ಆ್ಯಪ್ನಗರ

ಅಪಘಾತ: ಇಬ್ಬರು ಸಾವು

ತಾಲೂಕಿನ ಮರಸ ಗ್ರಾಮದ ಬಳಿ ಸೊರಬ ಸಾಗರ ರಸ್ತೆಯಲ್ಲಿ ಲಾರಿ ಮತ್ತು ದ್ವಿಚಕ್ರವಾಹನ ಮುಖಾಮುಖಿ ಭಾನುವಾರ ಡಿಕ್ಕಿಯಾಗಿದ್ದು, ದ್ವಿಚಕ್ರವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijaya Karnataka 17 Jun 2019, 5:00 am
ಸಾಗರ: ತಾಲೂಕಿನ ಮರಸ ಗ್ರಾಮದ ಬಳಿ ಸೊರಬ ಸಾಗರ ರಸ್ತೆಯಲ್ಲಿ ಲಾರಿ ಮತ್ತು ದ್ವಿಚಕ್ರವಾಹನ ಮುಖಾಮುಖಿ ಭಾನುವಾರ ಡಿಕ್ಕಿಯಾಗಿದ್ದು, ದ್ವಿಚಕ್ರವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web accident two deaths
ಅಪಘಾತ: ಇಬ್ಬರು ಸಾವು


ಗದಗ ಜಿಲ್ಲೆ ಲಕ್ಷ್ಮೇಶ್ವರದ ಹನುಮಂತ ಬಿನ್‌ ಚೋಳಪ್ಪ(20) ಮತ್ತು ಆತನ ಸ್ನೇಹಿತ ಮಂಜುನಾಥ ಬಿನ್‌ ಬಿಪ್ಪನಗೌಡ (22) ಮೃತಪಟ್ಟವರು. ಹನುಮಂತ ಸ್ನೇಹಿತ ಮಂಜುನಾಥನೊಂದಿಗೆ ಉಡುಪಿ ಸಮೀಪದ ಕಾಪುವಿನ ಪೊಲೀಸ್‌ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಮಾವ ಚಂದ್ರಶೇಖರ್‌ ಅವರಿಗೆ ದ್ವಿಚಕ್ರವಾಹನ ನೀಡಲು ಅದೇ ವಾಹನದಲ್ಲಿ ಹೊರಟಿದ್ದರು. ಈ ಸಂದರ್ಭ ಸಾಗರದಿಂದ ಸೊರಬಕ್ಕೆ ತೆರಳುತ್ತಿದ್ದ ಲಾರಿ ಮತ್ತು ದ್ವಿಚಕ್ರವಾಹನ ಡಿಕ್ಕಿಯಾಗಿವೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ