ಆ್ಯಪ್ನಗರ

ಕಲ್ಲುದಿಮ್ಮಿ ಸಾಗಣೆ ಲಾರಿ ಹರಿದು ಯುವಕ ಸಾವು

ಗೌರಿ ಗಣೇಶ ಹಬ್ಬಕ್ಕೆಂದು ಬಂದು ಮತ್ತೆ ಬೆಂಗಳೂರಿನ ಕರ್ತವ್ಯಕ್ಕೆ ತೆರಳುತ್ತಿದ್ದ ಯುವಕನೊಬ್ಬನ ಮೇಲೆ ...

Vijaya Karnataka 8 Sep 2019, 5:00 am
ಕನಕಪುರ: ಗೌರಿ ಗಣೇಶ ಹಬ್ಬಕ್ಕೆಂದು ಬಂದು ಮತ್ತೆ ಬೆಂಗಳೂರಿನ ಕರ್ತವ್ಯಕ್ಕೆ ತೆರಳುತ್ತಿದ್ದ ಯುವಕನೊಬ್ಬನ ಮೇಲೆ ಕಲ್ಲುದಿಮ್ಮಿಗಳನ್ನು ಸಾಗಣೆ ಮಾಡುವ ಲಾರಿ ಹರಿದಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Vijaya Karnataka Web youth killed in kaludhimmi transport truck
ಕಲ್ಲುದಿಮ್ಮಿ ಸಾಗಣೆ ಲಾರಿ ಹರಿದು ಯುವಕ ಸಾವು


ಕಲ್ಲಹಳ್ಳಿ ಗೇಟ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿಹಿಂದಿನಿಂದ ವೇಗವಾಗಿ ಬಂದ ಲಾರಿ ಬೈಕ್‌ನಲ್ಲಿತೆರಳುತ್ತಿದ್ದ ಯುವಕನಿಗೆ ಡಿಕಿ ಹೊಡೆದಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ರವಿಚಂದ್ರ(30)ಸ್ಥಳದಲ್ಲೇ ಮೃತಪಟ್ಟವರು.

ಬೆಂಗಳೂರಿನ ಅಶೋಕನಗರದ ರಿಚ್‌ಮಂಡ್‌ ಫೆಲೋಶಿಪ್‌ ಸೊಸೈಟಿಯಲ್ಲಿಕೆಲಸ ಮಾಡುತ್ತಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ವಾಸಿಯಾದ ಇವರು, ಗೌರಿಗಣೇಶ ಹಬ್ಬ ಮುಗಿದ ನಂತರ ಶನಿವಾರ 11 ಗಂಟೆ ಸಮಯದಲ್ಲಿಕನಕಪುರ ಮಾರ್ಗವಾಗಿ ಬೆಂಗಳೂರಿಗೆ ತನ್ನ ದ್ವಿಚಕ್ರವಾಹನದಲ್ಲಿಕಲ್ಲಹಳ್ಳಿ ಗೇಟ್‌ ಬಳಿ ಸಾಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಕಲ್ಲಿನ ಲಾರಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗಡೆ ಬಿದ್ದ ಯುವಕನ ಮೇಲೆ ಹರಿದ ಲಾರಿ ಹೆಲ್ಮೆಟ್‌ ಇದ್ದರು ಸಹ ಅರ್ಧ ದೇಹ ಹಾಗೂ ತಲೆಯ ಮೇಲೆ ಹರಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಲಾರಿಯನ್ನು ವಶಕ್ಕೆ ಪಡೆದಿರುವ ಕನಕಪುರ ಸಂಚಾರ ಪೊಲೀಸರು ಮೃತಪಟ್ಟ ಯುವಕನನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿ, ಮೃತನ ಸಂಬಂಧಿಗಳಿಗೆ ವಿಷಯ ಮುಟ್ಟಿಸಿ, ಮೃತನ ಸಂಬಂಧಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಮೃತನ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ವಾರಸುದಾರರಿಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ