ಆ್ಯಪ್ನಗರ

ಶಿಕಾರಿಪುರದಲ್ಲೂ ಕುಟುಂಬ ರಾಜಕೀಯ

ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕೀಯ ನಡೆಯುವ ಕುರಿತು ಚರ್ಚೆ ಆಗುತ್ತದೆ, ಇದೀಗ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲೂ ಅದು ಪ್ರತಿಫಲವಾಗಿದ್ದು ಸ್ಥಳೀಯ ರಾಜಕೀಯ ನಾಯಕರ ಸಂಬಂಧದ ಹೊಕ್ಕಳು ಬಳ್ಳಿಯ ಕುರಿತೂ ಜನರು ಚರ್ಚೆಯಲ್ಲಿ ತೊಡಗಿದ್ದಾರೆ.

Vijaya Karnataka 28 May 2019, 5:00 am
ಶಿಕಾರಿಪುರ: ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕೀಯ ನಡೆಯುವ ಕುರಿತು ಚರ್ಚೆ ಆಗುತ್ತದೆ, ಇದೀಗ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲೂ ಅದು ಪ್ರತಿಫಲವಾಗಿದ್ದು ಸ್ಥಳೀಯ ರಾಜಕೀಯ ನಾಯಕರ ಸಂಬಂಧದ ಹೊಕ್ಕಳು ಬಳ್ಳಿಯ ಕುರಿತೂ ಜನರು ಚರ್ಚೆಯಲ್ಲಿ ತೊಡಗಿದ್ದಾರೆ.
Vijaya Karnataka Web
ಶಿಕಾರಿಪುರದಲ್ಲೂ ಕುಟುಂಬ ರಾಜಕೀಯ


ಪುರಸಭೆ ಉಪಾಧ್ಯಕ್ಷ ರಾಗಿದ್ದ ಶಬನಾಭಾನು ಜಯನಗರ 7ನೇವಾರ್ಡ್‌ನಿಂದ ಸ್ಪರ್ಧಿಸಿದ್ದರೆ, ಅವರ ಪತಿ ಮಹಮದ್‌ ಸಾದಿಕ್‌ 8ನೇವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಚನ್ನಕೇಶವ ನಗರ ವಾರ್ಡ್‌ನಲ್ಲಿ ಬಿಜೆಪಿ ಮುಖಂಡ ಕೆ.ಹಾಲಪ್ಪ ಅವರ ಪುತ್ರ ಸ್ಪರ್ಧಿಸಿದ್ದರೆ, ಅವರ ಸೊಸೆ ಶೋಭಾ ಕಡೇಕೇರಿ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದಾರೆ. ದೊಡ್ಡಕೇರಿ ವಾರ್ಡ್‌ನಲ್ಲಿ ಕಾಂಗ್ರೆಸ್‌ ಮುಖಂಡ ಹುಲ್ಮಾರ್‌ ಮಹೇಶ್‌ ಸ್ಪರ್ಧಿಸಿದ್ದರೆ ಅವರ ಸಹೋದರಿ ಗಬ್ಬೂರು ವಾರ್ಡ್‌ನಲ್ಲಿ ಸ್ಪರ್ಧಿಸಿದ್ದಾರೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್‌ ತಮ್ಮ ಪ್ರಕಾಶ್‌ ಕುಂಬಾರಗುಂಡಿ ವಾರ್ಡ್‌ನಲ್ಲಿ, ತಂಗಿ ರೇಣುಕಮ್ಮ ಬಸ್‌ನಿಲ್ದಾಣ ಸುತ್ತಲಿನ ಪ್ರದೇಶದ ವಾರ್ಡ್‌, ದೊಡ್ಡಮ್ಮ ಶಕುಂತಲ 11ನೇವಾರ್ಡ್‌ನಿಂದ ಚುನಾವಣೆ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಮುಖಂಡ ಎಚ್‌.ಎಸ್‌.ಶಾಂತವೀರಪ್ಪಗೌಡ ಅವರ ಸೊಸೆ ಶ್ವೇತ ರವೀಂದ್ರ ಮುದಿಗೌಡರ ಕೇರಿ ವಾರ್ಡ್‌ನಿಂದ, ಅಣ್ಣನ ಮಗ ನಾಗರಾಜಗೌಡ ಶಾಂತಿನಗರ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಎಲ್ಲ ಪಕ್ಷ ದಲ್ಲೂ ಸಂಬಂಧಗಳ ಹೊಕ್ಕಳು ಬಳಿ ಬೆಸೆದುಕೊಂಡಿದೆ, ಜನರ ಬೆಂಬಲ ಯಾರಿಗೆ ಸಿಗುತ್ತದೆ, ವಿಜಯಮಾಲೆ ಯಾರಿಗೆ ಒಲಿಯುತ್ತದೆ ಎನ್ನುವುದು ಕುತೂಹಲ ಸಂಗತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ