ರಿಪ್ಪನ್ಪೇಟೆ: ಪಟ್ಟಣದಲ್ಲಿ ಸೋಮವಾರ ನೋಟ್ರದ್ಧತಿ ಪರ ಮತ್ತು ವಿರೋಧವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಗಳು ಪ್ರತ್ಯೇಕವಾಗಿ ನಡೆಸಿದ ಪ್ರತಿಭಟನೆ, ಸಂಭ್ರಮಾಚರಣೆಯಲ್ಲಿ ಅನುಮತಿ ಪಡೆಯದೆ ಧ್ವನಿವರ್ಧಕ ಬಳಸಿರುವುದರ ವಿರುದ್ಧ ಜನಜಾಗೃತಿ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಪಟ್ಟಣದ ಪೊಲೀಸ್ ಠಾಣೆ ಎದುರು ತಲೆಕೆಳಗಾಗಿ ನಿಂತು ಪ್ರತಿಭಟಿಸಿದರು.
ಆನಂತರ ಮಾತನಾಡಿ, ಶ್ರೀಮಂತ-ಬಡವರಿಗೆ ಪ್ರತ್ಯೇಕ ಕಾನೂನಿನ ವ್ಯವಸ್ಥೆಯಿಲ್ಲ. ದೇಶದ ಸಾಮಾನ್ಯ ಜನ ಯಾವುದೇ ಕಾರ್ಯಕ್ರಮ ನಿರ್ವಹಣೆ ಮಾಡಬೇಕಾದರೂ ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕಕ್ಕೆ ಅನುಮತಿ ಪಡೆಯಬೇಕೆಂದು ನಿಯಮ ರೂಪಿಸಿದ್ದರೂ, ಈ ಎರಡೂ ರಾಜಕೀಯ ಪಕ್ಷ ಗಳು ನಿಯಮ ಗಾಳಿಗೆ ತೂರಿವೆ. ಕಾನೂನು ಅನುಷ್ಠಾನಗೊಳಿಸುವ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ ್ಯವಹಿಸಿದೆ ಎಂದರು.