ಆ್ಯಪ್ನಗರ

ಹಸಿವು ಸೂಚ್ಯಂಕದಲ್ಲಿ102ನೇ ಸ್ಥಾನ

​ ಭಾರತದಲ್ಲಿಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳು, ಹಾಲು ಮತ್ತು ಮತ್ಸತ್ರ್ಯ ಪದಾರ್ಥ ಗಳನ್ನು ಉತ್ಪಾದಿಸುತ್ತಿದ್ದರೂ ಜಾಗತಿಕ ಹಸಿವು ಸೂಚ್ಯಂಕದಲ್ಲಿಭಾರತವು 102ನೇ ಸ್ಥಾನ ಪಡೆ ದಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಪ್ರೊ. ಮಂಜುನಾಥ ಕೆ. ನಾಯ್‌್ಕ ಹೇಳಿದರು.

Vijaya Karnataka 18 Oct 2019, 5:00 am
ಶಿವಮೊಗ್ಗ: ಭಾರತದಲ್ಲಿಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳು, ಹಾಲು ಮತ್ತು ಮತ್ಸತ್ರ್ಯ ಪದಾರ್ಥ ಗಳನ್ನು ಉತ್ಪಾದಿಸುತ್ತಿದ್ದರೂ ಜಾಗತಿಕ ಹಸಿವು ಸೂಚ್ಯಂಕದಲ್ಲಿಭಾರತವು 102ನೇ ಸ್ಥಾನ ಪಡೆ ದಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಪ್ರೊ. ಮಂಜುನಾಥ ಕೆ. ನಾಯ್‌್ಕ ಹೇಳಿದರು.
Vijaya Karnataka Web 102 on the hunger index
ಹಸಿವು ಸೂಚ್ಯಂಕದಲ್ಲಿ102ನೇ ಸ್ಥಾನ


ಶಂಕರಘಟ್ಟದ ಜ್ಞಾನಸಹ್ಯಾದ್ರಿ ಆವರಣದಲ್ಲಿಜೈವಿಕ ತಂತ್ರಜ್ಞಾನ ಸಚಿವಾಲಯ, ಕುವೆಂಪು ವಿವಿ ಜೀವ ವಿಜ್ಞಾನ ವಿಭಾಗ ಸಹಯೋಗದಲ್ಲಿ'ಚಿಕಿತ್ಸಕ ಸಂಯುಕ್ತಗಳನ್ನು ಉತ್ಪಾದಿಸುವಲ್ಲಿಸಸ್ಯ ಸೂಕ್ಷತ್ರ್ಮಜೀವಿಗಳ ಪಾತ್ರ' ಕುರಿತು ಆಯೋಜಿಸಿ ರುವ ಹತ್ತು ದಿನಗಳ ರಾಷ್ಟ್ರಮಟ್ಟದ ಕಾರಾರ‍ಯಗಾರ ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಯೇ ಮೊದಲ ಬಾರಿಗೆ ಆಹಾರ ಭದ್ರತಾ ಹಕ್ಕು ನೀಡಿದ ಭಾರತದಲ್ಲಿಇಂದು ಪೋಷಕಾಂಶಗಳ ಭದ್ರತೆಯು ಮರೀಚಿಕೆಯಾ ಗಿದೆ. ಮಣ್ಣಿನ ಜೀವವೈವಿಧ್ಯತೆ ನಾಶ ಮಾಡಿ ರುವ ಕಾರಣದಿಂದ ಬೆಳೆಯ ಉತ್ಪಾದನೆಯು ಪೌಷ್ಟಿಕವಾಗಿಲ್ಲ. ಅದನ್ನು ಸೇವಿಸುತ್ತಿರುವ ದೇಶದ ಜನರು ರಕ್ತಹೀನತೆ, ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದು, ಡೆಂಗೆ, ಮಂಗನ ಕಾಯಿಲೆಯಂತಹ ಸೋಂಕು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ ಎಂದರು. ಮಣ್ಣು, ಬೆಳೆಧಾನ್ಯಗಳು ಮತ್ತು ಆಹಾರದಲ್ಲಿಪೌಷ್ಟಿಕಾಂಶಗಳ ಇರುವಿಕೆಯನ್ನು ಖಾತರಿ ಪಡಿ ಸುವ ಬೃಹತ್‌ ಸವಾಲನ್ನು ಸರಿಯಾಗಿ

ನಿಭಾಯಿಸಿದಲ್ಲಿಮಾತ್ರವೇ 2030ರ 2ನೇ ಹಂತದ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯ. ಈ ಹಿನ್ನೆಲೆಯಲ್ಲಿಸಸ್ಯ ಮತ್ತು ಸೂಕ್ಷತ್ರ್ಮಜೀವಿ ಗಳನ್ನೊಳಗೊಂಡು ಚಿಕಿತ್ಸಕ ಔಷಧೋತ್ಪನ್ನಗಳನ್ನು ತಯಾರಿಸಲು ಸಂಶೋಧಕರಿಗೆ ಇಂತಹ ಕಾರ್ಯಾಗಾರಗಳು ಸಹಾಯಕ ಎಂದರು. ಕುಲಸಚಿವ ಪ್ರೊ.ಎಸ್‌.ಎಸ್‌. ಪಾಟೀಲ್‌ ಮಾತನಾಡಿ, ಸ್ನಾತಕೋತ್ತರ ಮತ್ತು ಸಂಶೋ ಧನಾ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. (ಹಸಿವು ಸೂಚ್ಯಂಕದಲ್ಲಿ102ನೇ ಸ್ಥಾನ)ತಮ್ಮ ಕ್ಷೇತ್ರದಲ್ಲಿಈಗಾಗಲೇ ಇರುವ ಜ್ಞಾನವನ್ನು ವಿಶ್ಲೇಷಣೆಗೆ ಒಳಪಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ವೈಯಕ್ತಿಕ ಕೊಡುಗೆ ನೀಡಬೇಕು ಎಂದರು. ಶಿಲೀಂಧ್ರಶಾಸ್ತ್ರದ ಹಿರಿಯ ವಿಜ್ಞಾನಿ ಬೆಂಗಳೂರಿನ ಕೃಷಿ ವಿವಿ ಪ್ರೊ. ಭಾಗ್ಯರಾಜ್‌, ಕಾರ್ಯಾಗಾರದ ಸಂಘಟಕ ಡಾ.ವಿ.ಕೃಷ್ಣ, ಪ್ರೊ.ಕೃಷ್ಣಪ್ಪ, ಹಣಕಾಸು ಅಧಿಕಾರಿ ಪ್ರೊ.ರಮೇಶ್‌ ಮಾತನಾಡಿದರು. ಪ್ರೊ.ನಾರಾಯಣ್‌, ಡಾ. ಬಿ.ತಿಪ್ಪೇಸ್ವಾಮಿ, ಡಾ.ನಾಗರಾಜ್‌ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಾಗಾರದಲ್ಲಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ