ಆ್ಯಪ್ನಗರ

ಜತ್ರೋಪ ಬೀಜ ತಿಂದು ಒಂದೇ ಶಾಲೆಯ 9 ಮಕ್ಕಳು ಅಸ್ವಸ್ಥ

ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಶಾಲೆಯೊಂದರ 9 ಮಕ್ಕಳು ಜತ್ರೋಪ ಬೀಜ ತಿಂದು ಅಸ್ವಸ್ಥರಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

Vijaya Karnataka 19 Jun 2019, 10:45 pm
ಶಿವಮೊಗ್ಗ : ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಶಾಲೆಯೊಂದರ 9 ಮಕ್ಕಳು ಜತ್ರೋಪ ಬೀಜ ತಿಂದು ಅಸ್ವಸ್ಥರಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
Vijaya Karnataka Web 9 children sick of the same school that eats jatropa seed
ಜತ್ರೋಪ ಬೀಜ ತಿಂದು ಒಂದೇ ಶಾಲೆಯ 9 ಮಕ್ಕಳು ಅಸ್ವಸ್ಥ


ಶಾರದಾ ವಿದ್ಯಾಮಂದಿರದ ಐದನೇ ತರಗತಿಯ ಮಕ್ಕಳು ಅಸ್ವಸ್ಥರಾಗಿ ನಗರದ ಮೆಗ್ಗಾನ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲೆ ಪಕ್ಕದ ತೋಟವೊಂದರಲ್ಲಿ ಬೆಳೆದಿದ್ದ ಜತ್ರೋಪ ಗಿಡದಲ್ಲಿದ್ದ ಬೀಜಗಳನ್ನು ಸೇವಿಸಿದ್ದಾರೆ. ಜತೆಗೆ, ನಂತರ ತಿನ್ನುವುದಕ್ಕಾಗಿ ಬ್ಯಾಗ್‌ನಲ್ಲೂ ಬೀಜಗಳನ್ನು ಇಟ್ಟುಕೊಂಡಿದ್ದಾರೆ.

ಆದರೆ, ತಿಂದು ಒಂದು ಗಂಟೆ ಬಳಿಕ ಮಕ್ಕಳು ವಾಂತಿ ಮಾಡಲಾರಂಭಿಸಿದ್ದಾರೆ. ಇದರಿಂದ, ಗಾಬರಿಯಾದ ಪಾಲಕರು ಅಸ್ವಸ್ಥಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚುವರಿ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ಕರೆತಂದಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ವೇಕ್ಷ ಣಾ ಡಾಕ್ಟರ್‌ ಶಂಕರಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ