ಆ್ಯಪ್ನಗರ

ಸೋಲು, ಗೆಲುವು ಸಮಾನ ಸ್ವೀಕರಿಸಿ

ನಿಜವಾದ ಕ್ರೀಡಾಪಟು ಸೋಲು ಹಾಗೂ ಗೆಲುವು ಸಮಾನವಾಗಿ ಸ್ವೀಕರಿಸಬೇಕೆಂದು ಜಿಲ್ಲಾಪಂಚಾಯಿತಿ ಸದಸ್ಯೆ ಡಿ.ಆರ್‌.ರೇಖಾ ಉಮೇಶ್‌ ಹೇಳಿದರು.

Vijaya Karnataka 30 Aug 2019, 5:00 am
ಹೊಳೆಹೊನ್ನೂರು: ನಿಜವಾದ ಕ್ರೀಡಾಪಟು ಸೋಲು ಹಾಗೂ ಗೆಲುವು ಸಮಾನವಾಗಿ ಸ್ವೀಕರಿಸಬೇಕೆಂದು ಜಿಲ್ಲಾಪಂಚಾಯಿತಿ ಸದಸ್ಯೆ ಡಿ.ಆರ್‌.ರೇಖಾ ಉಮೇಶ್‌ ಹೇಳಿದರು.
Vijaya Karnataka Web accept defeat victory equal
ಸೋಲು, ಗೆಲುವು ಸಮಾನ ಸ್ವೀಕರಿಸಿ


ಪಟ್ಟಣ ಸಮೀಪದ ಅರಹತೊಳಲು ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿಹನುಮಂತಾಪುರ ಹಾಗೂ ಭಗವತಿಕೆರೆ ಶಾಲೆಗಳ ಸಹಯೋಗದಲ್ಲಿಗುರುವಾರ ನಡೆದ 2019-20 ನೇ ಸಾಲಿನ 14 ವರ್ಷ ವಯೋಮಿತಿಯೊಳಗಿನ ಕಲ್ಲಿಹಾಳ್‌ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿಆರೋಗ್ಯ ಮತ್ತು ಶಿಸ್ತು ವೃದ್ಧಿಯಾಗಲು ಕ್ರೀಡೆ ಸಹಕಾರಿ. ಕೇವಲ ಪುಸ್ತಕದ ಹುಳು ಆಗದೇ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿತೊಡಗಿಸಿಕೊಂಡಾಗ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಉತ್ತಮ ಜೀವನ ಮೌಲ್ಯ ಮೈಗೂಡಿಸಿಕೊಳ್ಳುವುದು ಅನಿವಾರ‍್ಯ. ಆಗ ಮಾತ್ರ ಸಮಾಜದಲ್ಲಿಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.

ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಜಿ.ಎಸ್‌.ಶಿವರುದ್ರಪ್ಪ ಅವರ ರಚನೆಯ ರೈತ ಗೀತೆ ಹಾಡಿದರು. ಹನುಮಂತಾಪುರ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದೋಜಿರಾವ್‌ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಅಧ್ಯಕ್ಷೆ ಆಶಾ ಶ್ರೀಧರ್‌, ಗಾ.್ರಪಂ.ಅಧ್ಯಕ್ಷ ಎಂ.ಚಂದ್ರಪ್ಪ, ಹನಮಂತಾಪುರ ಗ್ರಾ.ಪಂ. ಅಧ್ಯಕ್ಷೆ ಪದ್ಮಾ, ಸದಸ್ಯರಾದ ಚಂದ್ರು, ಆರ್‌.ರಾಜಪ್ಪ, ಲೋಕೇಶ್‌, ಇಸಿಓ ಶ್ಯಾಮಲಾ, ಓಂಕಾರಪ್ಪ, ಮುಖ್ಯ ಶಿಕ್ಷಕರು, ಎಸ್‌.ಬಿ.ಪದ್ಮಾ, ಪುಟ್ಟರಾಜು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ