ಆ್ಯಪ್ನಗರ

ಗೂಡ್ಸ್‌ ವಾಹನದಲ್ಲಿ ಜನರ ಸಾಗಿಸಿದರೆ ಕ್ರಮ

ಸರಕು ಸಾಗಣೆ ವಾಹನದಲ್ಲಿ ಕೂಲಿಕಾರ್ಮಿಕರು ಹಾಗೂ ಜನರನ್ನು ಸಾಗಿಸುವುದು ಅಕ್ಷ ಮ್ಯ ಅಪರಾಧವಾಗಿದ್ದು, ಅಂತಹ ವಾಹನಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾಗರದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರ್‌ ವಾಹನ ನಿರೀಕ್ಷ ಕ ವಾಸುದೇವ ಎಚ್ಚರಿಸಿದರು.

Vijaya Karnataka 10 Jul 2019, 5:00 am
ಸೊರಬ : ಸರಕು ಸಾಗಣೆ ವಾಹನದಲ್ಲಿ ಕೂಲಿಕಾರ್ಮಿಕರು ಹಾಗೂ ಜನರನ್ನು ಸಾಗಿಸುವುದು ಅಕ್ಷ ಮ್ಯ ಅಪರಾಧವಾಗಿದ್ದು, ಅಂತಹ ವಾಹನಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾಗರದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರ್‌ ವಾಹನ ನಿರೀಕ್ಷ ಕ ವಾಸುದೇವ ಎಚ್ಚರಿಸಿದರು.
Vijaya Karnataka Web SMR-08srbp3


ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಸೋಮವಾರ ಆಯೋಜಿಸಿದ್ದ ವಾಹನ ಸಂಚಾರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಹನ ಸವಾರರು ಜೀವ ರಕ್ಷ ಣೆ ಹಾಗೂ ಕುಟುಂಬ ಭದ್ರತೆ ಸಲುವಾಗಿ ಹೊರಡಬೇಕಾದ ಸ್ಥಳಕ್ಕೆ ಬೇಗ ಹೊರಟು ನಿಧಾನವಾಗಿ ವಾಹನ ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು. ಸರಕು ಸಾಗಣೆ ವಾಹನಗಳಲ್ಲಿ ಕೂಲಿಕಾರ್ಮಿಕರನ್ನು ಮಿತಿಮೀರಿ ಸಾಗಿಸುವ ಜತೆಗೆ ಅನೇಕ ಅಪಘಾತಗಳು ಸಂಭವಿಸಿದನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಾಹನ ಮಾಲೀಕರು ಹಾಗೂ ಚಾಲಕರು ಸರಕು ವಾಹನಗಳನ್ನು ಜನರನ್ನು ಸಾಗಿಸಲು ಉಪಯೋಗಿಸಬಾರದು. ಪ್ರಯಾಣಿಕರನ್ನು ಸಾಗಿಸುವ ವಾಹನಗಳಲ್ಲಿಯೇ ಕೂಲಿಕಾರ್ಮಿಕರನ್ನು ಕರೆದ್ಯೊಯಬೇಕು. ನಿಯಮ ತಪ್ಪಿದ್ದಲ್ಲಿ ಕೇಸು ದಾಖಲಿಸಿಕೊಳ್ಳುವುದು ಖಚಿತ ಎಂದರು.

ಬಸ್ಸಿನ ಟಾಪಲ್ಲಿ ವಿದ್ಯಾರ್ಥಿಗಳು ಹಾಗೂ ಜನರು ಕೂತು ಚಲಿಸುವುದು ರಕ್ಷ ಣೆ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಬಸ್‌ ಟಾಪ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಜನರನ್ನು ಕೂರಿಸಲು ಅವಕಾಶ ನೀಡುವ ಬಸ್‌ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವಾಹನ ಸವಾರರು ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರಿಗೆ ಇಲಾಖೆಯು ನಿಯಮ ಉಲ್ಲಂಘನೆಗೆ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಿದ್ದಲ್ಲದೆ, ಕಠಿಣ ಕ್ರಮ ಜರುಗಿಸುವುದು ಖಚಿತವಾಗಿದೆ. ಪರವಾನಗಿ, ಇನ್ಸುರೆನ್ಸ್‌, ಹೆಲ್ಮೆಟ್‌, ಸೀಟ್‌ಬೆಲ್ಟ್‌, ಮೊಬೈಲ್‌ ಬಳಕೆ, ವೇಗಮಿತಿ ಸೇರಿದಂತೆ ಹಲವು ನಿಯಮಗಳನ್ನು ಕಡ್ಡಾಯಗೊಳಿಸಿದೆ. ಅಲ್ಲದೆ ಮದ್ಯ ಸೇವಿಸಿ ವಾಹನ ಚಲಿಸಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸಾರಿಗೆ ಇಲಾಖೆಯ ಉಮೇಶ್‌, ನಿಂಗಪ್ಪ, ಸೊರಬ ರೋಟರಿ ಕ್ಲಬ್‌ ನಿಯೋಜಿತ ಅಧ್ಯಕ್ಷ ರಾಜು ಹಿರಿಯಾವಲಿ, ನಿಂಗಪ್ಪ, ರಾಮಚಂದ್ರ, ಸಲಿಂ ಅಹ್ಮದ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ