ತೀರ್ಥಹಳ್ಳಿ : ಮಂಗನ ಕಾಯಿಲೆ ಜ್ವರ ಹರಡುವ ಭೀತಿಯ ನಡುವೆ ತಾಲೂಕಿನ ಆಗುಂಬೆ, ನಾಲೂರು ಗ್ರಾಮದಲ್ಲಿ ಮಂಗಳವಾರ ಸಂಜೆ 3 ಮಂಗಗಳ ಮೃತದೇಹ ಪತ್ತೆ ಆಗಿದೆ. ಆಗುಂಬೆ ಶಾಲೆ ಸಮೀಪ 1, ನಾಲೂರು ಗ್ರಾ.ಪಂ.ವ್ಯಾಪ್ತಿಯ ಬಿಳಚಿಕಟ್ಟೆಯಲ್ಲಿ 2 ಮಂಗಗಳು ಮೃತಪಟ್ಟಿವೆ. ಮಂಗಗಳ ಮೃತದೇಹವನ್ನು ಪರೀಕ್ಷಿಸಿ, ಮಾದರಿ ಸಂಗ್ರಹಿಸಲಾಯಿತು. ಕಳೇಬರಗಳನ್ನು ದಹಿಸಲಾಯಿತು. ಈ ಸಂದರ್ಭ ಆಗುಂಬೆ ಗ್ರಾ.ಪಂ.ಅಧ್ಯಕ್ಷ ಹಸಿರುಮನೆ ನಂದನ್, ನಾಲೂರು ಗ್ರಾ.ಪಂ. ಸದಸ್ಯರಾದ ಬಿಳಚಿಕಟ್ಟೆ ಶ್ರೀಕಾಂತ್, ವಿಶಾಲಾಕ್ಷಿ, ಆಗುಂಬೆ ಪಿಎಚ್ಡಿಯ ಡಾ.ಅನಿಕೇತನ್ ಮತ್ತಿತರರು ಇದ್ದರು.
ತೀರ್ಥಹಳ್ಳಿ ತಾಲೂಕಲ್ಲಿ ಮೂರು ಮಂಗ ಸಾವು
ಮಂಗನ ಕಾಯಿಲೆ ಜ್ವರ ಹರಡುವ ಭೀತಿಯ ನಡುವೆ ತಾಲೂಕಿನ ಆಗುಂಬೆ, ನಾಲೂರು ಗ್ರಾಮದಲ್ಲಿ ಮಂಗಳವಾರ ಸಂಜೆ 3 ಮಂಗಗಳ ಮೃತದೇಹ ಪತ್ತೆ ಆಗಿದೆ.
Vijaya Karnataka 17 Jan 2019, 5:00 am