ಶಿವಮೊಗ್ಗ: ಸಾಮಾನ್ಯ ವರ್ಗದಲ್ಲಿರುವ ನಾಯರ್ ಸಮಾಜವನ್ನು ಒಕ್ಕಲಿಗ ವರ್ಗಕ್ಕೆ ಸೇರಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ನಾಯರ್ ಸಮಾಜದ ಅಧ್ಯಕ್ಷ ರಾಮಚಂದ್ರ ಪಲೇರಿ ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾಜದ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಯರ್ ಸಮಾಜವನ್ನು ಒಕ್ಕಲಿಗರೆಂದು ಗುರುತಿಸುವಂತೆ ಕೋರಿ ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸಮಾಜದ ನೂತನ ಅಧ್ಯಕ್ಷರ ಆಯ್ಕೆ ನಂತರ ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾಜದ ಶಾಖೆ ಆರಂಭಿಸಲಾಗಿದೆ. ಅದರಲ್ಲಿ ಶಿವಮೊಗ್ಗ ಶಾಖೆ ಪ್ರಥಮ ಸ್ಥಾನದಲ್ಲಿದೆ. ಸಾಮಾಜಿಕ ಚಟುವಟಿಕೆ ಮೂಲಕ ಇತರೆ ಶಾಖೆಗಳಿಗಿಂತ ಮುಂಚೂಣಿಯಲ್ಲಿದ್ದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತೀವ್ರ ಸ್ವರೂಪದ ಕಾಯಿಲೆಗೊಳಗಾಗಿರುವವರಿಗೆ ಚಿಕಿತ್ಸೆ ಪಡೆಯಲು ಸಮಾಜದ ವತಿಯಿಂದ 5 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಉನ್ನತ ಶಿಕ್ಷಣಕ್ಕೆ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ, ಹಾಸ್ಟೆಲ್ ಸೌಕರ್ಯ, ಶುಲ್ಕ ನೀಡಿಕೆ ಸೇರಿದಂತೆ ನಾನಾ ಸೌಕರ್ಯ ಒದಗಿಸಲಾಗುವುದು. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿ ವರ್ಷ ನಡೆಯುವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಸಮಾಜದ ಸಮಸ್ಯೆ ಬಗ್ಗೆ ಚರ್ಚೆ ಜತೆಗೆ ನೂತನ ಅಧ್ಯಕ್ಷ- ಉಪಾಧ್ಯಕ್ಷ ರ ಆಯ್ಕೆಗೆ ನೆರವಾಗುತ್ತಿದ್ದಾರೆ ಎಂದರು.
ಈ ಸಮಯದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಲ್ಕು ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜಂನ ಜಿಲ್ಲಾಧ್ಯಕ್ಷ ಗೋವಿಂದ ನಾಯರ್, ಸೌಪರ್ಣಿಕಾ ಮಹಿಳಾ ಸಂಘದ ಸಾವಿತ್ರಿ ಪೊದುವಾಳ್, ಕಾರ್ಯದರ್ಶಿ ಎನ್.ಡಿ.ಸತೀಶ್, ನಿರ್ದೇಶಕ ಕೆ.ಶಿವಕುಮಾರ್ ಹಾಗೂ ಇತರರು ಇದ್ದರು. ಎನ್.ಡಿ.ಸತೀಶ್ ಸ್ವಾಗತಿಸಿ, ನಿರೂಪಸಿದರು. ಕೆ.ಸಿ.ಪಿ.ಪಿಳ್ಳೈ ವಂದಿಸಿದರು.
ನಂತರ ನಡೆದ ಚುನಾವಣೆಯಲ್ಲಿ 2014-16ರ ಅವಧಿಗೆ ಕೆ.ಸಿ.ಪಿ.ಪಿಳ್ಳೈ (ನೂತನ ಅಧ್ಯಕ್ಷ). ರವೀಂದ್ರ (ಉಪಾಧ್ಯಕ್ಷ), ಎನ್.ಡಿ.ಸತೀಶ್(ಕಾರ್ಯದರ್ಶಿ)ಯಾಗಿ ಅವಿರೋಧ ಆಯ್ಕೆ ಮಾಡಲಾಯಿತು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾಜದ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಯರ್ ಸಮಾಜವನ್ನು ಒಕ್ಕಲಿಗರೆಂದು ಗುರುತಿಸುವಂತೆ ಕೋರಿ ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸಮಾಜದ ನೂತನ ಅಧ್ಯಕ್ಷರ ಆಯ್ಕೆ ನಂತರ ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾಜದ ಶಾಖೆ ಆರಂಭಿಸಲಾಗಿದೆ. ಅದರಲ್ಲಿ ಶಿವಮೊಗ್ಗ ಶಾಖೆ ಪ್ರಥಮ ಸ್ಥಾನದಲ್ಲಿದೆ. ಸಾಮಾಜಿಕ ಚಟುವಟಿಕೆ ಮೂಲಕ ಇತರೆ ಶಾಖೆಗಳಿಗಿಂತ ಮುಂಚೂಣಿಯಲ್ಲಿದ್ದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತೀವ್ರ ಸ್ವರೂಪದ ಕಾಯಿಲೆಗೊಳಗಾಗಿರುವವರಿಗೆ ಚಿಕಿತ್ಸೆ ಪಡೆಯಲು ಸಮಾಜದ ವತಿಯಿಂದ 5 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಉನ್ನತ ಶಿಕ್ಷಣಕ್ಕೆ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ, ಹಾಸ್ಟೆಲ್ ಸೌಕರ್ಯ, ಶುಲ್ಕ ನೀಡಿಕೆ ಸೇರಿದಂತೆ ನಾನಾ ಸೌಕರ್ಯ ಒದಗಿಸಲಾಗುವುದು. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿ ವರ್ಷ ನಡೆಯುವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಸಮಾಜದ ಸಮಸ್ಯೆ ಬಗ್ಗೆ ಚರ್ಚೆ ಜತೆಗೆ ನೂತನ ಅಧ್ಯಕ್ಷ- ಉಪಾಧ್ಯಕ್ಷ ರ ಆಯ್ಕೆಗೆ ನೆರವಾಗುತ್ತಿದ್ದಾರೆ ಎಂದರು.
ಈ ಸಮಯದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಲ್ಕು ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜಂನ ಜಿಲ್ಲಾಧ್ಯಕ್ಷ ಗೋವಿಂದ ನಾಯರ್, ಸೌಪರ್ಣಿಕಾ ಮಹಿಳಾ ಸಂಘದ ಸಾವಿತ್ರಿ ಪೊದುವಾಳ್, ಕಾರ್ಯದರ್ಶಿ ಎನ್.ಡಿ.ಸತೀಶ್, ನಿರ್ದೇಶಕ ಕೆ.ಶಿವಕುಮಾರ್ ಹಾಗೂ ಇತರರು ಇದ್ದರು. ಎನ್.ಡಿ.ಸತೀಶ್ ಸ್ವಾಗತಿಸಿ, ನಿರೂಪಸಿದರು. ಕೆ.ಸಿ.ಪಿ.ಪಿಳ್ಳೈ ವಂದಿಸಿದರು.
ನಂತರ ನಡೆದ ಚುನಾವಣೆಯಲ್ಲಿ 2014-16ರ ಅವಧಿಗೆ ಕೆ.ಸಿ.ಪಿ.ಪಿಳ್ಳೈ (ನೂತನ ಅಧ್ಯಕ್ಷ). ರವೀಂದ್ರ (ಉಪಾಧ್ಯಕ್ಷ), ಎನ್.ಡಿ.ಸತೀಶ್(ಕಾರ್ಯದರ್ಶಿ)ಯಾಗಿ ಅವಿರೋಧ ಆಯ್ಕೆ ಮಾಡಲಾಯಿತು.