ಆ್ಯಪ್ನಗರ

ಶೀಘ್ರವೇ ವಿಐಎಸ್‌ಎಲ್‌ಗೆ ಕಡಿಮೆ ದರದಲ್ಲಿ ಅದಿರು: ಸಚಿವ

ಸಾರ್ವಜನಿಕ ವಲಯದ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ, ಉಕ್ಕು ಕಾರ್ಖಾನೆಗೆ ಕಡಿಮೆ ದರದಲ್ಲಿ ಅದಿರು ನೀಡುವ ಜತೆಗೆ ಬಳ್ಳಾರಿಯ ರಮಣದುರ್ಗ ರೇಂಜಿನ 245 ಹೆಕ್ಟೆರ್ ಅದಿರುಗಣಿ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವು ದೆಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಹೇಳಿದರು.

ವಿಕ ಸುದ್ದಿಲೋಕ 11 Apr 2016, 5:17 am
ಭದ್ರಾವತಿ: ಸಾರ್ವಜನಿಕ ವಲಯದ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ, ಉಕ್ಕು ಕಾರ್ಖಾನೆಗೆ ಕಡಿಮೆ ದರದಲ್ಲಿ ಅದಿರು ನೀಡುವ ಜತೆಗೆ ಬಳ್ಳಾರಿಯ ರಮಣದುರ್ಗ ರೇಂಜಿನ 245 ಹೆಕ್ಟೆರ್ ಅದಿರುಗಣಿ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವು ದೆಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಹೇಳಿದರು.
Vijaya Karnataka Web
ಶೀಘ್ರವೇ ವಿಐಎಸ್‌ಎಲ್‌ಗೆ ಕಡಿಮೆ ದರದಲ್ಲಿ ಅದಿರು: ಸಚಿವ


ಅವರು ಭಾನುವಾರ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿ ಬ್ಲಾಸ್ಟ್ ಫರ‌್ನೇಸ್ ಮತ್ತು ಫೋರ್ಜ್ ಪ್ಲಾಂಟ್‌ಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್‌ಎಂವಿ ಕಟ್ಟಿದ ಕಾರ್ಖಾನೆಯ ಸ್ಥಿತಿಗತಿ ಗಮನಿಸಿ, ಇದನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಸಲು ವಾಗಿ ಸ್ವಯಂ ಪ್ರೇರಿತವಾಗಿ ಆಗಮಿಸಿ ದ್ದೇನೆ. ಇಲ್ಲಿನ ಆಗುಹೋಗುಗಳನ್ನು ಅಧಿಕಾರಿಗಳು ಮತ್ತು ಕಾರ್ಮಿಕರಿಂದ ಅರಿತ್ತಿದ್ದೇನೆ. ಕಾರ್ಖಾನೆಗೆ ಕಚ್ಚಾವಸ್ತಗಳ ಕೊರತೆ ಇದೆ. ಜಾರ್ಖಂಡ್ ಹಾಗೂ ಛತ್ತೀಸ್‌ಘಡದಿಂದ ಪ್ರತಿ ಟನ್ ಕಬ್ಬಿಣದ ಅದಿರಿಗೆ ಸುಮಾರು 5500ರಿಂದ 5700 ರೂ. ನೀಡಿ ಅದಿರು ಖರೀದಿಸಲಾಗುತ್ತಿದೆ. ಇದರಿಂದ ಕಾರ್ಖಾನೆಗೆ ಭಾರಿ ನಷ್ಟವಾಗುತ್ತಿದೆ. ಹಾಗಾಗಿ ರಾಜ್ಯ ಸರಕಾರದ ಅಧೀನಕ್ಕೊಳಪಟ್ಟ ಅದಿರನ್ನು ಪ್ರತಿ ಟನ್‌ಗೆ ಕನಿಷ್ಟ 2400ರಿಂದ 2500 ರೂ.ಗೆ ಕಾರ್ಖಾನೆಯ ಬಾಗಿಲಿಗೆ ಬರುವಂತೆ ಕೂಡಲೇ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಏ.20ರೊಳಗೆ ಬೆಂಗಳೂರಿನಲ್ಲಿ ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರ ಸಭೆ ಕರೆಯಲಾಗುವುದು ಎಂದರು.

ರಾಜ್ಯದಲ್ಲೆ ದೊರೆಯುವ ಅದಿರು ಬಳಸಿಕೊಂಡು ಉತ್ತಮ ಗುಣಮಟ್ಟದ ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕಾ ಗಿದೆ. ಕಾರ್ಖಾನೆ ಉಳಿದರೆ ಇಲ್ಲಿನ ಜನ ಜೀವನ, ವಹಿವಾಟು, ಕಾರ್ಮಿಕರ ಮತ್ತು ಕುಟುಂಬದವರ ಬದುಕು ಹಸನಾಗುತ್ತದೆ. ಇದೇ ಸಮಯದಲ್ಲಿ ಆಡಳಿತ ಮಂಡಳಿ, ಕಾರ್ಮಿಕ ಸಂಘ ಹಾಗೂ ಅಧಿಕಾರಿಗಳ ಸಂಘಗಳೂ ಗಣಿ ಮಂಜೂರಿಗೆ ಶ್ರಮಿಸಬೇಕೆಂದು ಕಿವಿ ಮಾತು ಹೇಳಿದರು.

ಈ ಸಂದರ್ಭ ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಉಪ ಮೇಯರ್ ಮಹಮ್ಮದ್ ಸನಾವುಲ್ಲ, ಕಾರ್ಖಾನೆಯ ಜನರಲ್ ಮ್ಯಾನೇಜರ್‌ಗಳಾದ ವಿ.ಎಸ್.ಹೆಗಡೆ, ರಾಮಚಂದ್ರನ್, ಹರೀಂದ್ರ ನಾಥ್, ಡಿಜಿಎಂ ಮಹಾಲಿಂಗಂ, ಅಧಿಕಾರಿಗಳಾದ ವಿಶ್ವನಾಥನ್, ಗೋಸ್ವಾಮಿ, ಸುರೇಶ್‌ಭಟ್, ಅಧಿಕಾರಿಗಳ ಸಂಘದ ಅಧ್ಯಕ್ಷ ರವಿಶಂಕರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್.ಚಂದ್ರಹಾಸ್, ಮುಖಂಡರುಗಳಾದ ಡಾ.ಎನ್.ಟಿ.ಸಿ. ನಾಗೇಶ್, ಪ್ರಕಾಶ್, ಬಸವಂತಪ್ಪ, ಟಿ.ಚಂದ್ರೇಗೌಡ ಮುಂತಾದವರು ಇದ್ದರು.

ಕಾರ್ಖಾನೆಯ ಉನ್ನತ ಮಟ್ಟದ ಅಧಿಕಾರಿಗಳ, ಕಾರ್ಮಿಕರ, ಅಧಿಕಾರಿಗಳ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರತ್ಯೇಕ ಸಭೆಗಳನ್ನು ಸಚಿವರು ನಡೆಸಿದರು. ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್.ಚಂದ್ರಹಾಸ ಮತ್ತು ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ರಮಣದುರ್ಗ ರೇಂಜ್‌ನ ಅದಿರುಗಣಿ ಯನ್ನು ರಾಜ್ಯ ಸರಕಾರ ನೀಡಿದ್ದಲ್ಲಿ ಕೇಂದ್ರ ಸರಕಾರ ಕಾರ್ಖಾನೆ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಲಿದೆ. ಈ ಕುರಿತು ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ಭರವಸೆ ನೀಡಿದ್ದಾರೆ. ಹಾಗಾಗಿ ಕೂಡಲೆ ಅದಿರುಗಣಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ