ಆ್ಯಪ್ನಗರ

ಮಳೆ ಸಮಸ್ಯೆ ಹೆಚ್ಚಾಗಿದೆ; ಅದನ್ನ ನಾವು ನಿಭಾಯಿಸಬೇಕಿದೆ: ಡಿ.ಕೆ.ಶಿವಕುಮಾರ್

ಕನಕಪುರದಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ತಾಲೂಕು ವ್ಯಾಪ್ತಿಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಿದ್ದು ಕನಕಪುರದ ಹೆಮ್ಮೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

Vijaya Karnataka Web 5 Jul 2019, 4:04 pm
ರಾಮನಗರ: ಜನರ ಸಮಸ್ಯೆಗಳನ್ನ ಆಲಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ‌ ಹಮ್ಮಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಚಿಂತನೆ‌ ನಡೆಸುತ್ತಿದ್ದೇವೆ. ಎಲ್ಲರೂ ಭಗವಂತನಲ್ಲಿ ಪ್ರಾರ್ಥನೆ‌ ಮಾಡಿ‌ ಪ್ರಕೃತಿ ಕೈಕೊಟ್ಟಿದೆ. ಮಳೆ ಸಮಸ್ಯೆ ಹೆಚ್ಚಾಗಿದೆ. ಅದನ್ನ ನಾವು ನಿಭಾಯಿಸಬೇಕಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
Vijaya Karnataka Web d k shivakumar


ಇನ್ನು, ಮೋಡ ಬಿತ್ತನೆ‌ ಬಗ್ಗೆ ಈಗಾಗಲೇ ಚಿಂತನೆ ನಡೆಸಿದ್ದು ಬೇರೆ ಇಲಾಖೆಗಳಿಗೆ ವಹಿಸಿಕೊಟ್ಟಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು. ಕನಕಪುರ ತಾಲ್ಲೂಕಿನ‌ ವ್ಯಾಪ್ತಿಯ ತುಂಗಣಿಯಲ್ಲಿ ಜನಸಂಪರ್ಕ‌ ಸಭೆ ಉದ್ಘಾಟಿಸಿ ಮಾತನಾಡಿದ ಸಚಿವರು, ನಾನು ಎಂದಿಗೂ ತಟಸ್ಥನಾಗಿ ಉಳಿದಿಲ್ಲ. ಸದಾ ನಮ್ಮ ಕೆಲಸ ನಾವು ಮಾಡುತ್ತಲೇ ಇರುತ್ತೇವೆ, ಪ್ರಯತ್ನ ಕೈಬಿಡೋದಿಲ್ಲ ಎಂದರು. ಕನಕಪುರದಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ತಾಲೂಕು ವ್ಯಾಪ್ತಿಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಿದ್ದು ಕನಕಪುರದ ಹೆಮ್ಮೆ ಎಂದರು.

ದಯಾನಂದ ಸಾಗರ್ ಆಸ್ಫತ್ರೆ ಆಡಳಿತ ಮಂಡಳಿಯಿಂದ ಹೆಲ್ತ್ ಯೂನಿವರ್ಸಿಟಿ ಆರಂಭಿಸಲು ಮಾತುಕತೆ ಮುಗಿದಿದೆ. ಅದು ಸದ್ಯದಲ್ಲೇ ಆರಂಭವಾಗಲಿದೆ ಎಂದರು.
ಇನ್ನು, ಆಸ್ಪತ್ರೆಗೆ ಈಗಾಗಲೇ 400 ಕೋಟಿ ವೆಚ್ಚ ಮಾಡಲಾಗಿದೆ. ಪೂರ್ಣಗೊಳ್ಳುವಷ್ಟರಲ್ಲಿ 850 ಕೋಟಿಯಾಗಲಿದೆ ಎಂದರು, ಇದಷ್ಟೇ ಅಲ್ಲದೆ ಹೆರಿಗೆ ಆಸ್ಪತ್ರೆ, ಹೈನೋದ್ಯಮದ ಅಭಿವೃದ್ದಿಗಾಗಿ ಡೇರಿ ಉನ್ನತೀಕರಣಕ್ಕಾಗಿ ಪ್ರಯತ್ನ ನಡೀತಿದೆ ಎಂದರು.

ವಾಣಿಜ್ಯ ಬೆಳೆ ಬೆಳೆಯುವ‌ ನಿಟ್ಟಿನಲ್ಲಿ ರೈತರು ಮುಂದಾಗಿ, ಈಗಾಗಲೇ ಎಲ್ಲಾ ಹಳ್ಳಿಗಳ ಕೆರೆ ತುಂಬಿಸುವ ಮೂಲಕ ನೀರಾವರಿ ವಿಸ್ತರಣೆ ಕಾಮಗಾರಿ ನಡೀತಿದೆ, ರೇಷ್ಮೆ‌ಬೆಳೆ ಎಲ್ಲರಿಗೂ ಲಾಭದಾಯಕ ನಾನು ರೇಷ್ಮೆ ಬೆಳೆ ಬೆಳೆಯಲು ಮುಂದಾಗಿದ್ದೇನೆ ಎನ್ನುವ‌ ಮೂಲಕ ರೈತರು ಪಾಳು ಬಿಟ್ಟಿದ್ದ ಭೂಮಿ ಬಗ್ಗೆ ಪ್ರಸ್ತಾಪಿಸಿ ಎಲ್ಲರೂ ವ್ಯವಸಾಯ ಮಾಡುವಂತೆ ಕರೆ ನೀಡಿದರು.

ಜನಸಂಪರ್ಕ‌ ಸಭೆಯಲ್ಲಿ ಎಲ್ಲರ ಸಮಸ್ಯೆ ಬಗೆ ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಚಿಂತೆ ಬೇಡ ಎಂದ ಅವರು ಸಾಲ‌ ಮನ್ನಾ ಪತ್ರ ವಿತರಣೆ ಸೇರಿ ಕೆಲವು ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕ್ಯಾಪ್ಟನ್ ರಾಜೇಂದ್ರ ಮಾತನಾಡಿ ಕನಕಪುರ ತಾಲೂಕಿನಲ್ಲಿ 96 ಸಾವಿರ‌ ಖಾತೆದಾರರಿದ್ದಾರೆ , ಸ್ವಯಂ ಪ್ರೇರಣೆಯಿಂದ ಎಲ್ಲಾ ರೈತರು ಕಿಸಾನ್ ಸಮ್ಮಾನ್ ಉಲಯೋಜನೆಗೆ ಡಿಕ್ಲೆರೇಷನ್ ‌ಸಲ್ಲಿಸುವಂತೆ ಮನವಿ‌ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ