ಆ್ಯಪ್ನಗರ

ಲಂಚ ಪಡೆದ ಮೆಸ್ಕಾಂ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ

ಸೊರಬ ತಾಲೂಕಿನ ಮಡ್ಡಿಕುಮರಿಯಲ್ಲಿ 25 ಕೆವಿ ವಿದ್ಯುತ್‌ ಪರಿವರ್ತಕ ಅಳವಡಿಸಲು 6 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟು, 1 ಸಾವಿರ ರೂ. ಸ್ವೀಕರಿಸಿದ್ದ ಆನವಟ್ಟಿ ಮೆಸ್ಕಾಂ ಅಧಿಕಾರಿ ಎಂ.ಆರ್‌. ಸುದರ್ಶನ ಶೆಟ್ಟಿಗೆ ಲಂಚ ಪ್ರತಿಬಂಧಕ ಕಾಯಿದೆ-1988ರಡಿ 3 ವರ್ಷ ಸಾದಾ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶ ಕೆ. ನಟರಾಜನ್‌ ತೀರ್ಪು ನೀಡಿದ್ದಾರೆ.

Vijaya Karnataka 23 Jun 2018, 5:00 am
ಶಿವಮೊಗ್ಗ : ಸೊರಬ ತಾಲೂಕಿನ ಮಡ್ಡಿಕುಮರಿಯಲ್ಲಿ 25 ಕೆವಿ ವಿದ್ಯುತ್‌ ಪರಿವರ್ತಕ ಅಳವಡಿಸಲು 6 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟು, 1 ಸಾವಿರ ರೂ. ಸ್ವೀಕರಿಸಿದ್ದ ಆನವಟ್ಟಿ ಮೆಸ್ಕಾಂ ಅಧಿಕಾರಿ ಎಂ.ಆರ್‌. ಸುದರ್ಶನ ಶೆಟ್ಟಿಗೆ ಲಂಚ ಪ್ರತಿಬಂಧಕ ಕಾಯಿದೆ-1988ರಡಿ 3 ವರ್ಷ ಸಾದಾ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶ ಕೆ. ನಟರಾಜನ್‌ ತೀರ್ಪು ನೀಡಿದ್ದಾರೆ.
Vijaya Karnataka Web 3year jail punishment to taking bribe mescom officer
ಲಂಚ ಪಡೆದ ಮೆಸ್ಕಾಂ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ


2008ರ ಅಕ್ಟೋಬರ್‌ನಲ್ಲಿ ಸೊರಬ ತಾಲೂಕು ಮಡ್ಡಿಕುಮರಿಯಲ್ಲಿರುವ 25 ಕೆ.ವಿ. ವಿದ್ಯುತ್‌ ಪರಿವರ್ತಕ ಸುಟ್ಟುಹೋಗಿದ್ದರಿಂದ ಹೊಸದಾಗಿ ಪರಿವರ್ತಕ ಹಾಕಿಕೊಡುವಂತೆ ಅಲ್ಲಿನ ನಿವಾಸಿ ಎಂ. ಶಂಕರಪ್ಪ ಎಂಬುವವರು ಆನವಟ್ಟಿ ಮೆಸ್ಕಾಂ ಅಧಿಕಾರಿ ಎಂ.ಆರ್‌. ಸುದರ್ಶನ ಶೆಟ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅಧಿಕಾರಿ 6 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ, 5 ಸಾವಿರ ರೂ.ಗೆ ಒಪ್ಪಿಸಿದ ಶಂಕರಪ್ಪನವರು 2008ರ ನವೆಂಬರ್‌ 3 ರಂದು 1 ಸಾವಿರ ನೀಡಿದ್ದು, ಉಳಿದ 4 ಸಾವಿರ ರೂ. ನೀಡುವ ಮೊದಲು ಜಿಲ್ಲಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ನವೆಂಬರ್‌ 6ರಂದು ಬಾಕಿ 4 ಸಾವಿರ ರೂ. ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂ.ಎನ್‌. ಕರಿಬಸವನಗೌಡ ಅವರು ದಾಳಿ ನಡೆಸಿ, ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಗೀತಾಶಿವಮೂರ್ತಿ ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ