ಆನಂದಪುರಂ: ಮಧ್ಯಕಣ್ಣೂರಿನಲ್ಲಿ ಆಟೋ ಮತ್ತು ಕಾರು ಡಿಕ್ಕಿಯಾಗಿ ಆಟೋ ಚಾಲಕನಿಗೆ ಗಂಭೀರ ಗಾಯವಾದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಆನಂದಪುರಂ-ಶಿಕಾರಿಪುರ ಸಂಪರ್ಕದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ನರಸೀಪುರದ ನಾಟಿ ವೈದ್ಯರ ಮನೆಗೆ ಔಷಧ ಪಡೆಯಲು ಕಾರು ಮತ್ತು ಅದರ ಹಿಂದೆ ಆಟೋ ಸಾಗುತ್ತಿತ್ತು. ಎದುರಿಗೆ ಪ್ರಾಣಿಯೊಂದು ಅಡ್ಡ ಬಂದ ಕಾರಣ ಕಾರು ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ವೇಗವಾಗಿ ಬರುತ್ತಿದ್ದ ಆಟೋ ಕಾರಿನ ಹಿಂಭಾಗಕ್ಕೆ ಗುದ್ದಿ ಹೆದ್ದಾರಿ ಪಕ್ಕದ ಇಳಿಜಾರಿಗೆ ಜಾರಿ ಪಲ್ಟಿ ಹೊಡೆದಿದೆ. ಆಟೋ ಚಾಲಕನ ಕಾಲು ಮತ್ತು ಕೈಗೆ ಗಂಭೀರ ಗಾಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಆಟೋ ಎನ್ನಲಾಗಿದೆ. ಆಟೋದಲ್ಲಿ ಇಬ್ಬರು ಪ್ರಯಾಣಿಕರು ಇದ್ದರು. ಅವರಿಗೂ ಸಹ ಸಣ್ಣ ಪುಟ್ಟ ಗಾಯವಾಗಿದೆ. ಕಾರು ಗೌತಮಪುರ ಗ್ರಾಮದ ವ್ಯಕ್ತಿಯೊಬ್ಬನದ್ದಾಗಿದೆ ಎಂದು ತಿಳಿದು ಬಂದಿದೆ. ಚಾಲಕನ ಹೆಸರು ಇತ್ಯಾದಿ ಮಾಹಿತಿ ಲಭ್ಯವಾಗಿಲ್ಲ.
ಅಪಘಾತ: ಆಟೋ ಚಾಲಕನಿಗೆ ಗಾಯ
ಮಧ್ಯಕಣ್ಣೂರಿನಲ್ಲಿ ಆಟೋ ಮತ್ತು ಕಾರು ಡಿಕ್ಕಿಯಾಗಿ ಆಟೋ ಚಾಲಕನಿಗೆ ಗಂಭೀರ ಗಾಯವಾದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.
Vivity Labs 8 Jul 2019, 5:00 am