ರಿಪ್ಪನ್ಪೇಟೆ: ಈ ಬಾರಿಯ ರಣ ಬಿಸಿಲಿಗೆ ಹೊಸನಗರ ತಾಲೂಕಿನ ಹಲವು ಗ್ರಾಮಗಳಲ್ಲಿನ ರೈತರ ಅಡಕೆ ಮತ್ತು ತೆಂಗಿನ ಮರಗಳು ನೀರಿಲ್ಲದೆ ಬಾಡಿಹೋಗುತ್ತಿದ್ದು, ರೈತ ಸಮುದಾಯ ದಿಕ್ಕು ತೋಚದಂತಾಗಿದೆ.
ಅಂತರ್ಜಲ ಕುಸಿದಿದ್ದು, ಕೆರೆಕಟ್ಟೆಗಳಲ್ಲಿ ಸಹ ನೀರು ಬತ್ತಿಹೋಗಿ ತಳಕಾಣುವಂತಾಗಿದೆ. ಮೇ ಅಂತ್ಯವಾಗುತ್ತಾ ಬಂದಿದ್ದರೂ ಮಲೆನಾಡಿನಲ್ಲಿ ಮುಂಗಾರು ವರ್ಷಧಾರೆ ಬಾರದಿರುವುದು ಸಣ್ಣ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ದೊಡ್ಡ ಹಿಡುವಳಿದಾರರು ಕೊಳವೆ ಬಾವಿಗಳನ್ನು ಕೊರೆಸಿ ಅಡಕೆ, ಶುಂಠಿ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಇತ್ತ ವಿದ್ಯುತ್ ಸಮಸ್ಯೆಯೂ ರೈತರನ್ನು ಹೈರಾಣಾಗಿಸಿದೆ.
ಸಾಯುತ್ತಿರುವ ಜಲಚರಗಳು : ಒಂದು ಕಡೆ ಕೆರೆ, ಹಳ್ಳಕೊಳ್ಳಗಳಲ್ಲಿ ನೀರಿಲ್ಲದೆ ಜಲಚರಗಳು ಸಾಯುತ್ತಿವೆ. ಇನ್ನೊಂದೆಡೆ ಜನ, ಜಾನುವಾರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಅಂತರ್ಜಲ ಕುಸಿದಿದ್ದು, ಕೆರೆಕಟ್ಟೆಗಳಲ್ಲಿ ಸಹ ನೀರು ಬತ್ತಿಹೋಗಿ ತಳಕಾಣುವಂತಾಗಿದೆ. ಮೇ ಅಂತ್ಯವಾಗುತ್ತಾ ಬಂದಿದ್ದರೂ ಮಲೆನಾಡಿನಲ್ಲಿ ಮುಂಗಾರು ವರ್ಷಧಾರೆ ಬಾರದಿರುವುದು ಸಣ್ಣ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ದೊಡ್ಡ ಹಿಡುವಳಿದಾರರು ಕೊಳವೆ ಬಾವಿಗಳನ್ನು ಕೊರೆಸಿ ಅಡಕೆ, ಶುಂಠಿ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಇತ್ತ ವಿದ್ಯುತ್ ಸಮಸ್ಯೆಯೂ ರೈತರನ್ನು ಹೈರಾಣಾಗಿಸಿದೆ.
ಸಾಯುತ್ತಿರುವ ಜಲಚರಗಳು : ಒಂದು ಕಡೆ ಕೆರೆ, ಹಳ್ಳಕೊಳ್ಳಗಳಲ್ಲಿ ನೀರಿಲ್ಲದೆ ಜಲಚರಗಳು ಸಾಯುತ್ತಿವೆ. ಇನ್ನೊಂದೆಡೆ ಜನ, ಜಾನುವಾರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.