ಆ್ಯಪ್ನಗರ

ಒತ್ತುವರಿ: ಬೆಲೆಬಾಳುವ ಮರಗಳ ನಾಶ

ಗವಟೂರು ಮೀಸಲು ಅರಣ್ಯ ಪ್ರದೇಶದಲ್ಲಿ ರಾತೋರಾತ್ರಿ ಜೆಸಿಬಿ ಯಂತ್ರ ಬಳಸಿ ಕಾಡು ಜಾತಿಯ ಮರಗಿಡಗಳನ್ನು ನಾಶಪಡಿಸಿ ಒತ್ತುವರಿ ಮಾಡಲಾಗಿದೆ.

ವಿಕ ಸುದ್ದಿಲೋಕ 30 Jan 2017, 9:00 am

ರಿಪ್ಪನ್‌ಪೇಟೆ: ಗವಟೂರು ಮೀಸಲು ಅರಣ್ಯ ಪ್ರದೇಶದಲ್ಲಿ ರಾತೋರಾತ್ರಿ ಜೆಸಿಬಿ ಯಂತ್ರ ಬಳಸಿ ಕಾಡು ಜಾತಿಯ ಮರಗಿಡಗಳನ್ನು ನಾಶಪಡಿಸಿ ಒತ್ತುವರಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿರಂಜನ್‌ ಎಂಬುವವನ ವಿರುದ್ಧ ದೂರು ದಾಖಲಾಗಿದೆ. ಗವಟೂರು ಗ್ರಾಮದ ಮೀಸಲು ಅರಣ್ಯ ಸರ್ವೆ ನಂಬರ್‌ 50ರಲ್ಲಿನ ಜಾಗವನ್ನು ಒತ್ತುವರಿ ಮಾಡುವ ನೆಪದಲ್ಲಿ ಬೆಲೆಬಾಳುವ ಮರಗಳನ್ನು ಕೆಡವಿ ಸಾಗುವಳಿಗೆ ಮುಂದಾಗಿದ್ದು, ಗ್ರಾಮಸ್ಥರ ದೂರು ಆಧರಿಸಿ ಉಪವಲಯ ಅರಣ್ಯಾಧಿಕಾರಿ ನಾಗೇಶ್‌ ಪ್ರಕರಣ ದಾಖಲಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಸುಮಾರು ಎರಡು ಎಕರೆ ಅರಣ್ಯ ಜಾಗವನ್ನು ಆಕ್ರಮ ಒತ್ತುವರಿ ಮಾಡಲು ಲಕ್ಷಾಂತರ ರೂ. ಮೌಲ್ಯದ ಕಾಡುಜಾತಿಯ ಮರಗಳನ್ನು ಬುಡಸಹಿತ ಕಿತ್ತುಹಾಕಿರುವುದು ಕಂಡುಬಂದಿದೆ.

ಇಲಾಖೆಗೆ ತಲೆನೋವು:

Vijaya Karnataka Web
ಒತ್ತುವರಿ: ಬೆಲೆಬಾಳುವ ಮರಗಳ ನಾಶ

ಸಚಿವ ಕಾಗೋಡು ತಿಮ್ಮಪ್ಪ ಅವರ ಸ್ವ ಕ್ಷೇತ್ರದಲ್ಲಿ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು, ಅರಣ್ಯ ಇಲಾಖೆಯವರಿಗೆ ತಲೆನೋವು ತಂದಿದೆ. ಒಂದುಕಡೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾದರೆ ವರ್ಗಾವಣೆಯ ಭಯ ಕಾಡುವಂತಾಗಿದೆ. ಮತ್ತೊಂದುಕಡೆ ಪರಿಸರವಾದಿಗಳಿಂದ ಅರಣ್ಯಾಧಿಕಾರಿಗಳ ಮೇಲೆ ಪ್ರತಿಭಟನೆಯ ಬೆದರಿಕೆ ಕಾಡುತ್ತಿದೆ. ಪರಿಸ್ಥಿತಿ ಬೆಕ್ಕಿಗೆ ಚಿನ್ನಾಟ ಇಲಿಗೆ ಪ್ರಾಣ ಸಂಕಷ್ಟ ಎಂಬಂತಾಗಿದೆ. ಅರಣ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ರಾಜಕೀಯ ಮುಖಂಡರ ಅಡಗಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪರಿಸರ ಕಾಳಜಿ ಹೊಂದಿರುವ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ