ಆ್ಯಪ್ನಗರ

ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ

ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪನಮನೆ ಯಲ್ಲಿ ಅರಣ್ಯ ಇಲಾಖೆಯಿಂದ ವಾಸದ ಮನೆ ನೆಲಸಮಗೊಳಿಸಿದ ಕ್ರಮದಿಂದ ಮನನೊಂದ ರೈತ ಬುಧವಾರ ಬೆಳಗ್ಗೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ವಿಕ ಸುದ್ದಿಲೋಕ 31 Mar 2016, 5:43 am
ಹೊಸನಗರ: ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪನಮನೆ ಯಲ್ಲಿ ಅರಣ್ಯ ಇಲಾಖೆಯಿಂದ ವಾಸದ ಮನೆ ನೆಲಸಮಗೊಳಿಸಿದ ಕ್ರಮದಿಂದ ಮನನೊಂದ ರೈತ ಬುಧವಾರ ಬೆಳಗ್ಗೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Vijaya Karnataka Web
ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ


ವಿಷ ಸೇವಿಸಿ ಅಸ್ವಸ್ಥಗೊಂಡ ಉಮೇಶಗೌಡ(48) ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶಗೌಡ ಅವರು 2004ರಲ್ಲಿ ಬಪ್ಪನಮನೆ ಗ್ರಾಮದ ಸರ್ವೆ ನಂಬರ್ 203ರಲ್ಲಿ ಸಾಗುವಳಿ ಮಾಡಿದ 1.10 ಎಕರೆ ಭೂಮಿ ಬಗರ್‌ಹುಕುಂ ಅರ್ಜಿ ಮೇರೆಗೆ ಮಂಜೂರಾಗಿದ್ದು, ಹೆಚ್ಚುವರಿ ಭೂಮಿ ಮಂಜೂರಿಗೆ 2009ರಲ್ಲಿ ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಿದ್ದರು.

ನೋಟಿಸ್ ನೀಡಿಲ್ಲ: ಯಾವುದೇ ಪೂರ್ವ ಮಾಹಿತಿ, ನೋಟಿಸ್ ನೀಡದೆ ಪೊಲೀಸ್ ಸುಪರ್ದಿಯಲ್ಲಿ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ವಾಸದ ಮನೆ ತೆರವುಗೊಳಿಸಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು ವಿನಂತಿಸಿ ಕೊಂಡರೂ ಅಧಿಕಾರಿಗಳು ಸ್ಪಂದಿಸಿಲ್ಲ. ತೆರವು ಬಳಿಕ ಮನೆಯಲ್ಲಿದ್ದ ದಿನಬಳಕೆ ವಸ್ತು, ಪಾತ್ರೆಗಳನ್ನೂ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದು ಅಧಿಕಾರಿಗಳ ಎದುರೇ ವಿಷ ಸೇವಿಸಿದರು ಎಂದು ಪುತ್ರ ಪ್ರಶಾಂತ ಹಾಗೂ ಪತ್ನಿ ಪ್ರೇಮಾ ತಿಳಿಸಿದ್ದಾರೆ.

-----------
ಕಾನೂನು ಪರಿಧಿಯಲ್ಲಿ ಕ್ರಮ ರೈತ ದಂಪತಿ ಉಮೇಶಗೌಡ ಮತ್ತು ಪ್ರೇಮಾ ಅವರಿಗೆ ಮಂಜೂರಾಗಿ ರುವ ಜಾಗದ ಪಕ್ಕದಲ್ಲಿ ಒತ್ತುವರಿ ಮಾಡಿ ಸಾಗುವಳಿ ಮಾಡಿರುವ 20 ಗುಂಟೆ ಜಾಗವನ್ನು ಇಲಾಖೆ ತೆರವುಗೊಳಿಸಿಲ್ಲ. ಪ್ರಸ್ತುತ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಜಾಗ ಹೊಸದಾಗಿ ಒತ್ತುವರಿ ಆಗಿತ್ತು. ಸರಕಾರದ ಸುತ್ತೋಲೆ ಹಾಗೂ ಅರಣ್ಯ ಹಕ್ಕು ಸಮಿತಿ ಕಾಯಿದೆಗನು ಗುಣವಾಗಿಯೇ ತೆರವು ಕಾರ‌್ಯಾಚರಣೆ ನಡೆಸಲಾಗಿದೆ.
- ಸತೀಶ್ ಪಿ.ಹೆಗಡೆ,
ಎಸಿಎಫ್,ಹೊಸನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ