ಆ್ಯಪ್ನಗರ

ವಿದ್ಯಾರ್ಥಿಗೆ ಸೈಕಲ್‌ ಸಹಕಾರಿ

ಸೈಕಲ್‌ ವಿತರಣೆ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಶಾಲೆ ಮಕ್ಕಳಿಗೆ ಸರಕಾರ ನೀಡುವ ಯಾವುದೇ ವಸ್ತುಗಳಾದರೂ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ತಾ.ಪಂ. ಸದಸ್ಯ ಸೋಮಶೇಖರ್‌ ಲಾವಿಗ್ಗೆರೆ ಹೇಳಿದರು.

Vijaya Karnataka 9 Feb 2019, 5:00 am
ತ್ಯಾಗರ್ತಿ: ಸೈಕಲ್‌ ವಿತರಣೆ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಶಾಲೆ ಮಕ್ಕಳಿಗೆ ಸರಕಾರ ನೀಡುವ ಯಾವುದೇ ವಸ್ತುಗಳಾದರೂ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ತಾ.ಪಂ. ಸದಸ್ಯ ಸೋಮಶೇಖರ್‌ ಲಾವಿಗ್ಗೆರೆ ಹೇಳಿದರು.
Vijaya Karnataka Web SMR-7TGT1


ಸಮೀಪದ ಕೆಳಗಿನಮನೆ ಸರಕಾರಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಬುಧವಾರ ಸೈಕಲ್‌ ವಿತರಿಸಿ ಅವರು ಮಾತನಾಡಿ, ವಿದ್ಯಾಭ್ಯಾಸಕ್ಕೆ ತಂದೆ ತಾಯಿ ನೀಡಿದ ಪ್ರೋತ್ಸಾಹವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕ ಗಳಿಸಿ ಶಾಲೆಗೆ ಕೀರ್ತಿ ತರುವಂತಾಗಬೇಕೆಂದರು. ಹೈಸ್ಕೂಲ್‌ನಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ವೈಯುಕ್ತಿಕವಾಗಿ ಕಂಪ್ಯೂಟರ್‌ ವಿತರಿಸುವುದಾಗಿ ಈ ಸಂದರ್ಭ ಹೇಳಿದರು. ಹಿರೇಬಿಲಗುಂಜಿ ಗ್ರಾ.ಪಂ.ಅಧ್ಯಕ್ಷ ರಾಮಪ್ಪ, ಸದಸ್ಯರಾದ ಮಲ್ಲಿಕಾ ಮಂಜುನಾಥ್‌, ಲಿಂಗಪ್ಪ, ಪಿಡಿಒ ಆಶ್ಪಾಕ್‌ಅಹಮದ್‌, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್‌, ಉಪಾಧ್ಯಕ್ಷೆ ಸುನೀತಾ, ಮುಖ್ಯ ಶಿಕ್ಷ ಕ ಚಂದ್ರಪ್ಪ, ಸಹಶಿಕ್ಷ ಕರಾದ ನಾರಾಯಣಪ್ಪ, ರಾಘವೇಂದ್ರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ