ಆ್ಯಪ್ನಗರ

ಸದೃಢ ಆರೋಗ್ಯದಿಂದ ಸುಸ್ಥಿರ ಸಮಾಜ

ಸುಸ್ಥಿರ ಸಮಾಜ ನಿರ್ಮಾಣಕ್ಕೆ ಹದಿಹರೆಯದವರು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅರೆವಳಿಕೆ ತಜ್ಞ ಡಾ.ಬಿ.ಜಿ.ಸಂಗಂ ಹೇಳಿದರು.

Vijaya Karnataka 20 Mar 2019, 5:00 am
ಸಾಗರ : ಸುಸ್ಥಿರ ಸಮಾಜ ನಿರ್ಮಾಣಕ್ಕೆ ಹದಿಹರೆಯದವರು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅರೆವಳಿಕೆ ತಜ್ಞ ಡಾ.ಬಿ.ಜಿ.ಸಂಗಂ ಹೇಳಿದರು.
Vijaya Karnataka Web SMR-19sgr11


ಇಲ್ಲಿನ ಶ್ರೀಮತಿ ಇಂದಿರಾ ಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಯುವ ರೆಡ್‌ ಕ್ರಾಸ್‌ ಘಟಕ, ಸಾಗರದ ರೋಟರಿ ರೆಡ್‌ಕ್ರಾಸ್‌ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ 'ಮಹಿಳೆ ಮತ್ತು ಆರೋಗ್ಯ' ಕಾರ‍್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಂತ ಸಮಾಜ ನಿರ್ಮಾಣ ಯುವಜನರಿಂದ ಸಾಧ್ಯ. ಯುವಜನರಲ್ಲಿ ಜಾಗೃತಿ ಮೂಡಿಸಲು ರೋಟರಿ ರೆಡ್‌ಕ್ರಾಸ್‌ ರಕ್ತನಿಧಿ ಕೇಂದ್ರವು ಆರೋಗ್ಯ ಮಾಲಿಕೆ ಕಾರ್ಯಕ್ರಮದಡಿ ಇಂತಹ ಕಾರ್ಯಾಗಾರ ಏರ್ಪಡಿಸಿರುವುದು ಶ್ಲಾಘನೀಯ. ಯುವತಿಯರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವುದು ಅವಶ್ಯಕ ಎಂದರು.

ಡಾ. ಸೌಮ್ಯ , ಡಾ . ಜಯಲಕ್ಷ್ಮಿ, ಪ್ರೊ. ದೀಪಾ ಮಾತನಾಡಿದರು. ಪ್ರಾಚಾರ‍್ಯ ಡಾ. ಅಶೋಕ್‌ ಡಿ. ರೇವಣಕರ್‌ ಅಧ್ಯಕ್ಷ ತೆ ವಹಿಸಿದ್ದರು. ದಿವ್ಯಾ ಪಿ. ಗೌಡರ್‌ ಪ್ರಾರ್ಥಿಸಿದರು. ಎಸ್‌.ರೂಪಾ ಸ್ವಾಗತಿಸಿದರು. ಸ್ವಾತಿ ವಂದಿಸಿದರು. ಸುಷ್ಮಿತ ನಿರೂಪಿಸಿದರು. ಡಾ. ಕೆ. ಪ್ರಭಾಕರ ರಾವ್‌, ಪ್ರೊ. ಮಹದೇವ ಜಿ. ರಂಗಣ್ಣನವರ್‌ ಮತ್ತು ರಕ್ತನಿಧಿ ಕೇಂದ್ರದ ಪ್ರಸನ್ನ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ