ಆ್ಯಪ್ನಗರ

ರಸ್ತೆ ಬದಿ ವ್ಯಾಪಾರಸ್ಥರಿಗೆ ಕಾರ್ಯಾಗಾರ

ನಗರದ ಅಂಬೇಡ್ಕರ್‌ ಭವನದಲ್ಲಿಗುರುವಾರ ಜಿಲ್ಲಾಡಳಿತ ಜಿಲ್ಲಾನಗರಾಭಿವೃದ್ಧಿ ಕೋಶ, ಜಿಲ್ಲಾಕೌಶಲ್ಯ ಮಿಷನ್‌ ಹಾಗೂ ನಗರಸಭೆ ವತಿಯಿಂದ ನಗರದ ರಸ್ತ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

Vijaya Karnataka 13 Sep 2019, 3:24 pm
ರಾಮನಗರ: ನಗರದ ಅಂಬೇಡ್ಕರ್‌ ಭವನದಲ್ಲಿಗುರುವಾರ ಜಿಲ್ಲಾಡಳಿತ ಜಿಲ್ಲಾನಗರಾಭಿವೃದ್ಧಿ ಕೋಶ, ಜಿಲ್ಲಾಕೌಶಲ್ಯ ಮಿಷನ್‌ ಹಾಗೂ ನಗರಸಭೆ ವತಿಯಿಂದ ನಗರದ ರಸ್ತ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
Vijaya Karnataka Web workshop for street side traders
ರಸ್ತೆ ಬದಿ ವ್ಯಾಪಾರಸ್ಥರಿಗೆ ಕಾರ್ಯಾಗಾರ


ಕಾರ್ಯಾಗಾರದಲ್ಲಿನಗರಸಭೆ ವ್ಯಾಪ್ತಿಯ 914 ಅಧಿಕೃತ ರಸ್ತೆ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಪ್ರಮಾಣ ಪತ್ರವನ್ನು ನವೀಕರಿಸಿಕೊಡುವುದು ಸೇರಿದಂತೆ ನೂತನ ರಸ್ತೆ ಬದಿ ವ್ಯಾಪಾರಿಗಳನ್ನು ಸೇರ್ಪಡೆಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಇದಕ್ಕಾಗಿ ಅಂಬೇಡ್ಕರ್‌ ಭವನದಲ್ಲಿ ಪ್ರತ್ಯೇಕವಾಗಿ ಐದು ಕೌಂಟರ್‌ ತೆರೆಯಲಾಗಿತ್ತು. ಬೆಳಗ್ಗೆಯಿಂದಲೇ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರಿ ಪ್ರಮಾಣ ಪತ್ರ ಪಡೆದುಕೊಳ್ಳಲು ಮುಂದಾದರು.

ನೂತನ ವ್ಯಾಪಾರಿಗಳ ಸೇರ್ಪಡೆ: ಈ ವೇಳೆ ಡೇ ನಲ್ಮ್‌ನ ಯೋಜನಾ ನಿರ್ದೇಶಕ ನಟರಾಜು ಮಾತನಾಡಿ, ''ರಸ್ತೆ ಬದಿ ವ್ಯಾಪಾರಿಗಳಿಗೆ ಕಳೆದ ಸಾಲಿನಲ್ಲಿ914 ಪ್ರಮಾಣ ಪತ್ರವನ್ನು ವಿತರಣೆ ಮಾಡಿದ್ದೇವೆ. ಜೊತೆಗೆ ಇವರಿಗೆ ಪುನಃ ನವೀಕರಣದ ಮಾಡಿಕೊಡಲಾಗಿದೆ. ನೂತನ ವ್ಯಾಪಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ,'' ಎಂದು ಹೇಳಿದರು.

''ರಸ್ತೆ ಬದಿ ವ್ಯಾಪಾರಿಗಳಿಗಾಗಿ 5 ದಿನಗಳ ಕಾರ‍್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ‍್ಯಗಾರದಲ್ಲಿ ವ್ಯಾಪಾರಸ್ಥರಿಗೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ನಿಯಮ -2019ರ ಕಾಯ್ದೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಬೆಳಗ್ಗೆ 10ರಿಂದ ಸಂಜೆ 4ವರೆಗೆ ನಡೆಯಲಿದೆ,'' ಎಂದು ಹೇಳಿದರು.

ನಾನಾ ಸೌಲಭ್ಯಗಳು:
''ಸ್ವಚ್ಛತೆ, ಸ್ವಚ್ಛ ಭಾರತ್‌, ಆಯುಷ್ಮಾನ್‌ ಭಾರತ್‌, ನಗರಸಭೆ ನಿಯಮ, ಸಬ್ಸಿಡಿಗಳ ಕುರಿತು ಕಾರಾರ‍ಯಗಾದಲ್ಲಿರಸ್ತೆ ವ್ಯಾಪರಸ್ಥರಿಗೆ ಮಾಹಿತಿ ನೀಡಲಾಗುತ್ತದೆ. ನೂತನವಾಗಿ ವ್ಯಾಪಾರ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆನ್ನುವವರು ಆಧಾರ್‌, ಕಾರ್ಡ್‌, ರೇಷನ್‌ ಕಾಡ್‌, ಭಾವಚಿತ್ರ ನೀಡಿದರೇ, ಗುರುತಿನ ಚೀಟಿ ಮಾಡಿಕೊಡಲಾಗುತ್ತದೆ. ನೂತನ ಚೀಟಿಯನ್ನು ಸೋಮವಾರದ ವ್ಯಾಪಾರಸ್ಥರಿಗೆ ನೀಡಲಾಗುತ್ತದೆ,'' ಎಂದು ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾಕೌಶಾಲ್ಯಾಭಿವೃದ್ಧಿ ಕೋಸ ವ್ಯವಸ್ಥಾಪಕ ರಾಮಕೃಷ್ಣಪ್ಪ, ನಗರಸಭೆ ಪೌರಾಯುಕ್ತೆ, ಶುಭಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಿಟ್‌ ವಿತರಣೆ: ಕಾರ್ಯಾಗಾರಕ್ಕೆ ಆಗಮಿಸುವ ವ್ಯಾಪಾರಸ್ಥರಿಗೆ ಕಿಟ್‌ ವಿತರಣೆ ಮಾತಡಲಾಯಿತು.ಇದರಲ್ಲಿ ಗುರುತಿನ ಚೀಟಿ, ಬರೆಯಲು ಪುಸ್ತಕ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗಿದೆ. 900ರಕ್ಕೂ ಅಧಿಕ ಮಂದಿಗೆ ಇದನ್ನು ವಿತರಣೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ