳ್ಳಿ ಗ್ರಾಮದ ಹೆದ್ದಾರಿ ರಸ್ತೆ ಕೂಡ ಸಂಪೂರ್ಣ ಗುಂಡಿಮಯವಾಗಿದೆ. ಅದರಲ್ಲೂ ರಾಂಪುರ ಗೇಟ್‌ ಹಾಗೂ ಪಾರೇದೊಡ್ಡಿ ಮಧ್ಯದಲ್ಲಿ ಮೂರ್ನಾಲ್ಕು ಕಡೆ ದೊಡ್ಡದೊಡ್ಡ ಗುಂಡಿಗಳು ಬಿದ್ದಿವೆ. ವಾಹನ ಸವಾರರಂತೂ ನಿತ್ಯವೂ ಸಂಚಾರ ಮಾಡಲು ಕಿರಿಕಿರಿ ಅನುಭವಿಸುತ್ತಿದ್ದು, ಈ ವೇಳೆ ವಾಹನ ಸವಾರರು ಬೈಕ್‌ ಗುಂಡಿಗೆ ಬಿಟ್ಟು ನಿಯಂತ್ರಣ ತಪ್ಪಿ ಕೈಕಾಲು ಪೆಟ್ಟು ಮಾಡಿಕೊಂಡಿರುವ ಘಟನೆಗಳು ನಡೆದಿವೆ ಎಂದು ದೇವರಹೊಸಹಳ್ಳಿ ಗ್ರಾಮದ ಮುಖಂಡರಾದ ಡಿ.ಬಿ. ಬಸವರಾಜು, ಶ್ರೀಕಂಠ, ಚೇತನ್‌, ಸಿದ್ದೇಗೌಡ, ಸುನೀಲ್‌ ಆರೋಪಿಸಿದ್ದಾರೆ.

11ಸಿಪಿಟಿ1

11ಸಿಪಿಟಿ2

ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಶ್ರೀಸಂಜೀವರಾಯಸ್ವಾಮಿ ದೇವಸ್ಥಾನದ ಆವರಣದ ರಸ್ತೆಗಳು ಗುಂಡಿಬಿದ್ದು ಹಾಳಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ