ಆ್ಯಪ್ನಗರ

ಮಹಿಳೆ ಚಿನ್ನದ ಸರ ಕಸಿದು ನುಂಗಿದ ಮಾನಸಿಕ ಅಸ್ವಸ್ಥ!

ಯುವಕರಿಂದ ಪೆಟ್ಟು ತಿಂದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಬಂದ ಮಾನಸಿಕ ಅಸ್ವಸ್ಥನೊಬ್ಬ ಎಲ್ಲರೆದುರಲ್ಲೇ ಮಹಿಳೆಯ ಚಿನ್ನದ ಸರ ಕಸಿದು ನುಂಗಿದ ವಿಲಕ್ಷಣ ಘಟನೆ ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಮವಾರ ನಡೆಯಿತು.

ವಿಕ ಸುದ್ದಿಲೋಕ 8 Mar 2016, 4:00 am
ಶಿವಮೊಗ್ಗ: ಯುವಕರಿಂದ ಪೆಟ್ಟು ತಿಂದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಬಂದ ಮಾನಸಿಕ ಅಸ್ವಸ್ಥನೊಬ್ಬ ಎಲ್ಲರೆದುರಲ್ಲೇ ಮಹಿಳೆಯ ಚಿನ್ನದ ಸರ ಕಸಿದು ನುಂಗಿದ ವಿಲಕ್ಷಣ ಘಟನೆ ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಮವಾರ ನಡೆಯಿತು.
Vijaya Karnataka Web a mentally ill man who swallowed gold chain of woman
ಮಹಿಳೆ ಚಿನ್ನದ ಸರ ಕಸಿದು ನುಂಗಿದ ಮಾನಸಿಕ ಅಸ್ವಸ್ಥ!


ಚಿಕ್ಕಮಗಳೂರು ತಾಲೂಕು ಆಲ್ದೂರಿನ ಅಭಿಷೇಕ್ (30) ಬಸವಾಪುರ ಗ್ರಾಮದಲ್ಲಿ ಅಸಂಬದ್ಧವಾಗಿ ಮಾತನಾಡಿದ್ದ. ಇದರಿಂದ ರೊಚ್ಚಿಗೆದ್ದ ಯುವಕರು ಆತನನ್ನು ಥಳಿಸಿದ್ದರು. ಮಧ್ಯಪ್ರವೇಶಿಸಿದ ಗ್ರಾಮಸ್ಥರು 108 ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕಳುಹಿಸಿದ್ದರು.

ಮುಖ ಮತ್ತು ಕೈಕಾಲು ಗಾಯ ಮಾಡಿಕೊಂಡಿದ್ದ ಈತನನ್ನು ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದ ಬಳಿ ಗಾಲಿಕುರ್ಚಿ ಮೇಲೆ ಕೂರಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ, ಸ್ವಲ್ಪ ದೂರದಲ್ಲೇ ಇದ್ದ ಆಸ್ಪತ್ರೆಯ ಕೌಂಟರ್‌ಗೆ ಹೋಗಿ ಚೀಟಿ ಬರೆಸುತ್ತಿದ್ದರು. ಅದೇ ವೇಳೆ ಅಲ್ಲಿಗೆ ಮಹಿಳೆಯೊಬ್ಬರು ಬಂದಿದ್ದಾರೆ. ಅವರು ಧರಿಸಿದ್ದ ಚಿನ್ನದ ಸರವನ್ನು ಎಲ್ಲರೆದುರಲ್ಲೇ ಆತ ಕಸಿದಿದ್ದಾನೆ. ಅರ್ಧ ತುಂಡಾಗಿ ಕೈಗೆ ಬಂದ ಸರವನ್ನು ನುಂಗಿದ್ದಾನೆ.

ಕ್ಷಣ ಮಾತ್ರದಲ್ಲಿ ನಡೆದು ಹೋದ ಘಟನೆಯಿಂದ ಅಚ್ಚರಿಗೊಂಡ ಜನರು, ಆತನನ್ನು ಹಿಡಿದು ಪ್ರಶ್ನಿಸಲು ಹೋದಾಗ ಅವರನ್ನೂ ಮನಬಂದಂತೆ ಥಳಿಸಿದ್ದಾನೆ. ಭದ್ರತಾ ಸಿಬ್ಬಂದಿಯೊಬ್ಬರಿಗೆ ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಸಾಲದೆಂಬಂತೆ ಎಲ್ಲರೆದುರೇ ಬೆತ್ತಲಾಗಿದ್ದಾನೆ. ಕಿಟಕಿ ಸರಳುಗಳಿಗೆ ತಲೆ ಚಚ್ಚಿಕೊಳ್ಳಲಾರಂಭಿಸಿದ್ದಾನೆ. ಹೆಚ್ಚಿನ ಜನರು ಸೇರಿ ಅಭಿಷೇಕ್‌ನನ್ನು ಹಿಡಿದು ಕೈ ಕಾಲು ಕಟ್ಟಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವೈದ್ಯರು ಕೊಟ್ಟ ಮಾತ್ರೆಯನ್ನು ನುಂಗಿಸಿದ್ದಾರೆ. ವಾಂತಿಯ ಜತೆ ಸರವೂ ಹೊರಬಂದಿದೆ. ಮಹಿಳೆಗೆ ಅದನ್ನು ಹಿಂತಿರುಗಿಸಿದ್ದಾರೆ. ಚಿಕಿತ್ಸೆ ಬಳಿಕ ಸಂಜೆ ವೇಳೆಗೆ ಈತನ ಮನಸ್ಥಿತಿ ತಹಬಂದಿಗೆ ಬಂದಾಗ ಹೆಸರು, ವಿಳಾಸ ಹೇಳಿಕೊಂಡಿದ್ದಾನೆ ಎಂದು ದೊಡ್ಡಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ