ಆ್ಯಪ್ನಗರ

ಒಡೆದು ಆಳಲು ಅವಕಾಶವಿಲ್ಲ: ಶಾಸಕ ಮಧು

ಶಿಕಾರಿಪುರ ತಾಲೂಕನ್ನು ಬರಗಾಲ ಪ್ರದೇಶ ವೆಂದು ಘೋಷಿಸಿ ಪುನಾ ರದ್ದು ಮಾಡಿ ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ಮೋಸ ಮಾಡಿದ ಶಾಸಕ ಬಿ.ವೈ ರಾಘವೇಂದ್ರ ಅವರಿಗೆ ಸೊರಬ ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಶಾಸಕ ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಿಕ ಸುದ್ದಿಲೋಕ 17 Mar 2016, 5:02 am
ಆನವಟ್ಟಿ : ಶಿಕಾರಿಪುರ ತಾಲೂಕನ್ನು ಬರಗಾಲ ಪ್ರದೇಶ ವೆಂದು ಘೋಷಿಸಿ ಪುನಾ ರದ್ದು ಮಾಡಿ ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ಮೋಸ ಮಾಡಿದ ಶಾಸಕ ಬಿ.ವೈ ರಾಘವೇಂದ್ರ ಅವರಿಗೆ ಸೊರಬ ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಶಾಸಕ ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web
ಒಡೆದು ಆಳಲು ಅವಕಾಶವಿಲ್ಲ: ಶಾಸಕ ಮಧು


ಬಂಕಸಾಣ ಗ್ರಾಮದ ವರದಾ- ದಂಡಾವತಿ ಸಂಗಮ ಕ್ಷೇತ್ರದಲ್ಲಿ 1ಕೋಟಿ ರೂ.ವೆಚ್ಚದಲ್ಲಿ ನದಿ ಪಾತ್ರಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ನಿಮ್ಮನ್ನು ಆಯ್ಕೆ ಮಾಡಿರುವ ಹಾಗೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನಕ್ಕೆ ತರಲು ಶ್ರಮಿಸಿದ ಜನತೆಯನ್ನು ಬಗರ್‌ಹುಕುಂ ಸಾಗುವಳಿ ಹೆಸರಲ್ಲಿ ಜೈಲಿಗಟ್ಟಿದ್ದೀರಿ. ಸೊರಬದಲ್ಲಿ ಢೋಂಗಿ ರಾಜಕಾರಣ ಮಾಡಲು ಹೊರಟಿದ್ದೀರಿ. ನೀವು ಸಂಸದರಾಗಿದ್ದಾಗ ಹಾಗೂ ಹಾಲಿ ಸಂಸದ ಬಿಎಸ್‌ವೈ ಅವರು ತಾಲೂಕಿಗೆ ಎಷ್ಟು ಅನುದಾನ ತಂದಿದ್ದಾರೆ ಎಂದು ಮೊದಲು ತಿಳಿಸಬೇಕೆಂದು ಸವಾಲು ಹಾಕಿದರು.

ಸೊರಬ ಜನತೆ ಅಭಿವೃದ್ಧಿಗೆ ಬದ್ಧವಿರುವು ದಾಗಿ ಹೇಳಿದ ಮಧು, ಕಚವಿ ಏತ ನೀರಾವರಿ ಯೋಜನೆ ಬಂಗಾರಪ್ಪ ಅವರ ಕನಸಿನ ಕೂಸು. ಮಾಜಿ ಸಚಿವ ಹಾಲಪ್ಪ ಅವರ ಕಾರ‌್ಯ ವೈಫಲ್ಯ ದಿಂದಾಗಿ ಕಾಮಗಾರಿ ಆರಂಭ ಗೊಂಡಿರಲಿಲ್ಲ. ಯೋಜನೆಗೆ ಅನುದಾನ ಮಂಜೂರಾಗಿ ಕಾಮಗಾರಿ ಆರಂಭವಾಗುವ ಹಂತದಲ್ಲಿರು ವಾಗ ರಾಜಕೀಯ ಲಾಭ ಪಡೆಯಲು ಯತ್ನಿಸು ತ್ತಿರುವುದು ನಾಚಿಕೆಗೇಡು. ತಾಲೂಕಿಂದ ಸರ್ವಪಕ್ಷಗಳ ಮುಖಂಡರ ನಿಯೋಗವನ್ನು ಜಲಸಂಪನ್ಮೂಲ ಸಚಿವರ ಬಳಿ ಕರೆದೊಯ್ದು ಹೆಚ್ಚುವರಿ ಅನುದಾನಕ್ಕಾಗಿ ಒತ್ತಾಯಿಸಲಾಗಿದೆ ಎಂದರು.

ಶಾಸಕರಷ್ಟೇ ಜವಾಬ್ದಾರಿ ಸಂಸದರಿಗೂ ಇದೆ. ಇದನ್ನು ಮರೆತು ಬೆಂಗಳೂರಲ್ಲಿ ಠಿಕಾಣಿ ಹೂಡಿರುವ ಯಡಿಯೂರಪ್ಪ ಅವರು ತಾಲೂಕು ಅಭಿವೃದ್ಧಿ ಮಾಡಲು ಮರೆತಿದ್ದಾರಾ ಎಂದು ಲೇವಡಿ ಮಾಡಿದ ಮಧು, ತಾಲೂಕಿನ ಅಭಿವೃದ್ಧಿ ಕಾರ‌್ಯ ಕುಂಠಿತಗೊಳ್ಳಲು ಹಾಲಪ್ಪ ನವರು ಕೂಡ ಕಾರಣ ಎಂದು ಆರೋಪಿಸಿ ದರು. ಸೊರಬ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗು ವುದು. ಸೊರಬ, ಆನವಟ್ಟಿ ರಸ್ತೆ ವಿಸ್ತರಣೆಗೂ ಆದ್ಯತೆ ನೀಡಲಾಗುವುದು ಎಂದರು.

ಜಡೆ ಗ್ರಾ.ಪಂ.ಅಧ್ಯಕ್ಷ ಗಂಗಮ್ಮ ಬಸವ ರಾಜ್ ಅಧ್ಯಕ್ಷತೆ ವಹಿಸಿದ್ದರು. ಲಕ್ಕವಳ್ಳಿ ಜೈನ ಮಠದ ವೃಷಭಸೇನಾ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ ಸದಸ್ಯ ಶಿವಲಿಂಗ ಗೌಡರು, ತಾ.ಪಂ ಅಧ್ಯಕ್ಷ ಜಯಶೀಲಪ್ಪ, ಶ್ರೀಧರ್ ವೃತ್ತಿಕೊಪ್ಪ, ಗ್ರಾ.ಪಂ ಸದಸ್ಯ ಶಿವಾನಿ ಹನುಮಂತಪ್ಪ, ರೇಣುಕಾ, ಗಣಪತಿ, ವಿಶಾ ಲಾಕ್ಷಿ, ಜರ್ಮಲೆ ಚಂದ್ರಣ್ಣ, ಸುರೇಶ್ ಒಡೆಯರ್, ಮೋಹನ್‌ಗೌಡ, ಬಸವಂತಪ್ಪ ಕೋಟೆ, ರಾಜುಗೌಡ, ಬಸವರಾಜಗೌಡ, ಸ್ವಾಮಿಗೌಡ, ಮಹಾಬಲೇಶಗೌಡ, ಹಾಲ ಸ್ವಾಮಿ, ವೀರಭದ್ರಗೌಡ, ನಾಗರಾಜ ಗೌಡ, ಸಂಜೀವ ಲಕ್ಕವಳ್ಳಿ, ರುದ್ರಪ್ಪ ಕಮರೂರು, ಕಲಂದರ್ ಸಾಬ್, ಶಂಕರ್, ಶಶಿಧರ ಮತ್ತಿತರರು ಹಾಜರಿದ್ದರು.

---------
ದಂಡಾವತಿ ಯೋಜನೆ ಹೆಸ ರಲ್ಲಿ ರಾಜಕೀಯ ಲಾಭ ಮಾಡಿಕೊಂಡು ಜನರನ್ನು ಭೀತಿಗೊಳಿಸಲು ಹೊರಟಿರುವುದು ಹೇಯಕರ. ತಾಲೂಕಿನ ಯಾವುದೇ ಯೋಜನೆಗೆ ಯಾವುದೇ ಭಾಗದ ಜನರನ್ನು ಮುಳುಗಿಸಲು ಬಿಡುವುದಿಲ್ಲ. ಬ್ಯಾತನಾಳು ಯೋಜನೆ ಹೆಸರಲ್ಲಿ ತಾಲೂಕಿನ ಒಂದು ಭಾಗದ ಜನರನ್ನು ಮುಳುಗಿಸಲು ಹೊರಟಿದ್ದನ್ನು ತಡೆದಿದ್ದು ಮಾಜಿ ಸಿಎಂ ಎಸ್. ಬಂಗಾರಪ್ಪ. ಇದನ್ನು ಜನತೆ ಹಾಗೂ ಜನ ಪ್ರತಿನಿಧಿಗಳು ಅರಿಯಬೇಕು. ರಾಜಕಾರಣ ಹಿತ ಕ್ಕಾಗಿ ತಾಲೂಕಿನ ಜನತೆಯನ್ನು ಒಡೆದು ಆಳಲು ಅವಕಾಶ ನೀಡುವುದಿಲ್ಲ.
- ಮಧುಬಂಗಾರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ