ಆ್ಯಪ್ನಗರ

ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆದರೆ ಕ್ರಮ: ಕಾಗೋಡು

ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಆರೋಗ್ಯ ನೆರವು ಕೊಡುವ ಕ್ಷೇತ್ರವಾಗಬೇಕೆಂಬ ಉದ್ದೇಶದಿಂದ ಸುಸಜ್ಜಿತ ಆಸ್ಪತ್ರೆಗೆ ಅಗತ್ಯ ಸೇವೆ ಒದಗಿಸಲು ಯತ್ನಿಸುವುದಾಗಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ವಿಕ ಸುದ್ದಿಲೋಕ 19 Jun 2016, 9:00 am

ಸಾಗರ: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಆರೋಗ್ಯ ನೆರವು ಕೊಡುವ ಕ್ಷೇತ್ರವಾಗಬೇಕೆಂಬ ಉದ್ದೇಶದಿಂದ ಸುಸಜ್ಜಿತ ಆಸ್ಪತ್ರೆಗೆ ಅಗತ್ಯ ಸೇವೆ ಒದಗಿಸಲು ಯತ್ನಿಸುವುದಾಗಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಪದ್ಧತಿ ಮತ್ತು ಸುಧಾರಣಾ ಯೋಜನೆ ಅಡಿ ನಿರ್ಮಿಸಿರುವ 60 ಅಡಿ ಸಾಮರ್ಥ್ಯ‌ವುಳ್ಳ ತಾಯಿ-ಮಗು ಆಸ್ಪತ್ರೆ, ಉಪವಿಭಾಗೀಯ ಆಸ್ಪತ್ರೆಯನ್ನು 150ಹಾಸಿಗೆ ಸಾಮರ್ಥ್ಯ‌ಕ್ಕೆ ಹೆಚ್ಚಿಸುವ ಕಾಮಗಾರಿ ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಾಯಿಮಗು ಆಸ್ಪತ್ರೆಯನ್ನು 10ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇನ್ನು 5ಕೋಟಿ ರೂ. ಅನುದಾನ ಕೇಳಲಾಗಿದೆ. ಜತೆಗೆ ಉಪವಿಭಾಗೀಯ ಆಸ್ಪತ್ರೆಯನ್ನು 5ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಸನ್ನಿವೇಶಕ್ಕೆ ಪೂರಕವಾಗಿ ಅಧಿಕಾರಿಗಳು ಒದಗಿದರೆ ಕೆಲಸವನ್ನು ವೇಗವಾಗಿ ಮುಗಿಸಲು ಸಾಧ್ಯ. ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಆರೋಗ್ಯ ಸಚಿವರಿಗೆ ಅನೇಕ ಬಾರಿ ಗದರಿಸಿದ್ದೇನೆ. ಅವರು ಸಹ ಏನೂ ತಪ್ಪು ತಿಳಿದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್‌.ಕುಮಾರ್‌, ಉಪಾಧ್ಯಕ್ಷೆ ವೇದಾ ವಿಜಯಮೂರ್ತಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು.

ನಗರಸಭಾಧ್ಯಕ್ಷ ಆರ್‌.ಗಣಾಧೀಶ್‌ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾಪಂಚಾಯಿತಿ ಸದಸ್ಯರಾದ ಅನಿತಾ ಕುಮಾರಿ, ರಾಜಶೇಖರ್‌ ಗಾಳಿಪುರ, ಆರ್‌.ಸಿ.ಮಂಜುನಾಥ್‌, ತಾ.ಪಂ.ಉಪಾಧ್ಯಕ್ಷ ಪರಶುರಾಮ್‌, ನಗರಸಭೆ ಉಪಾಧ್ಯಕ್ಷ ಐ.ಎನ್‌.ಸುರೇಶಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಾಥ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‌ , ಜಯರಾಮ, ರಾಮೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಸುರಗಿಹಳ್ಳ, ತಾಪಂ ಹಾಗೂ ನಗರಸಭೆ ಸದಸ್ಯರು ಇತರರು ಹಾಜರಿದ್ದರು. ಕವಿತಾ ಪ್ರಾರ್ಥಿಸಿ, ಡಾ. ಕೆ.ಪಿ.ಅಚ್ಚುತ್‌ ಸ್ವಾಗತಿಸಿದರು. ಡಾ. ಪ್ರಕಾಶ್‌ ಬೋಸ್ಲೆ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಿದ್ದನಗೌಡ ಪಾಟೀಲ್‌ ವಂದಿಸಿದರು. ದೀಪಕ್‌ ಸಾಗರ ನಿರೂಪಿಸಿದರು.

-----------

Vijaya Karnataka Web
ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆದರೆ ಕ್ರಮ: ಕಾಗೋಡು

ಬಿಪಿಎಲ್‌ ಕಾರ್ಡ್‌ದಾರರಿಗೆ ಆಸ್ಪತ್ರೆಯಲ್ಲೇ ಅಗತ್ಯ ಔಷಧ ಕೊಡಬೇಕು. ಒಂದೊಮ್ಮೆ ಅಗತ್ಯವಿರುವ ಔಷಧವನ್ನು ಹೊರಗಿನಿಂದ ತರಿಸಿದರೆ ಅದರ ವೆಚ್ಚವನ್ನು ಆಸ್ಪತ್ರೆಯಲ್ಲಿ ಸಂಗ್ರಹಿಸುವ ಬಳಕೆದಾರರ ವೆಚ್ಚದಲ್ಲಿ ಭರಿಸಬೇಕು. ನಿಯಮಕ್ಕೆ ವಿರುದ್ಧವಾಗಿ ಖಾಸಗಿ ಔಷಧ ಅಂಗಡಿಗಳಿಂದ ಚೀಟಿ ಕೊಟ್ಟು ಔಷಧ ತರಿಸುವುದು ಗಮನಕ್ಕೆ ಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ.

*ಕಾಗೋಡುತಿಮ್ಮಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ