ಆ್ಯಪ್ನಗರ

ದೈಹಿಕ, ಮಾನಸಿಕ ಸದೃಢಕ್ಕೆ ಯೋಗವೇ ಮದ್ದು ..!

ಹದಿಹರೆಯದ ವಿದ್ಯಾರ್ಥಿಗಳಲ್ಲಿ ಚುರುಕಿನ ಬುದ್ಧಿ ಮತ್ತೆ ಮೂಡಿಸಲು ಯೋಗ ಸಹಕಾರಿಯಾಗಿರುತ್ತದೆ ಎಂದು ಬಿ.ಜಿ.ಎಸ್‌. ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್‌ ಸುರೇಶ್‌ ಎಂ.ಸಿ. ಹೇಳಿದರು.

Vijaya Karnataka 23 Jun 2018, 3:40 pm
ರಾಮನಗರ: ಹದಿಹರೆಯದ ವಿದ್ಯಾರ್ಥಿಗಳಲ್ಲಿ ಚುರುಕಿನ ಬುದ್ಧಿ ಮತ್ತೆ ಮೂಡಿಸಲು ಯೋಗ ಸಹಕಾರಿಯಾಗಿರುತ್ತದೆ ಎಂದು ಬಿ.ಜಿ.ಎಸ್‌. ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್‌ ಸುರೇಶ್‌ ಎಂ.ಸಿ. ಹೇಳಿದರು.
Vijaya Karnataka Web yoga for physical psychological medicine
ದೈಹಿಕ, ಮಾನಸಿಕ ಸದೃಢಕ್ಕೆ ಯೋಗವೇ ಮದ್ದು ..!


ದೈಹಿಕವಾಗಿ ಬಲ: ನಗರದ ಹೊರವಲಯದ ಅರ್ಚಕರಹಳ್ಳಿ ಬಿ.ಜಿ.ಎಸ್‌. ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,' ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಜೀವನದಲ್ಲಿ ಕಲಿತ ಅಭ್ಯಾಸಗಳು ಜೀವನಪರ‍್ಯಂತ ಜೊತೆಯಾಗಿರುತ್ತವೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ದೈಹಿಕವಾಗಿ ಸಹ ಸಬಲರಾಗಿರುವುದು ಅವಶ್ಯಕವಾಗಿದ್ದು ನಿತ್ಯ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಮತ್ತು ಅಂಗಸೌಷ್ಠವ ಲಭಿಸುತ್ತದೆ,'ಎಂದು ಸಲಹೆ ನೀಡಿದರು.

ಯೋಗವೆಂದರೆ ಯೋಗ್ಯ: 'ಸೈಕ್ಲಿಂಗ್‌, ಜಾಗಿಂಗ್‌, ಈಜುವುದು ಮುಂತಾದ ಚಟುವಟಿಕೆಗಳಂತೆಯೇ ನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಮನಸ್ಸು , ಮೆದುಳು, ದೇಹದ ಅವಯವಗಳು ಚುರುಕಾಗಿ ಕಾರ್ಯ ಚಟುವಟಿಕೆ ನಡೆಸುವಂತಾಗುತ್ತದೆ. ಯೋಗವೆಂದರೆ ಯೋಗ್ಯವಾದುದ್ದನ್ನು ಗಮನದಲ್ಲಿಟ್ಟು ಮಾಡುವುದೇ ಯೋಗ ಎಂದಾಗಿದೆ,'ಎಂದು ನುಡಿದರು.

ಓದುವುದರಲ್ಲಿ ಏಕಾಗ್ರತೆ: 'ಪ್ರತಿದಿನ ನಿಯ ಮಿತವಾಗಿ ಯೋಗ ಮಾಡಿದರೆ ಹಲವಾರು ರೋಗ ವಾಸಿಯಾಗುತ್ತದೆ. ಪ್ರಾಚೀನ ಕಾಲದಿಂದಲ್ಲೂ ಋುಷಿ ಮುನಿಗಳು ಯೋಗ ಮಾಡಿ ಧೀರ್ಘ ಆಯುಷ್ಯರಾಗಿದ್ದನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಪ್ರತಿದಿನ ಧ್ಯಾನ ಮಾಡುವುದರಿಂದ ಓದುವುದರಲ್ಲಿ ಏಕಾಗ್ರತೆ ,ಆಸಕ್ತಿ ಹೆಚ್ಚಾಗುತ್ತದೆ,' ಎಂದು ತಿಳಿಸಿದರು.

ಕನಿಷ್ಠ ಒಂದು ಗಂಟೆ ಶ್ರಮ:
ಉಪನ್ಯಾಸಕರಾದ ಶ್ರೀಕಾಂತ್‌ ಮಾತನಾಡಿ,'ಯೋಗ ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಯೋಗದಿನದಂದು ಮಾತ್ರ ಯೋಗ ಮಾಡದೆ ದಿನದಲ್ಲಿ ಕನಿಷ್ಠ ಒಂದು ಗಂಟೆ ಯೋಗ ಮಾಡಿದರೆ ದಿನವೆಲ್ಲ ಉಲ್ಲಸಿತರಾಗಿರಬಹುದು. ಉತ್ತಮ ಆರೋಗ್ಯದಿಂದಿರಲು ನಿರಂತರ ಯೋಗಾಭ್ಯಾಸ ಬಹಳಮುಖ್ಯ,' ಎಂದರು.

ಕಾಲೇಜಿನ ದೈಹಿಕ ಶಿಕ್ಷ ಕರಾದ ದಿನೇಶ್‌ ರವರು ಜ್ಞಾನಯೋಗ, ಭಕ್ತಿಯೋಗ, ರಾಜಯೋಗ, ಕರ್ಮಯೋಗದ ಇವುಗಳ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳನ್ನು ಮಾಡಿಸಲಾಯಿತು. ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ