ಶಿವಮೊಗ್ಗ : ದೇಶದಲ್ಲಿ ಹಿಂದೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯದ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ ಎಂದು ರಾಜ್ಯ ಶ್ರೀರಾಮ ಸೇನೆ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.
ನಗರದ ಎನ್ಡಿವಿ ಹಾಸ್ಟೆಲ್ ಆವರಣದಲ್ಲಿ ಂದೂ ಜನ ಜಾಗೃತಿ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಹಿಂದೂ ದೇವಾಲಯ, ಮಠ, ಮಂದಿರಗಳನ್ನು ಧ್ವಂಸ ಮಾಡಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಹಿಂದೂಗಳೇ ಪಾಠ ಕಲಿಸಬೇಕಿದೆ. ಗೋ ಹತ್ಯೆ ವಿರುದ್ಧ ದನಿ ಎತ್ತಿದವರನ್ನು ಹತ್ಯೆ ಮಾಡಲಾಗುತ್ತಿದೆ, ಹಿಂದೂ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿದವರನ್ನೂ ಮುಗಿಸುವ ಕೃತ್ಯ ನಡೆಯುತ್ತಿದೆ. ಇವೆಲ್ಲವುಗಳ ವಿರುದ್ಧ ಹೋರಾಟ ಅಗತ್ಯ ಎಂದರು.
ರಣರಾಗಿಣಿ ಭವ್ಯಗೌಡ ಮಾತನಾಡಿ, ಕರೆನ್ಸಿ ಹಾಕಿಕೊಳ್ಳಲು ಹೋಗುವ ಅಂಗಡಿಗಳಿಂದ ಯುವತಿಯರ ಫೋನ್ ನಂಬರ್ ಐನೂರು, ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ಅನ್ಯ ಕೋಮಿನ ವಿಕೃತ ಮನಸ್ಸುಗಳ ಕುತಂತ್ರ ಅಡಗಿದೆ. ಸ್ವ ರಕ್ಷಣೆಗೆ ನಾವು ಮುಂದಾಗದಿದ್ದರೆ ಹಿಂದೂ ಯುವತಿಯರ ಸಂರಕ್ಷಣೆ ಅಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕಿದೆ ಎಂದು ಹೇಳಿದರು.
ಸನಾತನ ಸಂಸ್ಥೆಯ ಕಾವೇರಿ ರಾಯ್ಕರ್ ಮಾತನಾಡಿ, ದೇವರೆಂದು ಪೂಜಿಸುವ ಗೋ ಮಾತೆಯ ಹತ್ಯೆ ನಿಲ್ಲಬೇಕು. ಸ್ವಾತಂತ್ರ್ಯ ಬಂದ ಸಂದರ್ಭ 10 ಕೋಟಿಯಷ್ಟಿದ್ದ ಗೋ ಸಂತತಿ ಇಂದು ಕೇವಲ ಒಂದು ಕೋಟಿಗೆ ಬಂದು ತಲುಪಿದೆ. ಮುಂದೆ ಡೈನೋಸಾರಸ್ ರೀತಿಯಲ್ಲಿ ಹೀಗೊಂದು ಗೋ ಎಂಬ ಪ್ರಾಣಿಯೊಂದಿತ್ತು ಎಂದು ಹೇಳುವ ಸ್ಥಿತಿ ಬಂದರೆ ಅಚ್ಚರಿ ಇಲ್ಲ. ಹಾಗಾಗಿ ಗೋ ಮಾತೆ ರಕ್ಷಣೆ ಕಾರ್ಯಕ್ಕೆ ಮುಂದಾಗಬೇಕೆಂದರು.
ಸನಾತನ ಸಂಸ್ಥೆಯ ನಿರ್ಬಂಧ ಮಾಡುವ ಉದ್ದೇಶವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಹಿಂದೂ ರಕ್ಷಣೆಯಂತಹ ಸತ್ಕಾರ್ಯದಲ್ಲಿ ತೊಡಗುವ ಸಂಸ್ಥೆಗೆ ಹಿಂದೂ ಧರ್ಮದ ಬಲವಿದೆ ಎಂದರು. ಹಿಂದೂ ಜನ ಜಾಗೃತಿ ಸಮಿತಿಯ ಮೋಹನಗೌಡ, ಮಳಲಿ ಮಠದ ಶ್ರೀಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
-----------------------
ಹಿಂದೂ ಯುವತಿಯರನ್ನು ಮಾರಾಟ ಮಾಡಲಾಗುವ ಮೂಲಕ ಭಯೋತ್ಪಾದನೆಯಂತಹ ಕೃತ್ಯಗಳಿಗೆ ತಳ್ಳಲಾಗುತ್ತಿದ್ದು, ಇದರ ವಿರುದ್ಧ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೇ ಯುವ ಜನಾಂಗ ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್ ವೆಬ್ಸೈಟ್ ನೋಡುತ್ತಾ ಸಮಯ ವ್ಯರ್ಥ ಮಾಡುತ್ತಿರುವುದು ದುರಂತದ ಸಂಗತಿ.
-ಭವ್ಯಗೌಡ, ರಣರಾಗಿಣಿ ಸಂಸ್ಥೆ