ಆ್ಯಪ್ನಗರ

ರಸ್ತೆ ಕಾಮಗಾರಿ ವಿಳಂಬದ ಆರೋಪ

ಗ್ರಾಮಾಂತರ ವ್ಯಾಪ್ತಿಯಲ್ಲಿನ ಅಚ್ಚುಕಟ್ಟು ರಸ್ತೆಗಳ ಅಭಿವೃದ್ದಿಗೆ ಅನುಮೋದನೆ ದೊರೆತು ಆರು ತಿಂಗಳಾದರೂ ರಸ್ತೆ ಕಾಮಗಾರಿಯಲ್ಲಿ ವಿಳಂಬ ಮಾಡಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್‌ ಕಾರ್ಯದರ್ಶಿ ಹಾಡೋನಹಳ್ಳಿ ಜಗದೀಶ್ವರ್‌ ಆರೋಪಿಸಿದ್ದಾರೆ.

Vijaya Karnataka 15 Jul 2019, 5:00 am
ಶಿವಮೊಗ್ಗ : ಗ್ರಾಮಾಂತರ ವ್ಯಾಪ್ತಿಯಲ್ಲಿನ ಅಚ್ಚುಕಟ್ಟು ರಸ್ತೆಗಳ ಅಭಿವೃದ್ದಿಗೆ ಅನುಮೋದನೆ ದೊರೆತು ಆರು ತಿಂಗಳಾದರೂ ರಸ್ತೆ ಕಾಮಗಾರಿಯಲ್ಲಿ ವಿಳಂಬ ಮಾಡಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್‌ ಕಾರ್ಯದರ್ಶಿ ಹಾಡೋನಹಳ್ಳಿ ಜಗದೀಶ್ವರ್‌ ಆರೋಪಿಸಿದ್ದಾರೆ.
Vijaya Karnataka Web accused of road delays
ರಸ್ತೆ ಕಾಮಗಾರಿ ವಿಳಂಬದ ಆರೋಪ


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲಿನ ಅಚ್ಚುಕಟ್ಟು ರಸ್ತೆಗಳ ಅಭಿವೃದ್ಧಿಗೆ ಸಂಸದ ಬಿ.ವೈ.ರಾಘವೇಂದ್ರ ಅವರ ಉಲ್ಲೇಖದಡಿ ಕರ್ನಾಟಕ ನೀರಾವರಿ ನಿಗಮಿತ 5ರಸ್ತೆಗಳ ಅಭಿವೃದ್ದಿಗೆ 3.60 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿತ್ತು. ಈ ಆದೇಶ ಫೆ.20ರಂದೇ ಹೊರ ಬಂದಿದ್ದು, ಇದುವರೆಗೆ ಕಾಮಗಾರಿ ಆರಂಭ ಮಾಡಿಲ್ಲ ಎಂದು ದೂರಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಮಡಿಕೆಚೀಲೂರು ಗ್ರಾಮದಿಂದ ಹಾಡೋನಹಳ್ಳಿಗೆ 1ಕೋಟಿ ರೂ. ಅಂದಾಜು ಮೊತ್ತದ ರಸ್ತೆ ಕಾಮಗಾರಿ ನಡೆಯಬೇಕಿತ್ತು. ಅದೇ ರೀತಿ ಹೊನ್ನಾಳಿ ರಸ್ತೆಯಿಂದ ಮಡಿಕೆ ಚೀಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಇಲ್ಲಿಯವರೆಗೂ ನಡೆದಿಲ್ಲ.

ಮೇಲಿನ ಹನಸವಾಡಿ, ಗೋಂದಿಚಟ್ನಳ್ಳಿ , ಸೂಗೂರಿನ ರಸ್ತೆ ಹಾಗೂ ಸಾರ್ವಜನಿಕ ಸಮುದಾಯ ಭವನಕ್ಕೆ 2.1ಕೋಟಿ ರೂ. ಅನುಮೋದನೆಯಾಗಿತ್ತು. ಇಲಾಖೆಯ ಈ ಕೆಲಸ ಇಲ್ಲಿಯವರೆಗೂ ಆರಂಭಗೊಂಡಿಲ್ಲ. ಕೂಡಲೇ ಕಾಮಗಾರಿ ಆರಂಭಿಸದಿದ್ದಲ್ಲಿ ಪಕ್ಷದ ವತಿಯಿಂದ ಸ್ಥಳೀಯರು ಹಾಗೂ ರೈತ ಮುಖಂಡರ ಜತೆಗೂಡಿ ಉಗ್ರ ಪ್ರತಿಭಟನೆಗಿಳುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ