ಆ್ಯಪ್ನಗರ

ಆಧ್ಯಾತ್ಮ ಸಾಧನೆಯಿಂದ ಸುಖ ಪ್ರಾಪ್ತಿ: ರಂಭಾಪುರೀ ಶ್ರೀ

ಸಂಸ್ಕೃತಿ ಸಂಸ್ಕಾರ ಮತ್ತು ಮೌಲ್ಯಗಳ ಪುನರುತ್ಥಾನದಿಂದ ನೆಮ್ಮದಿಯ ಬದುಕು ಸಾಧ್ಯ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಆಧ್ಯಾತ್ಮ ಸಂಪತ್ತು ಸಂಪಾದಿಸಿ ಬಾಳಿದರೆ ಶಾಂತಿ ಸುಖ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

Vijaya Karnataka 4 Apr 2019, 5:00 am
ಆನವಟ್ಟಿ: ಸಂಸ್ಕೃತಿ ಸಂಸ್ಕಾರ ಮತ್ತು ಮೌಲ್ಯಗಳ ಪುನರುತ್ಥಾನದಿಂದ ನೆಮ್ಮದಿಯ ಬದುಕು ಸಾಧ್ಯ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಆಧ್ಯಾತ್ಮ ಸಂಪತ್ತು ಸಂಪಾದಿಸಿ ಬಾಳಿದರೆ ಶಾಂತಿ ಸುಖ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
Vijaya Karnataka Web SMR-03 avt news p1


ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಜರುಗಿದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ 17ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮ ಒಂದು ಅಶ್ವತ್ಥ ವೃಕ್ಷ ವಾಗಿದ್ದು ಶಾಂತಿ ಸಮೃದ್ಧಿಯ ತಂಗಾಳಿ ನೀಡುತ್ತದೆ. ದಿನ ನಿತ್ಯ ಕಸಗೂಡಿಸಿದರೂ ಮನೆಯಲ್ಲಿ ಕಸ ಇದ್ದದ್ದೆ. ದಿನ ನಿತ್ಯ ಉಂಡರೂ ಹಸಿವು ತಪ್ಪಿದ್ದಲ್ಲ. ಆಧ್ಯಾತ್ಮದರಿವಿನ ಭಾವ ಶ್ರೀಮಂತಿಕೆ ಇದ್ದರೆ ಸನ್ಮಾರ್ಗದ ದಾರಿ ಅತ್ಯಂತ ಸಮೀಪವಾಗುತ್ತದೆ. ಪ್ರಾಣ, ಯೌವನ ಮತ್ತು ಕಾಲ ಯಾರನ್ನೂ ಕಾಯುವುದಿಲ್ಲ. ಸ್ನೇಹ, ವಿದ್ಯೆ ಮತ್ತು ಸಂಬಂಧಗಳನ್ನು ಸಂಪಾದಿಸಿ ಬಾಳಿದರೆ ಜೀವನ ಮೌಲ್ಯಕ್ಕೆ ಘನತೆ ಬರುತ್ತದೆ. ಉಸಿರು ಇರುವಾಗ ಹೆಸರು ಉಳಿಯುವ ಕೆಲಸ ಮಾಡಬೇಕು. ಧರ್ಮದ ದಶವಿಧ ಸೂತ್ರಗಳನ್ನು ಪರಿಪಾಲಿಸಿ ಜೀವನ ಸಾರ್ಥಕಪಡಿಸಿಕೊಳ್ಳಲು ಪ್ರಯತ್ನಿಸಬೇಕೆಂದರು.

ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಂಘಟನೆ ಮತ್ತು ಸತ್ಕಾರ್ಯಗಳನ್ನು ಹೆಚ್ಚು ಬೆಳೆಸಬೇಕಾಗಿದೆ. ಶ್ರೀ ಗುರುವಿನ ಆದರ್ಶದ ಬೋಧನೆ ಜೀವನ ಉನ್ನತಿಗೆ ಅವಶ್ಯಕ ಎಂದರು.

ನೇತೃತ್ವ ವಹಿಸಿದ್ದ ಮಠಾಧ್ಯಕ್ಷ ರಾದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುಬಲ ಮತ್ತು ದೈವಬಲ ಒಂದಿದ್ದರೆ ಏನೆಲ್ಲ ಮಾಡಲು ಸಾಧ್ಯ ಎಂಬುದಕ್ಕೆ ಜಾತ್ರಾ ಮಹೋತ್ಸವ ಧರ್ಮ ಸಮಾರಂಭ ಸಾಕ್ಷಿ ಎಂದರು.

ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಜಡೆ ಡಾ.ಮಹಾಂತ ಸ್ವಾಮಿಗಳು, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀಗಳು, ಹಾರನಹಳ್ಳಿ ಚೌಕಿಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಚನ್ನಬಸವ ಸ್ವಾಮಿಗಳು ಆಶೀರ್ವಚನ ನೀಡಿದರು. ಸಾಗರದ ನಿವೃತ್ತ ಉಪನ್ಯಾಸಕ ಪಂಚಾಕ್ಷ ರಯ್ಯ ಉಪನ್ಯಾಸ ನೀಡಿದರು.

ಶಾಸಕ ಕುಮಾರ್‌ ಬಂಗಾರಪ್ಪ ಹಾಗೂ ತಾ.ಪಂ. ಸದಸ್ಯರಾದ ಅಂಜಲಿ ಸಂಜೀವ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶಿರಗೋಡದ ಕಂಬಾಳಿಮಠ ಮತ್ತು ಕಾಳಂಗಿ ಭಜನಾ ಸಂಘ, ಅಗಸನಹಳ್ಳಿ ಕಲ್ಲೇಶ್ವರ ಭಜನಾ ಸಂಘದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬಂಕವಳ್ಳಿ ವೀರೇಂದ್ರ ಪಾಟೀಲ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ