ಆ್ಯಪ್ನಗರ

ಬಿಸಿಲಿಗೆ ಬಾಡುತ್ತಿರುವ ತೆಂಗು, ಅಡಕೆ

ಈ ಬಾರಿಯ ರಣ ಬಿಸಿಲಿಗೆ ಹೊಸನಗರ ತಾಲೂಕಿನ ಹಲವು ಗ್ರಾಮಗಳಲ್ಲಿನ ರೈತರ ಅಡಕೆ ಮತ್ತು ತೆಂಗಿನ ಮರಗಳು ನೀರಿಲ್ಲದೆ ಬಾಡಿಹೋಗುತ್ತಿದ್ದು, ರೈತ ಸಮುದಾಯ ದಿಕ್ಕು ತೋಚದಂತಾಗಿದೆ.

Vijaya Karnataka 29 May 2019, 5:00 am
ರಿಪ್ಪನ್‌ಪೇಟೆ: ಈ ಬಾರಿಯ ರಣ ಬಿಸಿಲಿಗೆ ಹೊಸನಗರ ತಾಲೂಕಿನ ಹಲವು ಗ್ರಾಮಗಳಲ್ಲಿನ ರೈತರ ಅಡಕೆ ಮತ್ತು ತೆಂಗಿನ ಮರಗಳು ನೀರಿಲ್ಲದೆ ಬಾಡಿಹೋಗುತ್ತಿದ್ದು, ರೈತ ಸಮುದಾಯ ದಿಕ್ಕು ತೋಚದಂತಾಗಿದೆ.
Vijaya Karnataka Web SMR-27rpt2


ಅಂತರ್ಜಲ ಕುಸಿದಿದ್ದು, ಕೆರೆಕಟ್ಟೆಗಳಲ್ಲಿ ಸಹ ನೀರು ಬತ್ತಿಹೋಗಿ ತಳಕಾಣುವಂತಾಗಿದೆ. ಮೇ ಅಂತ್ಯವಾಗುತ್ತಾ ಬಂದಿದ್ದರೂ ಮಲೆನಾಡಿನಲ್ಲಿ ಮುಂಗಾರು ವರ್ಷಧಾರೆ ಬಾರದಿರುವುದು ಸಣ್ಣ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ದೊಡ್ಡ ಹಿಡುವಳಿದಾರರು ಕೊಳವೆ ಬಾವಿಗಳನ್ನು ಕೊರೆಸಿ ಅಡಕೆ, ಶುಂಠಿ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಇತ್ತ ವಿದ್ಯುತ್‌ ಸಮಸ್ಯೆಯೂ ರೈತರನ್ನು ಹೈರಾಣಾಗಿಸಿದೆ.

ಸಾಯುತ್ತಿರುವ ಜಲಚರಗಳು : ಒಂದು ಕಡೆ ಕೆರೆ, ಹಳ್ಳಕೊಳ್ಳಗಳಲ್ಲಿ ನೀರಿಲ್ಲದೆ ಜಲಚರಗಳು ಸಾಯುತ್ತಿವೆ. ಇನ್ನೊಂದೆಡೆ ಜನ, ಜಾನುವಾರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ