ಆ್ಯಪ್ನಗರ

ಎಸಿಬಿ ಬಲೆಗೆ ಉಪ ತಹಸೀಲ್ದಾರ್‌

ಆದಾಯ ಪ್ರಮಾಣ ಪತ್ರಕ್ಕೆ ಹಣದ ಬೇಡಿಕೆ ಇಟ್ಟು 8ಸಾವಿರ ರೂ. ಸ್ವೀಕರಿಸುತ್ತಿದ್ದ ನಿದಿಗೆ ಹೋಬಳಿ ನಾಡಕಚೇರಿಯ ಉಪ ತಹಸೀಲ್ದಾರ್‌ ಪ್ರದೀಪ್‌ ಭ್ರಷ್ಟಾಚಾರ ನಿಗ್ರಹದಳ ಕೈಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ.

Vijaya Karnataka 22 May 2019, 5:00 am
ಶಿವಮೊಗ್ಗ : ಆದಾಯ ಪ್ರಮಾಣ ಪತ್ರಕ್ಕೆ ಹಣದ ಬೇಡಿಕೆ ಇಟ್ಟು 8ಸಾವಿರ ರೂ. ಸ್ವೀಕರಿಸುತ್ತಿದ್ದ ನಿದಿಗೆ ಹೋಬಳಿ ನಾಡಕಚೇರಿಯ ಉಪ ತಹಸೀಲ್ದಾರ್‌ ಪ್ರದೀಪ್‌ ಭ್ರಷ್ಟಾಚಾರ ನಿಗ್ರಹದಳ ಕೈಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ.
Vijaya Karnataka Web acb trap sub tahsildar
ಎಸಿಬಿ ಬಲೆಗೆ ಉಪ ತಹಸೀಲ್ದಾರ್‌


ಭದ್ರಾವತಿ ತಾಲೂಕು ನಿವಾಸಿಯೊಬ್ಬರು ಶಿವಮೊಗ್ಗ ನಿದಿಗೆ ನಾಡ ಕಚೇರಿ ವ್ಯಾಪ್ತಿಯಲ್ಲಿ ವಾಸವಾಗಿದ್ದ ತಮ್ಮ ಅತ್ತೆಗೆ ಯಾವುದೇ ಆದಾಯ ಇಲ್ಲದ ಕಾರಣ ಜೀವನೋಪಾಯಕ್ಕಾಗಿ ವೃದ್ಧಾಪ್ಯ ವೇತನ ಪಡೆಯಲು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಉಪ ತಹಸೀಲ್ದಾರ್‌ ಪ್ರದೀಪ್‌ ಆದಾಯ ಪ್ರಮಾಣ ಪತ್ರ ಕೊಡಲು 15ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಇದಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿಯು ಎಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ 8ಸಾವಿರ ರೂ.ಗಳನ್ನು ಸ್ವೀಕರಿಸುವಾಗ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ