ಆ್ಯಪ್ನಗರ

‘ಸರಕಾರಿ ಶಾಲೆಗೆ ಮಕ್ಕಳ ಸೇರಿಸಿ’

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷ ಣ ಹಾಗೂ ಅನ್ನದಾಸೋಹ ಇದ್ದರೂ ಮಕ್ಕಳನ್ನು ಖಾಸಗಿ ವ್ಯಾಮೋಹಕ್ಕೆ ಒಳಗಾಗಿ ಸರಕಾರಿಗಳಿಗೆ ಮಕ್ಕಳನ್ನು ಸೇರಿಸಲು ನಿರ್ಲಕ್ಷ ್ಯವಹಿಸುತ್ತಿರುವುದು ವಿಷಾದದ ಸಂಗತಿ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

Vijaya Karnataka 21 Feb 2019, 5:00 am
ರಿಪ್ಪನ್‌ಪೇಟೆ: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷ ಣ ಹಾಗೂ ಅನ್ನದಾಸೋಹ ಇದ್ದರೂ ಮಕ್ಕಳನ್ನು ಖಾಸಗಿ ವ್ಯಾಮೋಹಕ್ಕೆ ಒಳಗಾಗಿ ಸರಕಾರಿಗಳಿಗೆ ಮಕ್ಕಳನ್ನು ಸೇರಿಸಲು ನಿರ್ಲಕ್ಷ ್ಯವಹಿಸುತ್ತಿರುವುದು ವಿಷಾದದ ಸಂಗತಿ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
Vijaya Karnataka Web SMR-18rpt2


ತಳಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 55ನೇ ಮಕ್ಕಳ ಸಾಂಸ್ಕೃತಿಕ ಸಂಜೆ ಸಮಾರಂಭ ಹಾಗೂ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಖಾಸಗಿ ಶಿಕ್ಷ ಣ ಸಂಸ್ಥೆಗಳಲ್ಲಿ ಮಕ್ಕಳ ಬೆಳವಣಿಗೆ ಲೆಕ್ಕಿಸದೆ ಹೆಚ್ಚು ಒತ್ತಡದ ಶಿಕ್ಷ ಣ ನೀಡುವುದರಿಂದಾಗಿ ಮಕ್ಕಳಲ್ಲಿ ಗೊಂದಲಕ್ಕೆ ಕಾರಣವಾಗಬೇಕಾಗುತ್ತದೆ. ಆದರೆ ಸರಕಾರಿ ಶಿಕ್ಷ ಣದಲ್ಲಿ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಬೋಧನೆ ಮಾಡುವುದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗುವುದಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ವೇತಾ ಅರ್‌ ಬಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಸತ್ಪ್ರಜೆಯನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷ ಕ, ಪೋಷಕರದ್ದಾಗಬೇಕು. ಮಕ್ಕಳಿಗೆ ಹೆಚ್ಚಿನ ಹೊರೆ ಹಾಕದೆ ಅವರ ಬೌದ್ಧಿಕ ಬೆಳವಣಿಗೆಗೆ ತಕ್ಕ ಶಿಕ್ಷ ಣ ನೀಡಿದಾಗ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ತೋರೆಗದ್ದೆ ವಾಸಪ್ಪಗೌಡ ಪ್ರತಿಭಾ ಪುರಸ್ಕಾರ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಾಳಿ ರಮೆಶ್‌ ಅಧ್ಯಕ್ಷ ತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಬಂಡಿ ರಾಮಚಂದ್ರ,ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಶೀಲರಘುಪತಿ, ಗ್ರಾ.ಪಂ.ಸ.ಎಚ್‌.ಎಸ್‌.ಮಂಜುನಾಥ, ಪ್ರಮೀಳ ಸಂತೋಷ, ಕ್ಷೇತ್ರ ಶಿಕ್ಷ ಣಾಧಿಕಾರಿ ಬಿ.ಎಚ್‌.ರಾಮಪ್ಪಗೌಡ,ಸರಕಾರಿ ನೌಕರ ಸಂಘದ ಸಂಘಟನಾ ಕಾರ‍್ಯದರ್ಶಿ ಜಗದೀಶ್‌ ಕಾಗಿನಲ್ಲಿ, ಸಿಆರ್‌ಪಿ ಹರೀಶ್‌, ಮಂಜುಳಾ ಪಕೀರಪ್ಪ, ಗ್ರಾಮದ ಹಿರಿಯರು ಶಾಲೆಗೆ ಜಾಗ ಕೊಡುಗೆ ನೀಡಿದ ಚನ್ನವೀರಪ್ಪಗೌಡ, ಮುಖ್ಯ ಶಿಕ್ಷ ಕ ಭೋಜಪ್ಪ ಇತರರಿದ್ದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಬಿ.ಎಚ್‌.ರಾಮಪ್ಪಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಜಿ.ಭಾಸ್ಕರ್‌,

ತಳಲೆ ನೀರುಗಂಟಿ ಶೇಖರಪ್ಪ, ನಿವೃತ್ತ ಅಡುಗೆಯವರಾದ ಬಿ.ಶಶಿಕಲಾ, ಶಾಲೆ ಹಳೆ ವಿದ್ಯಾರ್ಥಿನಿ ಕೆ.ಎಚ್‌.ಲೀಲಾ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ