ಆ್ಯಪ್ನಗರ

ಹೊಂಬುಜದಲ್ಲಿ ಶೃತಪಂಚಮಿ ಸಂಭ್ರಮ

ಶ್ರೀಕ್ಷೇತ್ರ ಹೊಂಬುಜದಲ್ಲಿ ಶೃತಪಂಚಮಿ ಮಹೋತ್ಸವವನ್ನು ಡಾ. ಶ್ರೀದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ವಿಕ ಸುದ್ದಿಲೋಕ 31 May 2017, 9:00 am

ರಿಪ್ಪನ್‌ಪೇಟೆ: ಶ್ರೀಕ್ಷೇತ್ರ ಹೊಂಬುಜದಲ್ಲಿ ಶೃತಪಂಚಮಿ ಮಹೋತ್ಸವವನ್ನು ಡಾ. ಶ್ರೀದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ನಂತರ ಸ್ವಾಮೀಜಿಗಳು ಆಶೀರ್ವಚನ ನೀಡಿ, ಶ್ರುತ ಪಂಚಮಿ ಜಿನವಾಣಿ ಅಕ್ಷ ರ ರೂಪದಲ್ಲಿ ನಮಗೆಲ್ಲ ಪ್ರಾಪ್ತವಾದ ದಿನ. ಈ ಲಿಪಿಬದ್ಧ ಜೈನತತ್ವಗಳ ಗ್ರಂಥಗಳು ಆಗಮ ಎಂಬ ಹೆಸರಿನಲ್ಲಿ ಪಾವಿತ್ರ್ಯತೆ ಗಳಿಸಿದವು. ನಮ್ಮ ಅಜ್ಞಾನ ತೊರೆಯಲು ಆಗಮ ಜ್ಞಾನದಿಂದ ಸಾಧ್ಯವಿದೆ. ಇಂತಹ ಪವಿತ್ರ ಜೈನಾಗಮ ಸಿದ್ಧಗೊಂಡು ಲೋಕಪೂಜಿತಗೊಂಡ ದಿನವೇ ಶ್ರುತ ಪಂಚಮಿ.

ಈ ಸಂಸಾರದಲ್ಲಿ ಪ್ರಸ್ತುತ ಭರತ ಭೂಮಿಯಿಂದ ಮುಕ್ತಿ ಲಭ್ಯವಿಲ್ಲವೆಂದು ಶಾಸ್ತ್ರದಲ್ಲಿ ಹೇಳಿದ್ದರೂ, ಮುಂದಿನ ಸದ್ಗತಿಗೆ ಬೇಕಾಗುವ ಉಪಾಯವನ್ನು ಈ ಆಗಮ ಗ್ರಂಥಗಳು ತಿಳಿಸುತ್ತವೆ ಎಂದರು.

ವ್ರತೋಪದೇಶ-ಅಕ್ಷ ರಾಭ್ಯಾಸ :

Vijaya Karnataka Web
ಹೊಂಬುಜದಲ್ಲಿ ಶೃತಪಂಚಮಿ ಸಂಭ್ರಮ

ಬೆಳಗ್ಗೆ 8 ಗಂಟೆಗೆ 29 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವ್ರತೋಪದೇಶ ಹಾಗೂ ಮಧ್ಯಾಹ್ನ 12ಕ್ಕೆ 9 ಮಕ್ಕಳಿಗೆ ಅಕ್ಷ ರಾಭ್ಯಾಸ ನೀಡಲಾಯಿತು. ನಂತರ ಕ್ಷೇತ್ರದ ಬಸದಿಯಲ್ಲಿ ಶ್ರುತಸ್ಕಂಧ ಆರಾಧನೆ, ಸಂಜೆ ಜಿನವಾಣಿಯ ಆರಾಧನೆ ಮಾಡಲಾಯಿತು.

ಶ್ರುತಪಂಚಮಿ ನಿಮಿತ್ತ ನಡೆದ ವ್ರತೋಪದೇಶ ಹಾಗೂ ಅಕ್ಷ ರಾಭ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ