ಆ್ಯಪ್ನಗರ

ರಾಜ್ಯದಲ್ಲಿ ತುಘಲಕ್‌ ಆಡಳಿತ: ಬಿ.ಎಸ್‌.ಯಡಿಯೂರಪ್ಪ

ರಾಜ್ಯದಲ್ಲಿ ತುಘಲಕ್‌ ಆಡಳಿತ ನಡೆಯುತ್ತಿದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಮೊಂಡುವಾದವನ್ನು ಮುಂದುವರಿಸಿದ್ದಾರೆ. ಪ್ರಜಾಹಿತ ಕಾಪಾಡದ ಸರ್ಕಾರ ಸಚಿವ ಜಾರ್ಜ್‌ ಅವರನ್ನು ಕಾಪಾಡುತ್ತಿರುವುದು ಶೋಚನೀಯ ಎಂದು ಸಂಸದ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವಿಕ ಸುದ್ದಿಲೋಕ 15 Jul 2016, 9:00 am

ಸಾಗರ: ರಾಜ್ಯದಲ್ಲಿ ತುಘಲಕ್‌ ಆಡಳಿತ ನಡೆಯುತ್ತಿದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಮೊಂಡುವಾದವನ್ನು ಮುಂದುವರಿಸಿದ್ದಾರೆ. ಪ್ರಜಾಹಿತ ಕಾಪಾಡದ ಸರ್ಕಾರ ಸಚಿವ ಜಾರ್ಜ್‌ ಅವರನ್ನು ಕಾಪಾಡುತ್ತಿರುವುದು ಶೋಚನೀಯ ಎಂದು ಸಂಸದ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಭದ್ರಕಾಳಿ ಸಭಾಭವನದಲ್ಲಿ ಗುರುವಾರ ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ರಾಜ್ಯ ಸರಕಾರ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಹಿಂದೆ ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷ ರಾಗಿದ್ದಾಗ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಒಂದು ಪೈಸೆ ನೀಡುತ್ತಿಲ್ಲ ಎಂದು ಅವರೇ ಹೇಳಿದ್ದರು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ತಮ್ಮ ವೈಯಕ್ತಿಕ ಖಾತೆಯಲ್ಲಿ ಸಾವಿರಾರು ಕೋಟಿ ರೂ. ಹಣ ಇರಿಸಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸರಕಾರ ಇದೆಯೋ ಸತ್ತುಹೋಗಿದೆಯೋ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರದ ರಸ್ತೆಗಳಲ್ಲಿ ಭತ್ತದ ಸಸಿಗಳನ್ನು ನೆಟ್ಟರೆ ಊರಿನವರಿಗೆ ಸಾಕಾಗುವಷ್ಟು ಭತ್ತ ಬೆಳೆಯಬಹುದು. ನಗರ ವ್ಯಾಪ್ತಿ ರಸ್ತೆಗಳು ಗುಂಡಿಗಳಿಂದ ತುಂಬಿದ್ದು , ಹೆಂಗಸರು , ಮಕ್ಕಳು ಸಂಚರಿಸಲಾಗದ ಸ್ಥಿತಿ ಇದೆ ಎಂದರು.

ಇದೇ ಸಂದರ್ಭ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ರಾಗಿ ಪ್ರಸನ್ನ ಕೆರೆಕೈ ಹಾಗೂ ನಗರ ಘಟಕದ ಅಧ್ಯಕ್ಷ ರಾಗಿ ಶ್ರೀನಿವಾಸ್‌ ಮೇಸ್ತ್ರಿ ಪದಗ್ರಹಣ ಮಾಡಿ ಮಾತನಾಡಿದರು. ಮಾಜಿ ಸಚಿವ ಎಚ್‌.ಹಾಲಪ್ಪ, ಜಿಲ್ಲಾಧ್ಯಕ್ಷ ರುದ್ರೇಗೌಡ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಚೇತನರಾಜ್‌, ಸತೀಶ್‌ ಬಾಬು ಮಾತನಾಡಿದರು. ಪಕ್ಷ ದ ವತಿಯಿಂದ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿಗಳಾದ ಚೆನ್ನಬಸಪ್ಪ, ಡಿ.ಎಸ್‌.ಅರುಣ್‌, ಗುರುಮೂರ್ತಿ, ಟಿ.ಡಿ.ಮೇಘರಾಜ್‌, ಭಾರತಿ ಶೆಟ್ಟಿ, ಶಾಂತವೀರಪ್ಪ ಗೌಡ, ಅರಗ ಜ್ಞಾನೇಂದ್ರ, ಎಸ್‌.ದತ್ತಾತ್ರಿ, ಪವಿತ್ರಾ ರಾಮಯ್ಯ, ಯು.ಎಚ್‌.ರಾಮಪ್ಪ, ಜಗದೀಶ್‌ ಒಡೆಯರ್‌, ಕೆ.ಎನ್‌.ಶ್ರೀಧರ್‌, ಹೃಷಿಕೇಶ ಪೈ, ಭವಾನಿರಾವ್‌, ಸಿ.ಎನ್‌. ಪರಮೇಶ್ವರ್‌, ಭೀಮನೇರಿ ಶಿವಪ್ಪ, ರಾಜಶೇಖರ ಗಾಳಿಪುರ ಇನ್ನಿತರರು ಹಾಜರಿದ್ದರು. ನಂದಿನಿ ಬಸವರಾಜ್‌ ಪ್ರಾರ್ಥಿಸಿದರು. ವ.ಶಂ.ರಾಮಚಂದ್ರ ಭಟ್‌ ಸ್ವಾಗತಿಸಿದರು. ರವೀಶ್‌ ವಂದಿಸಿದರು. ಎಲ್‌.ವಿ.ಅಕ್ಷ ರ ನಿರೂಪಿಸಿದರು.

ತುಮರಿಯ ಸೇತುವೆ

Vijaya Karnataka Web
ರಾಜ್ಯದಲ್ಲಿ ತುಘಲಕ್‌ ಆಡಳಿತ: ಬಿ.ಎಸ್‌.ಯಡಿಯೂರಪ್ಪ

ತುಮರಿಯ ಸೇತುವೆಗೆ ಸಂಬಂಧಿಸಿದಂತೆ ಎಲ್ಲ ಕರ್ತವ್ಯ ಮಾಡಲು ಪ್ರಾಮಾಣಿಕ ಯತ್ನ ಮಾಡುತ್ತೇನೆ. 11 ಮೀಟರ್‌ ಅಗಲದ ಹೆದ್ದಾರಿ ಹಾಗೂ ಸೇತುವೆ ನಿರ್ಮಾಣಕ್ಕೆ ರೂ 230 ಕೋಟಿ ಅಂದಾಜು ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. 16 ಮೀಟರ್‌ ಅಗಲದ ಹೆದ್ದಾರಿ ಹಾಗೂ ರೂ 600 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧವಿದೆ. ಹೊಸ ಟೆಂಡರ್‌ ಕರೆಯಲು ಸಿದ್ಧತೆಯಾಗಲಿದೆ. ಈ ಸಂಬಂಧ ಮುಂದಿನ 2 ತಿಂಗಳ ಅವಧಿಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಆಹ್ವಾನಿಸಿ ಶಂಕುಸ್ಥಾಪನೆ ಕಾರ‍್ಯಕ್ರಮ ನೆರವೇರಿಸಲಾಗುವುದು.
-ಸಂಸದ ಬಿ.ಎಸ್‌.ಯಡಿಯೂರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ