ಆ್ಯಪ್ನಗರ

29ಕ್ಕೆ ಭಾವಸಾರ ವಧು -ವರರ ಮಹಾ ಸಮಾವೇಶ

ನಗರದ ಭಾವಸಾರ ಲಗ್ನ ವೇದಿಕೆ ವತಿಯಿಂದ ಸೆ.29ರಂದು ಬೆಳಗ್ಗೆ 9ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿಭಾವಸಾರ ವಧು -ವರರ 6ನೇ ಮಹಾ ಸಮಾವೇಶ ನಡೆಯಲಿದೆ.

Vijaya Karnataka 17 Sep 2019, 5:00 am
ಶಿವಮೊಗ್ಗ: ನಗರದ ಭಾವಸಾರ ಲಗ್ನ ವೇದಿಕೆ ವತಿಯಿಂದ ಸೆ.29ರಂದು ಬೆಳಗ್ಗೆ 9ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿಭಾವಸಾರ ವಧು -ವರರ 6ನೇ ಮಹಾ ಸಮಾವೇಶ ನಡೆಯಲಿದೆ.
Vijaya Karnataka Web a grand convention of the bavasara bride and groom for the 29th
29ಕ್ಕೆ ಭಾವಸಾರ ವಧು -ವರರ ಮಹಾ ಸಮಾವೇಶ


ಮಹಾಸಮಾವೇಶದಲ್ಲಿರಾಜ್ಯದ ನಾನಾ ಭಾಗದಿಂದ ವಧು, ವರರು ಆಗಮಿಸಲಿದ್ದು, ಶಿವಮೊಗ್ಗ ಭಾವಸಾರ ಸಮಾಜದಲ್ಲಿಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಹಾಗೂ ಪದವೀಧರರಲ್ಲದವರಿಗೆ ಉಚಿತವಾಗಿ ನೋಂದಣಿ ಮಾಡಲಾಗುವುದು ಎಂದು ವೇದಿಕೆ ಕಾರ್ಯದರ್ಶಿ ಶಂಕರರಾವ್‌ ಬೇಂದ್ರೆ ಸೋಮವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಭಾವಸಾರ ಲಗ್ನವೇದಿಕೆಯಿಂದ ಇಲ್ಲಿಯವರೆಗೆ 5 ಮಹಾ ಸಮಾವೇಶಗಳು ನಡೆದಿದ್ದು, ಸುಮಾರು 1870ಕ್ಕಿಂತ ಹೆಚ್ಚು ದಾಖಲಾತಿ ನಡೆದಿವೆ. ಅದರಲ್ಲಿ918 ಮದುವೆಗಳು ನಡೆದಿವೆ. ಮುಂದಿನ ದಿನಗಳಲ್ಲಿಆರ್ಥಿಕವಾಗಿ ಹಿಂದುಳಿದಿರುವ ವಧು-ವರರ ಉಚಿತ ದಾಖಲೆ ಹಾಗೂ ವಿಚ್ಛೇದಿತರ ಮದುವೆಯ ಪ್ರಯತ್ನಗಳು ನಡೆಯುತ್ತಿವೆ ಎಂದರು. ಗೋಷ್ಠಿಯಲ್ಲಿಪ್ರಮುಖರಾದ ಎಂ.ಆರ್‌.ಸೂರ್ಯಕಾಂತರಾವ್‌, ಎನ್‌.ಟಿ.ನಾರಾಯಣರಾವ್‌, ಬಿ.ಎಸ್‌.ಶಂಕರರಾವ್‌, ಡಿ.ಪಿ.ವಿಶ್ವನಾಥ್‌, ಟಿ.ವಿ.ಸತ್ಯನಾರಾಯಣ, ಡಿ.ಎಂ.ಲಕ್ಷ್ಮೇಕಾಂತ್‌, ಎನ್‌.ಜೆ.ನಟರಾಜ್‌, ಸ್‌.ವಿ.ಮುರುಳೀಧರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ