ಆ್ಯಪ್ನಗರ

ಭದ್ರಾ ನದಿಯಲ್ಲಿಕೊಚ್ಚಿ ಹೋದ ಯುವಕ

ಭದ್ರಾ ನದಿಯಲ್ಲಿತೆಪ್ಪದಲ್ಲಿಸಾಗುತ್ತಿದ್ದ ಯುವಕರಲ್ಲಿಒಬ್ಬ ಕೊಚ್ಚಿಕೊಂಡು ಹೋದ ಘಟನೆ ಮಂಗಳವಾರ ನಡೆದಿದೆ.

Vijaya Karnataka 11 Sep 2019, 5:00 am
ಭದ್ರಾವತಿ: ಭದ್ರಾ ನದಿಯಲ್ಲಿತೆಪ್ಪದಲ್ಲಿಸಾಗುತ್ತಿದ್ದ ಯುವಕರಲ್ಲಿಒಬ್ಬ ಕೊಚ್ಚಿಕೊಂಡು ಹೋದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web 10BDVT2_46

ನಗರದ ಯಕಿನ್ಷಾ ಕಾಲೊನಿಯ ತಮೀಮ್‌, ಜಬಿ ಹಾಗೂ ಅಜರ್‌ ಎಂಬ ಮೂವರು ಯುವಕರು ನದಿಯಲ್ಲಿಆಟವಾಡಲು ತೆಪ್ಪದಲ್ಲಿತೆರಳಿದ್ದರು. ನದಿಯ ಮಧ್ಯದಲ್ಲಿಹುಟ್ಟು ಕೈತಪ್ಪಿದ್ದು, ನೀರಿನ ರಬಸಕ್ಕೆ ತೆಪ್ಪ ತೇಲಿಕೊಂಡು ಹೋದ ಹಿನ್ನೆಲೆಯಲ್ಲಿತಮೀಮ್‌ ಎಂಬುವವನು ನದಿಯಲ್ಲಿಸಿಲುಕಿ ಕೊಚ್ಚಿಹೋಗಿದ್ದಾನೆ. ಜಬಿ ಎಂಬ ಯುವಕ ನೀರಿಗೆ ಜಿಗಿದು ಈಜಿಕೊಂಡು ಬಂದರೆ, ಮತ್ತೊಬ್ಬ ಯುವಕ ಅಜರ್‌ನಿಗೆ ಮರವೊಂದು ಸಿಕ್ಕ ಹಿನ್ನೆಲೆಯಲ್ಲಿಅದನ್ನು ಹಿಡಿದುಕೊಡಿದ್ದು, ಆತನನ್ನು ರಕ್ಷಿಸಲಾಯಿತು. ತಮೀಮ್‌ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಹಳೇನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಕೊಚ್ಚಿ ಹೋದ ಯುವಕನಿಗಾಗಿ ಶೋಧಕಾರ್ಯ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ