ಆ್ಯಪ್ನಗರ

ಅಪಘಾತ, ಇಬ್ಬರು ಸಾವು

ಸಾಗರ ತಾಲೂಕು ಕಾಸ್ಪಾಡಿ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿಗಾಯ ಗೊಂಡಿದ್ದ ಐವರಲ್ಲಿ, ಮಂಡ್ಯ ಜಿಲ್ಲೆಯ ಇಬ್ಬರು ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

Vijaya Karnataka 30 Oct 2019, 5:04 pm
ಶಿವಮೊಗ್ಗ: ಸಾಗರ ತಾಲೂಕು ಕಾಸ್ಪಾಡಿ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿಗಾಯ ಗೊಂಡಿದ್ದ ಐವರಲ್ಲಿ, ಮಂಡ್ಯ ಜಿಲ್ಲೆಯ ಇಬ್ಬರು ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
Vijaya Karnataka Web accident two deaths
ಅಪಘಾತ, ಇಬ್ಬರು ಸಾವು

ಮಂಡ್ಯ ಜಿಲ್ಲೆಪಾಂಡವಪುರ ತಾಲೂಕಿನ ಸಂಕತೊಣ್ಣೂರು ಗ್ರಾಮದ ಕಾಳೇಗೌಡ(34), ಕುಮಾರ(28) ಮೃತಪಟ್ಟವರು. ದೀಪಾವಳಿ ಹಿನ್ನೆಲೆಯಲ್ಲಿನಾಲ್ಕು ದಿನ ರಜೆಯ ಪ್ರಯಕ್ತ ಮಂಡ್ಯದ ಆರು ಜನ ಸ್ನೇಹಿತರು ಕಾರಿನಲ್ಲಿಪ್ರವಾಸಕ್ಕೆ ಬಂದಿದ್ದರು. ಕಾಸ್ಪಾಡಿ ಬಳಿ ರಸ್ತೆ ಬದಿ ಕಾರು ನಿಲ್ಲಿಸಿ ಕೊಂಡಿದ್ದ ಇವರು, ಊಟ ಮುಗಿಸಿ ಒಳಗೆ ಕುಳಿತಿದ್ದರು. ಸಾಗರದ ಗಾಂಧಿನಗರ ನಿವಾಸಿ ಭಾರ್ಗವ್‌ ಅವರು ಇದೇ ರಸ್ತೆಯಲ್ಲಿಕಾರಿನಲ್ಲಿಬರುತ್ತಿದ್ದಾಗ ಅಡ್ಡಬಂದ ಹಸುವಿಗೆ ಡಿಕ್ಕಿ ಹೊಡೆದ ಕಾರು, ಬಳಿಕ ರಸ್ತೆ ಮಗ್ಗುಲಲ್ಲಿನಿಂತಿದ್ದ ಮಂಡ್ಯ ಯುವಕರ ಕಾರಿಗೆ ಅಪ್ಪಳಿ ಸಿದೆ. ಅಪಘಾತದಲ್ಲಿಮಂಡ್ಯ ಜಿಲ್ಲೆಯವರಾದ ಕಾಳೇಗೌಡ, ಕುಮಾರ್‌, ವಿನೋದ್‌, ರಮೇಶ್‌ ಮತ್ತು ಸಾಗರದ ಭಾರ್ಗವ ಗಾಯ ಗೊಂಡಿದ್ದರು. ಇವರೆಲ್ಲರನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾಳೇಗೌಡ ಮತ್ತು ಕುಮಾರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ