ಆ್ಯಪ್ನಗರ

ಇಬ್ಬರು ವೈದ್ಯರಿಗೆ 6 ಲಕ್ಷ ರೂ. ದಂಡ

ವೈದ್ಯರ ನಿರ್ಲಕ್ಷ ್ಯದಿಂದ ತೊಂದರೆ ಅನುಭವಿಸಿದ ಮಹಿಳೆಗೆ ಆರು ಲಕ್ಷ ರೂ. ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

Vijaya Karnataka 18 Jun 2019, 5:00 am
ಶಿವಮೊಗ್ಗ : ವೈದ್ಯರ ನಿರ್ಲಕ್ಷ ್ಯದಿಂದ ತೊಂದರೆ ಅನುಭವಿಸಿದ ಮಹಿಳೆಗೆ ಆರು ಲಕ್ಷ ರೂ. ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
Vijaya Karnataka Web 6 lakh for two doctors fine
ಇಬ್ಬರು ವೈದ್ಯರಿಗೆ 6 ಲಕ್ಷ ರೂ. ದಂಡ


ಕೆ.ಎ.ಗೀತಾ ಎಂಬುವವರು ದೈಹಿಕ ತೊಂದರೆ ಹಿನ್ನೆಲೆ ವೈದ್ಯರ ಸಲಹೆಯಂತೆ ಶಿವಮೊಗ್ಗದಲ್ಲಿ ವೈದ್ಯ ಡಾ.ಎಂ. ಮುರಳೀಧರರಾವ್‌ ಮತ್ತು ಡಾ.ವಿಜಯಲಕ್ಷ್ಮಿ ರವೀಶ್‌ ಅವರಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ, ವಿಪರೀತ ಜ್ವರ ಬಂದು ಪರಿಶೀಲಿಸಿದಾಗ ಗೀತಾ ಅವರ ಎಡಭಾಗದ ಕಿಡ್ನಿಯಲ್ಲಿ ಮೂತ್ರ ಶೇಖರಣೆಯಾಗಿ ಲೀವರ್‌, ಮೂತ್ರಕೋಶ ಹಿಗ್ಗಿ, ಮೂತ್ರನಾಳದಲ್ಲಿ ಅಡತಡೆ ಉಂಟಾಗಿರುವುದು ತಿಳಿದುಬಂದಿತ್ತು.

ಗರ್ಭಕೋಶದ ಶಸ್ತ್ರಚಿಕಿತ್ಸೆ ವೇಳೆ ಯುರೇಟರ್‌ ಸೇರುವ ಮೂತ್ರನಾಳಕ್ಕೆ ಹಾನಿ ಆಗಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ತಜ್ಞ ವೈದ್ಯರು ಖಚಿತಪಡಿಸಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ಸಂತ್ರಸ್ತ ಮಹಿಳೆ ಶಸ್ತ್ರಚಿಕಿತ್ಸೆ ಪಡೆದಿದ್ದಾರೆ.

ಈ ಬಗ್ಗೆ ಗೀತಾ ಅವರು, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ವೈದ್ಯಕೀಯ ನಿರ್ಲಕ್ಷ ್ಯತನದ ಸೇವಾ ನೂನ್ಯತೆಯನ್ನು ಪ್ರಶ್ನಿಸಿ ದೂರು ದಾಖಲಿಸಿದ್ದರು.

ದೂರನ್ನು ಕೈಗೆತ್ತಿಕೊಂಡ ವೇದಿಕೆಯು ವಿಚಾರಣೆ ಮಾಡಿ ಸೂಕ್ತ ದಾಖಲೆಗಳನ್ನು ಪರೀಶೀಲಿಸಿದಾಗ ವೈದ್ಯರಾದ ಡಾ.ಮುರಳೀಧರರಾವ್‌ ಹಾಗೂ ಡಾ.ವಿಜಯಲಕ್ಷ್ಮಿ ರವೀಶ್‌ ಅವರು ನಿರ್ಲಕ್ಷ ್ಯತನ ತೋರಿರುವುದು ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ, ತೊಂದರೆಗೊಳಗಾದ ಗೀತಾ ಅವರಿಗೆ ಆಗಿರುವ ಖರ್ಚು ಮತ್ತು ಮಾನಸಿಕ ನೋವು, ಹಿಂಸೆಗಾಗಿ 6 ಲಕ್ಷ ರೂ. ಪರಿಹಾರ, ಪ್ರಕರಣ ದಾಖಲಿಸಿದ ದಿನಾಂಕದಿಂದ ವಾರ್ಷಿಕ ಬಡ್ಡಿ ಶೇ.6ರಷ್ಟು ಹಾಗೂ ಪ್ರಕರಣ ದಾಖಲಿಸಲು ಆದ ಖರ್ಚು ವೆಚ್ಚಗಳಿಗಾಗಿ 30 ಸಾವಿರ ರೂ. ದಂಡ ವಿಧಿಸಲಾಗಿದೆ. ಆರು ವಾರಗಳೊಳಗೆ ಈ ಪರಿಹಾರ ಹಣವನ್ನು ನೀಡಬೇಕು. ತಪ್ಪಿದರೆ, ವಾರ್ಷಿಕ ಶೇ.10ರಷ್ಟು ಬಡ್ಡಿ ಸಹ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶದಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ