ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ: ಬೈಕ್ ಸವಾರರಿಬ್ಬರ ಸಾವು
ಶಿವಮೊಗ್ಗ ಹೊರವಲಯದ ಪೆಸಿಟ್ ಕಾಲೇಜು ಬಳಿ ಭೀಕರ ಅಪಘಾತ ನಡೆದಿದ್ದು, ಶಕ್ತಧಾಮದಲ್ಲಿರುವ ಸಂಬಂಧಿಯ ಮನೆ ಗೃಹಪ್ರವೇಶ ಮುಗಿಸಿಕೊಂಡು ರಸ್ತೆ ತಿರುವು ದಾಟುವಾಗ ಹಿಂಬದಿಯಿಂದ ಕಾರು ಅಪ್ಪಳಿಸಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ
Vijaya Karnataka Web 17 Feb 2019, 9:29 pm
ಶಿವಮೊಗ್ಗ: ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಸಿಂಗನಮನೆ ಗ್ರಾಮ ಪಂಚಾಯತಿ ಸದಸ್ಯ 52 ವರ್ಷದ ವೀರಭದ್ರಪ್ಪ ಹಾಗೂ 50 ವರ್ಷದ ಹೊರಬೈಲಿನ ಮಂಜುನಾಥ ಮೃತಪಟ್ಟಿದ್ದಾರೆ.
ಶಿವಮೊಗ್ಗ ಹೊರವಲಯದ ಪೆಸಿಟ್ ಕಾಲೇಜು ಬಳಿ ಈ ಭೀಕರ ಅಪಘಾತ ನಡೆದಿದ್ದು, ಶಕ್ತಧಾಮದಲ್ಲಿರುವ ಸಂಬಂಧಿಯ ಮನೆ ಗೃಹಪ್ರವೇಶ ಮುಗಿಸಿಕೊಂಡು ರಸ್ತೆ ತಿರುವು ದಾಟುವಾಗ ಹಿಂಬದಿಯಿಂದ ಕಾರು ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಹೊರವಲಯದ ಪೆಸಿಟ್ ಕಾಲೇಜು ಬಳಿ ಈ ಭೀಕರ ಅಪಘಾತ ನಡೆದಿದ್ದು, ಶಕ್ತಧಾಮದಲ್ಲಿರುವ ಸಂಬಂಧಿಯ ಮನೆ ಗೃಹಪ್ರವೇಶ ಮುಗಿಸಿಕೊಂಡು ರಸ್ತೆ ತಿರುವು ದಾಟುವಾಗ ಹಿಂಬದಿಯಿಂದ ಕಾರು ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.