ಆ್ಯಪ್ನಗರ

ಆರ್‌ಟಿಇ ಅಡಿ ದಾಖಲಾಗದ ಮಕ್ಕಳ ವರದಿಗೆ ಸೂಚನೆ

ಪ್ರಸಕ್ತ ಸಾಲಿಗೆ ಆರ್‌ಟಿಇ ಅಡಿ ಸೀಟು ಹಂಚಿಕೆಯಾದರೂ ಈವರೆಗೆ ಮಕ್ಕಳು ಶಾಲೆಗೆ ಏಕೆ ದಾಖಲಾಗಿಲ್ಲ ಎಂಬ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 15 Sep 2017, 5:00 am

ಶಿವಮೊಗ್ಗ : ಪ್ರಸಕ್ತ ಸಾಲಿಗೆ ಆರ್‌ಟಿಇ ಅಡಿ ಸೀಟು ಹಂಚಿಕೆಯಾದರೂ ಈವರೆಗೆ ಮಕ್ಕಳು ಶಾಲೆಗೆ ಏಕೆ ದಾಖಲಾಗಿಲ್ಲ ಎಂಬ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಡಯಟ್‌ನಲ್ಲಿ ನಡೆಸಿದ ಜಿಲ್ಲೆಯ ಶಿಕ್ಷ ಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಷಯವಾರು ವರ್ಕ್‌ಬುಕ್‌ ನೀಡುವ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಕ್ರಮಕೈಗೊಳ್ಳಬೇಕು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸಲು ಹಾಗೂ ಪಾಸಿಂಗ್‌ ಪ್ಯಾಕೇಜ್‌ ಸಿದ್ಧಪಡಿಸುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವಂತೆ ಮಾಡಲು ಅಗತ್ಯ ಸೂಚನೆಗಳನ್ನು ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಶಾಲೆಗಳಿಗೆ ನೀಡಬೇಕು. ಶಿಕ್ಷ ಕರು ಶಾಲಾ ಅವಧಿಯಲ್ಲಿ ಶಾಲೆಯಲ್ಲಿಯೇ ಇರಬೇಕು. ಮಾಹಿತಿ ನೀಡಲು ಮತ್ತಿತರ ಕಾರ್ಯಗಳಿಗೆ ಇಲಾಖಾ ಕಚೇರಿಗೆ ತೆರಳಬಾರದು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಜೆ ಶಾಲೆ ಸಮಯ ಮುಕ್ತಾಯಗೊಂಡ ನಂತರವೂ ಶಾಲೆಯಲ್ಲಿ ಕೂರಿಸಿಕೊಂಡು ಶಿಕ್ಷ ಕರು ಅಭ್ಯಾಸ ಮಾಡಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒಂದನೇ ಪಾಠದಿಂದ ಈವರೆಗೆ ಆಗಿರುವ ಎಲ್ಲ ಪಾಠಗಳ ಪುನರ್‌ ಮನನ ಮಾಡಿಸಬೇಕು. ಪ್ರಸ್ತುತ ಎಫ್‌ಎ1 ಪರೀಕ್ಷೆ ಮುಗಿದಿದ್ದು, ಇದರ ಅಂಕಗಳನ್ನು ತಂತ್ರಾಂಶಕ್ಕೆ ಅಳವಡಿಸಬೇಕು. ಈ ಸಂಬಂಧ ಶಾಲೆಗಳಿಂದಲೂ ಅಂಕಗಳನ್ನು ನಮೂದಿಸಲಾಗಿದೆ. ಅದರನ್ವಯ ವಿಷಯವಾರು ವಿದ್ಯಾರ್ಥಿಗಳ ಸಾಮರ್ಥ್ಯ‌ ಗುರುತಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್‌ಕುಮಾರ್‌, ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಮಚಾದೊ, ಶಿಕ್ಷ ಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Vijaya Karnataka Web
ಆರ್‌ಟಿಇ ಅಡಿ ದಾಖಲಾಗದ ಮಕ್ಕಳ ವರದಿಗೆ ಸೂಚನೆ



ಬಯೋಮೆಟ್ರಿಕ್‌ ಹಾಜರಾತಿಯನ್ನು ಪ್ರೌಢಶಾಲೆಗಳಲ್ಲಿ ಕಡ್ಡಾಯ ದಾಖಲಿಸಬೇಕು. ತರಗತಿ ಕೋಣೆಗಳು ಸ್ವಚ್ಛವಾಗಿಡಬೇಕು. ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಬೇಕು. ಶಾಲೆಯ ಮೂಲ ಸೌಕರ್ಯ ಬಗ್ಗೆ ಒತ್ತು ನೀಡುವುದು. ಶಾಲೆಯಲ್ಲಿ ಮಕ್ಕಳಿಗೆ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಸ್ವಚ್ಛಭಾರತ ಕಲ್ಪನೆ ಬಗ್ಗೆ ಅರಿವು ಮೂಡಿಸುವುದು. ಮಕ್ಕಳಲ್ಲಿ ಶಿಸ್ತು ಪಾಲನೆ ಮಾಡಲು ಅಭ್ಯಾಸ ಬೆಳೆಸುವುದು. ಶಾಲೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಕಾಳಜಿ ವಹಿಸುತ್ತಿಲ್ಲವೆಂದಾದಲ್ಲಿ ಶಿಕ್ಷ ಕರು ಅಂತಹ ಮಕ್ಕಳ ಕಾಳಜಿ ವಹಿಸಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಡÜಲು ಕ್ರಮವಹಿಸುವುದು. ಈ ಬಗ್ಗೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಶಾಲಾ ವನ ನಿರ್ಮಿಸಬೇಕು.

-ಡಾ.ಎಂ.ಲೋಕೇಶ್‌, ಡಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ