ಆ್ಯಪ್ನಗರ

ಶಿವಮೊಗ್ಗ: ಒಂದೇ ದಿನ 291 ಪಾಸಿಟಿವ್‌, 5 ಸಾವಿರ ಗಡಿ ದಾಟಿದ ಸೋಂಕು

ಶಿವಮೊಗ್ಗ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 237, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 975, ಖಾಸಗಿ ಆಸ್ಪತ್ರೆಯಲ್ಲಿ 247 ಮತ್ತು ಮನೆಯಲ್ಲಿ 439 ಜನ ಆರೈಕೆಯಲ್ಲಿದ್ದು, ಜಿಎಡಿ ಆಸ್ಪತ್ರೆಯಲ್ಲಿ 128 ಸೇರಿ ಒಟ್ಟು 2026 ಸಕ್ರಿಯ ಕೊರೊನಾ ಪ್ರಕರಣಗಳಿವೆ.

Vijaya Karnataka Web 19 Aug 2020, 9:59 pm
ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 291 ಪಾಸಿಟಿವ್‌ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,057 ಕ್ಕೆ ಹೆಚ್ಚಿದೆ. ಜತೆಗೆ, ಇಬ್ಬರು ಮೃತಪಟ್ಟಿದ್ದು, ಇದುವರೆಗೆ ಕೊರೊನಾ 81 ಜನರನ್ನು ಬಲಿ ಪಡೆದಿದೆ.
Vijaya Karnataka Web ಕೊರೊನಾ
ಕೊರೊನಾ


ಶಿವಮೊಗ್ಗ ತಾಲೂಕುವೊಂದರಲ್ಲಿಯೇ 158, ಭದ್ರಾವತಿ 56, ಶಿಕಾರಿಪುರ 27, ತೀರ್ಥಹಳ್ಳಿ 6, ಹೊಸನಗರ 1, ಸೊರಬ 18 ಸಾಗರ 13 ಮತ್ತು ಬೇರೆ ಜಿಲ್ಲೆಯ 12 ಪ್ರಕರಣಗಳು ಪತ್ತೆಯಾಗಿವೆ.

1928 ಮಂದಿಯ ಗಂಟಲು ದ್ರವ ಪರೀಕ್ಷಿಸಿದ್ದು, ಇದುವರೆಗೆ ಒಟ್ಟು 45,725 ಜನರ ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ1049ಸೇರಿ ಒಟ್ಟು 35,898 ನೆಗೆಟಿವ್‌ ಬಂದಿವೆ. ಕೋವಿಡ್‌ ವಾರ್ಡ್‌ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದು 72 ಮಂದಿ ಗುಣಮುಖರಾಗಿದ್ದು, ಈವರೆಗೆ 2950 ಜನರನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 237, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 975, ಖಾಸಗಿ ಆಸ್ಪತ್ರೆಯಲ್ಲಿ 247 ಮತ್ತು ಮನೆಯಲ್ಲಿ 439 ಜನ ಆರೈಕೆಯಲ್ಲಿದ್ದು, ಜಿಎಡಿ ಆಸ್ಪತ್ರೆಯಲ್ಲಿ 128 ಸೇರಿ ಒಟ್ಟು 2026 ಸಕ್ರಿಯ ಕೊರೊನಾ ಪ್ರಕರಣಗಳಿವೆ. 682 ಕಂಟೈನ್‌ಮೆಂಟ್‌ ಜೋನ್‌ಗಳನ್ನು ಡಿನೋಟಿಫೈ ಮಾಡಿದ್ದು, ಇನ್ನೂ 1939 ಜೋನ್‌ಗಳಿವೆ.

ಸಿಮ್ಸ್‌ ಕ್ಯಾಂಪಸ್‌ನಲ್ಲೇ ಎಂಟು ಪಾಸಿಟಿವ್‌

ಸಿಮ್ಸ್‌ ಕ್ಯಾಂಪಸ್‌ನಲ್ಲಿ 8 ಮತ್ತು 10 ವರ್ಷದ ಬಾಲಕರು ಸೇರಿ ಒಟ್ಟು ಎಂಟು ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಜತೆಗೆ, ಬುಧವಾರ ನಗರದ ಪ್ರಮುಖ ಸ್ಥಳಗಳಲ್ಲಿಕೊರೊನಾ ತನ್ನ ಕಪಿಮುಷ್ಠಿಯನ್ನು ಚಾಚಿದ್ದು, ಸೋಂಕು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ 33 ವರ್ಷದ ಯುವಕನಿಗೆ ರಾರ‍ಯಂಡಮ್‌ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್‌ ಬಂದಿದೆ. ವಿವೇಕಾನಂದ ಬಡಾವಣೆಯಲ್ಲಿ4, 7 ವರ್ಷದ ಮಕ್ಕಳು ಸೇರಿ ಒಂದೇ ಕುಟುಂಬದ ಐದು ಮಂದಿಗೆ ಸೋಂಕು ತಗುಲಿದೆ.

ಗೋಪಾಳಗೌಡ ಎಕ್ಸ್‌ಟೆನ್ಷನ್‌ನಲ್ಲಿರುವ ಟ್ಯಾಕ್ಸ್‌ ಆಫೀಸ್‌ನಲ್ಲಿ 34 ವರ್ಷದ ಮಹಿಳೆಯಲ್ಲೂ ಸೋಂಕು ಕಂಡುಬಂದಿದೆ. ಭದ್ರಾವತಿಯ ಹೊಳೆಹೊನ್ನೂರಿನಲ್ಲಿ 30 ವರ್ಷದ ಪುರುಷನಿಗೆ ಸೆಂಕೆಂಡರಿ ಸಂಪರ್ಕದಿಂದ ಹಾಗೂ ಏಳು ಮಂದಿಗೆ ಪ್ರಾಥಮಿಕ ಸಂಪರ್ಕದಿಂದಾಗಿ ಕೊರೊನಾ ತಗಲಿದೆ.

ಅದೇ ರೀತಿ, ಕೆಎಸ್‌ಆರ್‌ಟಿಸಿ 35 ವರ್ಷದ ಸಿಬ್ಬಂದಿಗೆ ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದೆ. ಬಿದರೆಯ ಇಸ್ಕಾನ್‌ ಟೆಂಪಲ್‌ನಲ್ಲಿ 31 ವರ್ಷದ ಮಹಿಳೆ, ಸೊರಬದ ಒತೂರು ಪಿಎಚ್‌ಸಿಯಲ್ಲಿ 42 ವರ್ಷದ ಪುರುಷನಿಗೆ, ಕುಂಸಿಯ ರೈಲ್ವೆ ಕ್ವಾರ್ಟರ್ಸ್‌ನಲ್ಲಿ 36 ವರ್ಷದ ವ್ಯಕ್ತಿ, ಪ್ರತಿಷ್ಠಿತ ಆಸ್ಪತ್ರೆಯೊಂದರ ಸ್ಟಾಫ್‌ ನರ್ಸ್‌ ಮತ್ತು ಪಿಬಿಬಿಎಸ್‌ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬರಿಗೆ ಹಾಗೂ ಗಾಂಧಿ ಬಜಾರ್‌ ಐದನೇ, ಆರನೇ ತಿರುವು ಹಾಗೂ ಪ್ರತಿಷ್ಠಿತ ಬೈಕ್‌ ಶೋರೂಮ್‌ಮೊಂದರಲ್ಲಿ 41 ವರ್ಷದ ವ್ಯಕ್ತಿಗೆ ಸೋಂಕು ತಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ