ಆ್ಯಪ್ನಗರ

15 ವಾರ್ಡ್‌ ಎಂಜಿನಿಯರ್‌ಗಳು ಕ್ಷೇತ್ರಕಾರ್ಯದಲ್ಲಿ ಬಿಜಿ

ಪಾರ್ಕಿಂಗ್‌ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿ ಈಗಾಗಲೇ ಪಾಲಿಕೆ ಕೆಂಗಣ್ಣಿಗೆ ಗುರಿಯಾದ 85 ಜನರಿಗೆ ನೋಟಿಸ್‌ ನೀಡುವ ಮೂಲಕ ಸೆಲ್ಲಾರ್‌ ತೆರವು ಕಾರ್ಯಾಚರಣೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಎಂಬ ಹುರುಪು ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

Vijaya Karnataka 15 Dec 2018, 5:28 pm
ಶಿವಮೊಗ್ಗ: ಪಾರ್ಕಿಂಗ್‌ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿ ಈಗಾಗಲೇ ಪಾಲಿಕೆ ಕೆಂಗಣ್ಣಿಗೆ ಗುರಿಯಾದ 85 ಜನರಿಗೆ ನೋಟಿಸ್‌ ನೀಡುವ ಮೂಲಕ ಸೆಲ್ಲಾರ್‌ ತೆರವು ಕಾರ್ಯಾಚರಣೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಎಂಬ ಹುರುಪು ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
Vijaya Karnataka Web 15th ward engineers busy in fieldwork
15 ವಾರ್ಡ್‌ ಎಂಜಿನಿಯರ್‌ಗಳು ಕ್ಷೇತ್ರಕಾರ್ಯದಲ್ಲಿ ಬಿಜಿ


ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ವಿನ್ಯಾಸ ತಿರುಚಿ, ಪಾರ್ಕಿಂಗ್‌ ಜಾಗವನ್ನು ವಾಣಿಜ್ಯ ಕಾರಣಕ್ಕೆ ಬಳಸಿಕೊಂಡಿರುವವರ ಮತ್ತೊಂದು ಪಟ್ಟಿ ಸಿದ್ಧವಾಗುತ್ತಿದೆ. ವಾರ್ಡ್‌ ಎಂಜಿನಿಯರ್‌ಗಳು ಈ ಕಾರ್ಯದಲ್ಲಿ ತಲ್ಲೀನರಾಗಿದ್ದು, ಮಾಹಿತಿ ಕಲೆಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಡಿ.7ರಿಂದ ಇದುವರೆಗೆ ಸಾಕಷ್ಟು ಕಟ್ಟಡಗಳ ಸೆಲ್ಲಾರ್‌ ತೆರವುಗೊಳಿಸುವ ಕೆಲಸ ಮಾಡಲಾಗಿದೆ. ಕಾಲಾವಕಾಶ ಕೋರಿದವರಿಗೆ ನೀಡಲಾಗಿದೆ. ನಿಯಮ ಪಾಲನೆ ಮಾಡದೇ ಇರುವ ಕಟ್ಟಡಗಳ ಮೇಲೆ ಪಾಲಿಕೆ ಒಂದು ಕಣ್ಣಿಟ್ಟಿದ್ದು, ಮಾಹಿತಿ ಸಂಗ್ರಹದ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆರಂಭದಲ್ಲಿ ಕಟ್ಟಡ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಳಗ್ಗೆ ನಡೆಸಲಾಗುತ್ತಿದ್ದ ಡ್ರೈವ್‌ ಅನ್ನು ನಿಲ್ಲಿಸಲಾಗಿದೆ. ಆದರೆ, ನಿರಂತರವಾಗಿ ತೆರವು ಕಾರ್ಯ ಜಾರಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ