ಆ್ಯಪ್ನಗರ

‘ಪ್ರೋತ್ಸಾಹದಿಂದ ನಾಟಕದ ಉಳಿವು’

ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಶಿರಾಳಕೊಪ್ಪ ಗುರುತಿಸಿಕೊಂಡಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ.ಜೋಗನ್ ಶಂಕರ್ ಹೇಳಿದರು.

ವಿಕ ಸುದ್ದಿಲೋಕ 8 Mar 2016, 5:36 am
ಶಿರಾಳಕೊಪ್ಪ: ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಶಿರಾಳಕೊಪ್ಪ ಗುರುತಿಸಿಕೊಂಡಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ.ಜೋಗನ್ ಶಂಕರ್ ಹೇಳಿದರು.
Vijaya Karnataka Web
‘ಪ್ರೋತ್ಸಾಹದಿಂದ ನಾಟಕದ ಉಳಿವು’


ಟಿ.ಆರ್.ಗುರುಪ್ರಸಾದ್ ನೇತೃತ್ವದ ಸಿರಿಯಾಳ ಕಲಾ ಕೇಂದ್ರವು, ಮಹಾದೇವಯ್ಯ ಬಯಲು ರಂಗಮಂದಿರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಶಿವರಾತ್ರಿ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರೋತ್ಸಾಹ ಮತ್ತು ಸಹಕಾರವಿದ್ದರೆ ನಾಟಕಕಲೆಗಳನ್ನು ಉಳಿಸಬಹುದು ಎಂದರು.

ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಬಸವಲಿಂಗಯ್ಯ ಮಾತನಾಡಿ, ಭಾರತ ದಲ್ಲಿ 120 ಕೋಟಿ ಜನರಿಗೆ ಇರುವುದು ಒಂದೇ ರಾಷ್ಟ್ರೀಯ ನಾಟಕ ಶಾಲೆ. ಸಣ್ಣ ಸಣ್ಣ ಊರುಗಳಲ್ಲಿ ರಂಗ ಚಟುವಟಿಕೆ ನಡೆದರೆ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದು. ಶಿಕ್ಷಣದ ಜತೆ ಕಲೆ, ಸಂಸ್ಕೃತಿ ಅಳವಡಿಸಿಕೊಳ್ಳದೇ ಹೋದರೆ ನಮ್ಮ ಮೌಲ್ಯಗಳೇ ಅರ್ಥವಾಗುವು ದಿಲ್ಲ ಎಂದರು.

ಸಂಸ್ಕೃತಿಯ ಆಚರಣೆಯಲ್ಲಿ ತಾರತಮ್ಯವನ್ನು ಮಾನವತಾವಾದಿಗಳು ವಿರೋಧಿಸುತ್ತಾ ಬಂದಿದ್ದಾರೆ. ಸಮಬಾಳು ಸಮಾನತೆ ಬಗ್ಗೆ ಹೋರಾಡುತ್ತಾ ಬಂದಿದ್ದಾರೆ. ನಮ್ಮ ಸಾಂಸ್ಕೃತಿಕ ಆಶಯಗಳು ಇದನ್ನೇ ಹೇಳುತ್ತವೆ. ಸಂಸ್ಕೃತಿ ಕಲೆಗಳು ಜನರಲ್ಲಿರುವ ಹಲವಾರು ತಾರತಮ್ಯಗಳನ್ನು ನಾಟಕಗಳ ಮೂಲಕ ನಿವಾರಿಸುತ್ತಾ ಬಂದಿವೆ ಎಂದರು.

ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿದರು.ಇದೇ ಸಂದರ್ಭ ರೋಜಾ ಎ ರಚಿಸಿದ ‘ಅಗ್ರ ಜಂಬೂರ ಹಾರ’ ಬಿಡುಗಡೆ ಮಾಡಲಾಯಿತು. ಸಿರಿಯಾಳ ಕಲಾ ಕೇಂದ್ರದ ಅದ್ಯಕ್ಷ ಟಿ.ರಾಜಶೇಖರ್, ಪ.ಪಂ.ಅಧ್ಯಕ್ಷೆ ಗೀತಾ ಕೇದಾರ್ ಮಾತನಾಡಿದರು. ಪೂಜಾ ಸಂಗಡಿಗರು ಪ್ರಾರ್ಥಿಸಿ, ರಾಘವೇಂದ್ರ ಸ್ವಾಗತಿಸಿದರು. ಆಶಾ ಮತ್ತು ಸಂತೋಷ್ ನಿರೂಪಿಸಿ, ವಿಜಯಕುಮಾರ್ ವಂದಿಸಿದರು. ನಂತರ ಸಾಣೇ ಹಳ್ಳಿ ಶಿವಸಂಚಾರ ತಂಡದಿಂದ ‘ಚಂದ್ರಗುಪ್ತನೆಂಬ ಮೌರ್ಯ’ ನಾಟಕ ಪ್ರದರ್ಶನಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ