ಆ್ಯಪ್ನಗರ

ವಾಹನ ಪಲ್ಟಿ: 30 ಜನರಿಗೆ ಗಾಯ

ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್‌ ವಾಹನ ವಿದ್ಯತ್‌ ಕಂಬಕ್ಕೆ ಗುದ್ದಿ 30 ಜನರು ಗಾಯಗೊಂಡಿದ್ದಾರೆ.

Vijaya Karnataka 19 Apr 2019, 5:00 am
ಶಿರಾಳಕೊಪ್ಪ : ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್‌ ವಾಹನ ವಿದ್ಯತ್‌ ಕಂಬಕ್ಕೆ ಗುದ್ದಿ 30 ಜನರು ಗಾಯಗೊಂಡಿದ್ದಾರೆ.
Vijaya Karnataka Web 30 people were injured
ವಾಹನ ಪಲ್ಟಿ: 30 ಜನರಿಗೆ ಗಾಯ


ಸೊರಬ ತಾಲೂಕಿನ ಹಿರೇಕಸವಿ ಗ್ರಾಮದ ಬಳಿ ಗುರುವಾರ ಸಂಜೆ ದುರ್ಘಟನೆ ನಡೆದಿದ್ದು, ಗಾಯಾಳುಗಳು ಶಿಕಾರಿಪುರ ತಾಲೂಕಿನ ಜಾವಗಟ್ಟಿ, ಮಳೂರು, ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದವರಾಗಿದ್ದಾರೆ. ಸುತ್ತುಕೋಟೆಯ ನಾಗರಾಜ್‌, ಗೋಪಿ, ಯೋಗೀಶ್‌, ಕುಮಾರ್‌, ರೇಣುಕಮ್ಮ, ಬಸವರಾಜಪ್ಪ ಗಂಭೀರ ಗಾಯಗೊಂಡಿದ್ದಾರೆ.

ತ್ಯಾಗರ್ತಿ ಬಳಿ ಶುಂಟಿ ಗದ್ದೆಯಲ್ಲಿ ಕೆಲಸಕ್ಕೆ ಹೋದವರು, ಸಂಜೆ ವೇಳೆಗೆ ಟಾಟಾ ಏಸ್‌ ವಾಹನದಲ್ಲಿ ಮನೆಗೆ ತೆರಳುವಾಗ ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋದ ಚಾಲಕ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮವಾಗಿ ಟಾಟಾ ಏಸ್‌ ಮಗುಚಿ ತೆರೆದ ವಾಹನದಲ್ಲಿ ಕುಳಿತವರೆಲ್ಲರೂ ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರಿಗೆ ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಅವರಲ್ಲಿ ತೀವ್ರ ಗಾಯಗೊಂಡ 17 ಜನರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕಳಿಸಲಾಗಿದೆ. ಉಳಿದವರಿಗೆ ಪಟ್ಟಣದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೇ ವೈದ್ಯರು, ಸಹಾಯಕರು ತ್ವರಿತವಾಗಿ ಸ್ಪಂದಿಸಿ ಚಿಕಿತ್ಸೆ ನೀಡಿದರು. ದಿನದ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋಗಿದ್ದ ಕೆಲ ಸಹಾಯಕಿಯರು ಮರಳಿಬಂದು ಗಾಯಾಳುಗಳ ಚಿಕಿತ್ಸೆಗೆ ನೆರವಾದರು. ಡಾ.ಪ್ರಭು ಸಾಹುಕಾರ್‌, ಡಾ.ಉದಯ ಕುಮಾರ್‌, ಡಾ.ಸಂಜೀವ್‌ ಪವಾರ್‌, ಡಾ.ಗಣೇಶ್‌ ಚಿಕಿತ್ಸೆ ನೀಡಿದರು. ಶುಶ್ರೂಷಕಿಯರಾದ ಕೆ.ಆರ್‌.ಮಾಲತಿ, ಶಾರದ, ನಂದಾ, ಸಬಿತಾ ಇನ್ನುಳಿದ ಆಸ್ಪತೆಯ ಸಿಬ್ಬಂದಿ ಚಿಕಿತ್ಸೆ ನೀಡಿದರು. ಸುದ್ದಿ ತಿಳಿದ ಗಾಯಾಳುಗಳ ಕುಟುಂಬದವರು, ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದು, ಅವರ ರೋದನ ಮುಗಿಲು ಮುಟ್ಟುವಂತಿತ್ತು. ಪಟ್ಟಣದ ಪೊಲೀಸರು ಜನತೆಯನ್ನು ನಿಯಂತ್ರಿಸಿದರು. ಸೊರಬ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ