ಆ್ಯಪ್ನಗರ

ಅಧಿಕಾರಿಗಳಿಗೆ ಕಿರುಕುಳ ನೀಡಲು ಆರ್‌ಟಿಐ ಬಳಕೆ

ಗುಜರಾತಿನಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡಲು ಆರ್‌ಟಿಐ ಬಳಕೆಯಾಗುತ್ತಿದೆ.

ನವ ಗುಜರಾತ್ ಸಮಯ್ 23 Jun 2016, 3:17 pm
ಅಹಮದಾಬಾದ್: ಸರಕಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಜನರಿಗೆ ಲಭ್ಯವಾಗಲು ನೆರವಾಗುವ ಆರ್‌ಟಿಐ ಗುಜರಾತಿನಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡಲು ಬಳಕೆಯಾಗುತ್ತಿದೆ.
Vijaya Karnataka Web rti has been using to harass babus in gujarat
ಅಧಿಕಾರಿಗಳಿಗೆ ಕಿರುಕುಳ ನೀಡಲು ಆರ್‌ಟಿಐ ಬಳಕೆ


ಮಾಹಿತಿ ಹಕ್ಕು ಕಾರ್ಯಕರ್ತರೆಂದು ಹೇಳಿಕೊಳ್ಳುವ ಕೆಲವರು ಆ ಹಕ್ಕನ್ನು ಅಧಿಕಾರಿಗಳಿಗೆ ಕಿರುಕುಳ ನೀಡಲೆಂದೇ ಬಳಸಿ ಮಾಹಿತಿ ಕೇಳುತ್ತಾರೆ. ಕೆಲವೊಮ್ಮೆ ಆ ಮಾಹಿತಿಗಳನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸುತ್ತದೆ. ಸಿಬ್ಬಂದಿ ಕೊರತೆಯ ಮಧ್ಯೆ ನಿಗದಿತ ಸಮಯದೊಳಗೆ ಸಂಬಂಧಿಸಿದ ಮಾಹಿತಿ ನೀಡದಿದ್ದರೆ ಇಲಾಖೆಯ ಅಧಿಕಾರಿಗಳಿಗೆ ದಂಡ ವಿಧಿಸಲಾಗುತ್ತದೆ.

ಪ್ರತಿ ಇಲಾಖೆಗಳಿಗೆ ಸರಾಸರಿ ತಿಂಗಳಿಗೆ ಸಾವಿರ ಮಾಹಿತಿ ಕೋರಿ ಅರ್ಜಿ ಸಲ್ಲಿಕೆಯಾಗುತ್ತಿವೆ. ಸಲ್ಲಿಕೆಯಾಗುವ ಅರ್ಜಿಗಳ ಕೆಲವು ಮಾದರಿಗಳು ಹೀಗಿರುತ್ತವೆ,

1.ಸರಕಾರಿ ಅಧಿಕಾರಿಯೊಬ್ಬರು ಹಿಂದೂವಾಗಿದ್ದು ಮುಸ್ಲಿಮರ ಥರ ಉಡುಪು, ಗಡ್ಡ ಹೊಂದಿದ್ದಲ್ಲಿ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ, ಇಂಥ ಪ್ರಕರಣಗಳಲ್ಲಿ ವರ್ಗಾವಣೆಯ ನಿಯಮಗಳೇನು?

2. ದೊಡ್ಡದಾಗಿ ಸಿಂಧೂರ ಹಚ್ಚಿಕೊಳ್ಳುವ ಮಹಿಳಾ ಸರಕಾರಿ ಉದ್ಯೋಗಿಯ ವರ್ಗಾವಣೆಗೆ ಏನಾದರೂ ನಿಯಮಗಳಿವೆಯೇ?

3. ಸರಕಾರ ಶುಭಾಶಯ ಸಂದೇಶ ಕಳಿಸಲು ಸಿದ್ಧ ಮಾದರಿ ಇದೆಯೇ, ಸರಕಾರ ಅದಕ್ಕೆ ಎಷ್ಟು ವೆಚ್ಚ ಮಾಡುತ್ತದೆ.

4. ಶಾಸಕಾಂಗ ಕಚೇರಿಗೆ ಪ್ರತಿದಿನ ಎಷ್ಟು ಮಂದಿ ಭೇಟಿ ನೀಡುತ್ತಾರೆ, ಆ ಬಗ್ಗೆ ತಿಂಗಳನುಸಾರ ಮಾಹಿ ನೀಡಿ

ಕೆಲವೊಮ್ಮೆ ಅಧಿಕಾರಿಗಳು ವರ್ಗಾವಣೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಬಹಳಷ್ಟು ಸಮಯ ವ್ಯಯಿಸಬೇಕಾಗುತ್ತದೆ. ಕೆಲವು ಅರ್ಜಿಗಳಲ್ಲಿ 10 ವರ್ಷಕ್ಕಿಂತಲೂ ಹೆಚ್ಚಿನ ಮಾಹಿತಿ ಕೋರಿಕೆ ಇರುತ್ತದೆ. ಕೆಲವರು ಉಚಿತ ಮಾಹಿತಿಗಾಗಿ ಬಿಪಿಎಲ್ ಕಾರ್ಡ್ದಾರರ ಮೂಲಕ ಅರ್ಜಿ ಸಲ್ಲಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ