ಆ್ಯಪ್ನಗರ

60 ಟನ್‌ ಮಾವು ಮಾರಾಟ

ನಾಲ್ಕು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆದ ಮಾವು, ಹಲಸು, ಪ್ರದರ್ಶನ, ಮಾರಾಟ, ಜೇನು, ಸಾವಯವ ತೋಟಗಾರಿಕೆ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka 10 Jun 2019, 5:00 am
ಶಿವಮೊಗ್ಗ : ನಾಲ್ಕು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆದ ಮಾವು, ಹಲಸು, ಪ್ರದರ್ಶನ, ಮಾರಾಟ, ಜೇನು, ಸಾವಯವ ತೋಟಗಾರಿಕೆ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web 60 tons of mango sales
60 ಟನ್‌ ಮಾವು ಮಾರಾಟ


ತೋಟಗಾರಿಕೆ ಇಲಾಖೆಯಿಂದ ಜೂ.7ರಿಂದ 9ರ ವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಮೇಳದಲ್ಲಿ ಸಾವಿರಾರು ಜನ ಭೇಟಿ ನೀಡಿ ಮಾವು ಮತ್ತು ಹಲಸಿನ ಸ್ವಾದ ಸವಿದರು.

ಸುಮಾರು 60 ಟನ್‌ ಮಾವು, 4 ಟನ್‌ ಹಲಸು, 8 ಸಾವಿರ ಮಾವಿನ ಸಸಿಗಳ ಮಾರಾಟ ಮಾಡಲಾಯಿತು. ಮೇಳಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಕ್ಕಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾನಾ ಬಡಾವಣೆಗಳಿಂದ ಜನರು ಭಿನ್ನಭಿನ್ನ ಮಾವಿನ ಹಣ್ಣುಗಳನ್ನು ಖರೀದಿಸುವುದಕ್ಕೆ ಆಗಮಿಸಿದ್ದರು.

14-15 ಪ್ರಭೇದದ ಮಾವಿನ ಹಣ್ಣು ಮಾರಾಟಕ್ಕೆ ಇಡಲಾಗಿತ್ತು. 45-50 ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 8-10 ಪ್ರಭೇದ ಹಲಸಿನ ತಳಿಯ ಪ್ರದರ್ಶನ ಮತ್ತು 3ರಿಂದ 4 ಪ್ರಭೇದಗಳ ಮಾರಾಟ ನಡೆಯಿತು. ಶಿವಮೊಗ್ಗದಿಂದ ಮೂವರು ವ್ಯಾಪಾರಿಗಳು ಮೇಳದಲ್ಲಿ ಪಾಲ್ಗೊಂಡಿದ್ದರೆ, ರಾಮನಗರ, ಕೋಲಾರ, ಶ್ರೀನಿವಾಸಪುರ, ಚನ್ನರಾಯಪಟ್ಟಣದಿಂದಲೂ ವ್ಯಾಪಾರಿಗಳು ಆಗಮಿಸಿದ್ದರು.

ಮೂರು ದಿನ ನಡೆದ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರುವ ವರ್ಷವೂ ಆಯೋಜಿಸಲಾಗುವುದು. ಮೇಳ ಯಶಸ್ಸಿಗೆ ಬೆಂಬಲಿಸಿದ ಪ್ರತಿಯೊಬ್ಬರಿಗೆ ಧನ್ಯವಾದಗಳು.
- ಎಚ್‌.ಆರ್‌.ಯೋಗೇಶ್‌, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ