ಆ್ಯಪ್ನಗರ

ಚನ್ನಪಟ್ಟಣ ಯುವಕ ಮಲ್ಪೆ ಸಮುದ್ರದಲ್ಲಿ ಮುಳುಗಿ ಸಾವು

ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ದೀಪು ಮಂಗಳೂರಿನ ಮಲ್ಪೆಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Vijaya Karnataka 18 Jul 2019, 5:16 pm
ಚನ್ನಪಟ್ಟಣ: ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ದೀಪು ಮಂಗಳೂರಿನ ಮಲ್ಪೆಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Vijaya Karnataka Web young boy of channapattana died in malpe sea
ಚನ್ನಪಟ್ಟಣ ಯುವಕ ಮಲ್ಪೆ ಸಮುದ್ರದಲ್ಲಿ ಮುಳುಗಿ ಸಾವು


ಮೆಣಸಿಗನಹಳ್ಳಿ ಗ್ರಾಮದ ಲೇಟ್‌ ಸಿದ್ದರಾಜು ಮತ್ತು ಪ್ರೇಮ ಎಂಬುವವರ ಪುತ್ರ ದೀಪು (19) ಮಂಗಳೂರಿನ ಮಲ್ಪೆ ಸಮುದ್ರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ದೀಪು ತನ್ನ 13 ಮಂದಿ ಸ್ನೇಹಿತರ ಜತೆಗೂಡಿ ಪ್ರವಾಸಕ್ಕೆಂದು ಕಳೆದ ಶನಿವಾರ ತೆರಳಿದ್ದು, ಮೋಜಿಗಾಗಿ ಸಮುದ್ರಕ್ಕೆ ಇಳಿದಿದ್ದನ್ನ್ನಲಾಗಿದೆ. ಸಮುದ್ರದ ನೀರಿನ ರಭಸ ಹೆಚ್ಚಾಗಿದ್ದರಿಂದ ನೀರಿನಲ್ಲಿ ಆಟವಾಡುವ ಸಂದರ್ಭ ಮುಳುಗಿದ್ದಾನೆ. ಕೂಡಲೇ ಸ್ನೇಹಿತರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಂದಿನವರೆಗೂ ದೀಪು ಮೃತದೇಹಕ್ಕಾಗಿ ಹುಡುಕಾಟ ನಡೆಸಿ ಸ್ನೇಹಿತರು ಬರಿಗೈಲಿ ವಾಪಸ್‌ ಮರಳಿದ್ದಾರೆ. ದೀಪು ಸಾವಿನ ವಿಚಾರ ಕೇಳಿದ ಕೂಡಲೇ ತಾಯಿ ಪ್ರೇಮಾ ಮತ್ತು ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಮೆಣಸಿಗನಹಳ್ಳಿ ಗ್ರಾಮಸ್ಥರು ಆತನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ