ಆ್ಯಪ್ನಗರ

ಅಪಘಾತ: ತಂದೆ, ಮಗ ಸ್ಥಳದಲ್ಲೇ ಸಾವು

ತಾಲೂಕಿನ ಭೀಮನಕೋಣೆ ಸಮೀಪದ ಮುಂಗರವಳ್ಳಿ ಬಳಿ ದ್ವಿಚಕ್ರವಾಹನ ಮತ್ತು ನಾಟ ಸಾಗಿಸುತ್ತಿದ್ದ ಲಾರಿ ಪರಸ್ಪರ ಡಿಕ್ಕಿಯಾಗಿ ತಂದೆ ಮತ್ತು ಪುಟ್ಟ ಮಗ ಸ್ಥಳದಲ್ಲೇ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುರುವಾರ ನಡೆದಿದೆ.

Vijaya Karnataka 28 Jun 2019, 5:00 am
ಸಾಗರ: : ತಾಲೂಕಿನ ಭೀಮನಕೋಣೆ ಸಮೀಪದ ಮುಂಗರವಳ್ಳಿ ಬಳಿ ದ್ವಿಚಕ್ರವಾಹನ ಮತ್ತು ನಾಟ ಸಾಗಿಸುತ್ತಿದ್ದ ಲಾರಿ ಪರಸ್ಪರ ಡಿಕ್ಕಿಯಾಗಿ ತಂದೆ ಮತ್ತು ಪುಟ್ಟ ಮಗ ಸ್ಥಳದಲ್ಲೇ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುರುವಾರ ನಡೆದಿದೆ.
Vijaya Karnataka Web accident father son spot death
ಅಪಘಾತ: ತಂದೆ, ಮಗ ಸ್ಥಳದಲ್ಲೇ ಸಾವು


ತಾಲೂಕಿನ ಕಳಸವಳ್ಳಿ ವಾಸಿಗಳಾದ ಗಿರೀಶ್‌(35) ಮತ್ತು ಮಗ ಸುದೀಪ್‌(6) ಮೃತಪಟ್ಟವರು. ಗುರುವಾರದ ಸಂತೆ ಪೂರೈಸಿಕೊಂಡು ಗಿರೀಶ್‌, ಮಗ ಸುದೀಪ್‌ ಹಾಗೂ ಪತ್ನಿ ಮೂವರು ದ್ವಿಚಕ್ರವಾಹನದಲ್ಲಿ ಕಳಸವಳ್ಳಿಗೆ ತೆರಳುತ್ತಿದ್ದರು. ಈ ಸಂದರ್ಭ ಹೊಸನಗರದಿಂದ ಸಾಗರಕ್ಕೆ ಬರುತ್ತಿದ್ದ ನಾಟ ತುಂಬಿದ ಲಾರಿ ಎದುರಿನಿಂದ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ