ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳೇ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತಮ್ಮ ಪತ್ನಿಯರನ್ನು ಚುನಾವಣೆ ಕಣದಲ್ಲಿ ನಿಲ್ಲಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ಗಮನಿಸಿ 19 ಜನರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ 16 ಜನ ಪಕ್ಷೇತರರಾಗಿ ಸ್ಪರ್ಧಿಸಿದ್ದು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಜಯ ನಾಯ್ಕ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಂಥೋಣಿ ಚಿರಂಜೀವಿ(ಬಾಬು) ಅವರ ಪತ್ನಿಯರನ್ನು ಚುನಾವಣೆಗೆ ಪಕ್ಷೇತರರಾಗಿ ನಿಲ್ಲಿಸಿದ್ದಾರೆ. ಇದನ್ನು ಮನಗಂಡು ಅಭ್ಯರ್ಥಿ ಸ್ಥಾನದಲ್ಲಿರುವ 16 ಜನ ಸೇರಿ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ತಮ್ಮ ಪತ್ನಿಯರಿಗೆ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ನಿಲ್ಲಿಸಿದ್ದನ್ನು ಮನಗಂಡು 19 ಜನರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಪಕ್ಷ ದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಉಚ್ಛಾಟಿಸಲಾಗಿದೆ.
* ಉಚ್ಛಾಟಿತರ ಹೆಸರು:
ಕೆ.ರಂಗನಾಥ್, ಜಯನಾಯ್ಕ್, ಅಂಥೋಣಿ ಚಿರಂಜೀವಿ, ಸಿ.ಡಿ.ನಳಿನಾಕ್ಷಿ, ಬಿ.ರುಖಿಯಾ, ಎಚ್.ಎಸ್.ಕುಮಾರಸ್ವಾಮಿ, ಜಯಂತಿಬಾಯಿ, ಎಂ.ವಿ.ಸುಜಾತ, ಜಬೀನ್ ತಾಜ್, ಎ.ಎಸ್.ರೇಖಾ, ಜಯಕುಮಾರ್(ಜಯಣ್ಣ), ನೂರ್ಜಾನ್, ಎ.ಫ್ಲೋರಿನಾ ಚಿರಂಜೀವಿ, ಲಕ್ಷ್ಮಿಬಾಯಿ ವಿಜೇಶ್, ಕೆ.ಪಿ.ಮಂಜುಳಾಬಾಯಿ, ಎಂ.ಪಿ.ಸುವರ್ಣಾ, ಎ.ಶಂಕರ್, ಶಮೀಮಾ ಬಾನು, ಸಾಹೀರಾ ಬಾನು.
==============
ಏರುತ್ತಿದೆ 'ಲೋಕಲ್ ಫೈಟ್' ಪ್ರಚಾರದ ಬಿಸಿ
ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪಕ್ಷಗಳಿಂದ ಟಿಕೆಟ್ ಕೂಡ ಅಂತಿಮಗೊಳಿಸಲಾಗಿದೆ. ಇದರೊಂದಿಗೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ವಾರ್ಡ್ಗಳಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ 'ಮೈಕ್' ಪ್ರಚಾರ ಕೂಡ ಮಾಡಲಾಗುತ್ತಿದೆ. ವಾರ್ಡ್ ಅಭಿವೃದ್ಧಿ ಕುರಿತು ರಚಿಸಿರುವ ಪ್ರಣಾಳಿಕೆ ಹಿಡಿದು ಮತದಾರರ ಮನಸ್ಸಿಗೆ ಹತ್ತಿರವಾಗುವ ಪ್ರಯತ್ನಗಳೂ ನಡೆದಿವೆ. ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸೇ ಮುಖ್ಯವಾಗಿರುವುದರಿಂದ ಹೆಸರುಗಳನ್ನೇ ಬಂಡವಾಳವಾಗಿಸಿಕೊಂಡು ಪ್ರಚಾರ ಮಾಡಲಾಗುತ್ತಿದೆ. ಈ ಹಿಂದೆ ಮಾಡಿದ ಕೆಲಸ ಮತ್ತು ಗೆದ್ದರೆ ಮಾಡಬೇಕೆಂದುಕೊಂಡಿರುವ ಕಾರ್ಯಗಳ ಬಗ್ಗೆಯೂ ಹೇಳಲಾಗುತ್ತಿದೆ.
==============
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ 16 ಜನ ಪಕ್ಷೇತರರಾಗಿ ಸ್ಪರ್ಧಿಸಿದ್ದು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಜಯ ನಾಯ್ಕ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಂಥೋಣಿ ಚಿರಂಜೀವಿ(ಬಾಬು) ಅವರ ಪತ್ನಿಯರನ್ನು ಚುನಾವಣೆಗೆ ಪಕ್ಷೇತರರಾಗಿ ನಿಲ್ಲಿಸಿದ್ದಾರೆ. ಇದನ್ನು ಮನಗಂಡು ಅಭ್ಯರ್ಥಿ ಸ್ಥಾನದಲ್ಲಿರುವ 16 ಜನ ಸೇರಿ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ತಮ್ಮ ಪತ್ನಿಯರಿಗೆ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ನಿಲ್ಲಿಸಿದ್ದನ್ನು ಮನಗಂಡು 19 ಜನರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಪಕ್ಷ ದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಉಚ್ಛಾಟಿಸಲಾಗಿದೆ.
* ಉಚ್ಛಾಟಿತರ ಹೆಸರು:
ಕೆ.ರಂಗನಾಥ್, ಜಯನಾಯ್ಕ್, ಅಂಥೋಣಿ ಚಿರಂಜೀವಿ, ಸಿ.ಡಿ.ನಳಿನಾಕ್ಷಿ, ಬಿ.ರುಖಿಯಾ, ಎಚ್.ಎಸ್.ಕುಮಾರಸ್ವಾಮಿ, ಜಯಂತಿಬಾಯಿ, ಎಂ.ವಿ.ಸುಜಾತ, ಜಬೀನ್ ತಾಜ್, ಎ.ಎಸ್.ರೇಖಾ, ಜಯಕುಮಾರ್(ಜಯಣ್ಣ), ನೂರ್ಜಾನ್, ಎ.ಫ್ಲೋರಿನಾ ಚಿರಂಜೀವಿ, ಲಕ್ಷ್ಮಿಬಾಯಿ ವಿಜೇಶ್, ಕೆ.ಪಿ.ಮಂಜುಳಾಬಾಯಿ, ಎಂ.ಪಿ.ಸುವರ್ಣಾ, ಎ.ಶಂಕರ್, ಶಮೀಮಾ ಬಾನು, ಸಾಹೀರಾ ಬಾನು.
==============
ಏರುತ್ತಿದೆ 'ಲೋಕಲ್ ಫೈಟ್' ಪ್ರಚಾರದ ಬಿಸಿ
ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪಕ್ಷಗಳಿಂದ ಟಿಕೆಟ್ ಕೂಡ ಅಂತಿಮಗೊಳಿಸಲಾಗಿದೆ. ಇದರೊಂದಿಗೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ವಾರ್ಡ್ಗಳಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ 'ಮೈಕ್' ಪ್ರಚಾರ ಕೂಡ ಮಾಡಲಾಗುತ್ತಿದೆ. ವಾರ್ಡ್ ಅಭಿವೃದ್ಧಿ ಕುರಿತು ರಚಿಸಿರುವ ಪ್ರಣಾಳಿಕೆ ಹಿಡಿದು ಮತದಾರರ ಮನಸ್ಸಿಗೆ ಹತ್ತಿರವಾಗುವ ಪ್ರಯತ್ನಗಳೂ ನಡೆದಿವೆ. ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸೇ ಮುಖ್ಯವಾಗಿರುವುದರಿಂದ ಹೆಸರುಗಳನ್ನೇ ಬಂಡವಾಳವಾಗಿಸಿಕೊಂಡು ಪ್ರಚಾರ ಮಾಡಲಾಗುತ್ತಿದೆ. ಈ ಹಿಂದೆ ಮಾಡಿದ ಕೆಲಸ ಮತ್ತು ಗೆದ್ದರೆ ಮಾಡಬೇಕೆಂದುಕೊಂಡಿರುವ ಕಾರ್ಯಗಳ ಬಗ್ಗೆಯೂ ಹೇಳಲಾಗುತ್ತಿದೆ.
==============