ಆ್ಯಪ್ನಗರ

55 ದಿನಗಳ 18 ಸಾವಿರ ಕಿ.ಮೀ. ಪಯಣ

ನಗರದ ಮಹಾಗಣಪತಿ ದೇವಸ್ಥಾನ ಬಳಿ ಬುಧವಾರ ಫಾಲ್ಕನ್‌ ಓವರ್‌ ಲ್ಯಾಂಡರ್ಸ್‌ ಡಿಸ್ಕವರ್‌ ತಂಡದವರ ಇಂಡಿಯಾ ಎಂಡ್‌ ಬಿಯಾಂಡ್‌ ಕಲ್ಚುರಲ್‌ ಮೋಟಾರ್‌ ರಾರ‍ಯಲಿಗೆ ಸಾರಿಗೆ ಇಲಾಖೆಯ ಅಧಿಕಾರಿ ಶಶಿಕಲಾ ಹಸಿರು ನಿಶಾನೆ ತೋರಿಸಿದರು.

Vijaya Karnataka 7 Nov 2019, 5:00 am
ಸಾಗರ (ಶಿವಮೊಗ್ಗ): ನಗರದ ಮಹಾಗಣಪತಿ ದೇವಸ್ಥಾನ ಬಳಿ ಬುಧವಾರ ಫಾಲ್ಕನ್‌ ಓವರ್‌ ಲ್ಯಾಂಡರ್ಸ್‌ ಡಿಸ್ಕವರ್‌ ತಂಡದವರ ಇಂಡಿಯಾ ಎಂಡ್‌ ಬಿಯಾಂಡ್‌ ಕಲ್ಚುರಲ್‌ ಮೋಟಾರ್‌ ರಾರ‍ಯಲಿಗೆ ಸಾರಿಗೆ ಇಲಾಖೆಯ ಅಧಿಕಾರಿ ಶಶಿಕಲಾ ಹಸಿರು ನಿಶಾನೆ ತೋರಿಸಿದರು.
Vijaya Karnataka Web 06SGR8
ಸಾಗರದ ಮಹಾಗಣಪತಿ ದೇವಸ್ಥಾನ ಬಳಿ ಬುಧವಾರ ಫಾಲ್ಕನ್‌ ಓವರ್‌ ಲ್ಯಾಂಡರ್ಸ್‌ ಡಿಸ್ಕವರ್‌ ತಂಡದವರ ಇಂಡಿಯಾ ಎಂಡ್‌ ಬಿಯಾಂಡ್‌ ಕಲ್ಚುರಲ್‌ ಮೋಟಾರ್‌ ಾ್ಯಲಿಯ ವಾಹನಗಳಿಗೆ ಪೂಜೆ ಸಲ್ಲಿಸಿ ಶುಭಹಾರೈಸಲಾಯಿತು.


ಸಾಗರ ಸಾಹಸ ಸಂಸ್ಥೆಯ ಅಂಗಸಂಸ್ಥೆಯ ಸಾಗರ ಫಾಲ್ಕನ್‌ ಓವರ್‌ ಲ್ಯಾಂಡರ್ಸ್ ವತಿಯಿಂದ 55 ದಿನಗಳ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಸಾಗರದ 15 ಜನರು ಭೂಮಾರ್ಗದ ಮೂಲಕ 7 ದೇಶಗಳನ್ನು ಸುತ್ತುವ ಕಾರ‍್ಯವನ್ನು ಡಿ.30ರ ತನಕ ಮಾಡಲಿದ್ದಾರೆ.

ಭಾರತಿ ಹಿರಿಯ ಸದಸ್ಯರಾಗಿದ್ದಾರೆ. ಕೌಶಿಕ ದಂಪತಿ ಸೇರಿದಂತೆ ವಿವಿಧ ವೃತ್ತಿಯ, ವಯೋಮಾನದ ಸಾಹಸ ಹಾಗೂ ಪ್ರಯಾಣ ಪ್ರಿಯರು ಪರ್ಯಟನೆ ಮಾಡಲಿದ್ದಾರೆ. ಅಂದಾಜು 2 ರೂ.ಲಕ್ಷ ವೆಚ್ಚ ತಗಲುವ ಈ ಪ್ರಯಾಣದಲ್ಲಿರಾಯಲ್‌ ಎನ್‌ಫೀಲ್ಡ್‌ ನವರ ಹಿಮಾಲಯನ್‌ ದ್ವಿಚಕ್ರವಾಹನಗಳು ಹಾಗೂ 4 ಝೈಲೋ ವಾಹನ ಬಳಕೆಯಾಗಲಿದೆ

ಸಂಚಾರಕ್ಕೆ ಬಳಸುವ ವಾಹನಗಳನ್ನು ಪೂಜಿಸಲಾಯಿತು. ಸಾಗರ ಸಾಹಸ ಸಂಸ್ಥೆಯ ಸಂತೋಷ್‌ಪ್ರಭು, ಶೇಷಗಿರಿ, ಹರೀಶ್‌, ಶ್ರೀನಾಥ, ಕಿರಣ, ನಟರಾಜ ಪೋಷಕರಾದ ಕೆ.ಎನ್‌.ಶ್ರೀಧರ, ಸತೀಶ ಹೊಸೂರು, ಯು.ಎಚ್‌.ರಾಮಪ್ಪ, ನಾರಾಯಣಮೂರ್ತಿ ಕಾನಗೋಡು, ಸಾರಿಗೆ ಇಲಾಖೆಯ ಲಿಂಗಣ್ಣ ಮುಂತಾದವರು ಶುಭಕೋರಿದರು.
----------
7 ದೇಶಗಳ ಪ್ರವಾಸ

ಪ್ರವಾಸಿ ತಂಡದವರು ಸಾಗರದಿಂದ 2 ದ್ವಿಚಕ್ರವಾಹನ, 4 ಕಾರುಗಳಲ್ಲಿಬುಧವಾರ ಪ್ರಯಾಣ ಪ್ರಾರಂಭಿಸಿದರು. ಭೂಮಾರ್ಗದ ಮೂಲಕ ಥಾಯ್‌ಲ್ಯಾಂಡ್‌, ಕಾಂಬೋಡಿಯಾ, ಮ್ಯಾನ್ಮಾರ್‌, ಲಾವೋ, ವಿಯಟ್ನಾಂ, ಭೂಥಾನ್‌ ಹಾಗೂ ಭಾರತ ದೇಶ ಸುತ್ತಲಿದ್ದಾರೆ. ತಂಡದ ಸದಸ್ಯರಾದ ಎಳ್ಳಾರೆ ಶ್ರೀನಿವಾಸ, ಕೆ.ಎಸ್‌.ಗೌತಮ, ಸಮರ್ಥ ಮಂಕಳಲೆ, ಸೂರ‍್ಯ, ಬೇದೂರು ಸಮರ್ಥ, ಭಾರತಿ, ಕೌಶಿಕ ದಂಪತಿ, ನಯನತಾರಾ, ಅಂಜಲಿ, ಸ್ವಾಧ್ವಿ, ಸುನೀಲ, ಪ್ರಶಾಂತ, ಶ್ಯಾಮ್‌ ಬಾಪಟ್‌, ಅನಿಲ, ಶರತ್‌, ಶಮಂತ್‌ ಪ್ರಯಾಣ ಬೆಳೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ