ಆ್ಯಪ್ನಗರ

ಸಾವಯವ ಗೊಬ್ಬರ ಬಳಕೆಗೆ ಸಲಹೆ

ಕೃಷಿಯಲ್ಲಿಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಅಧಿಕ ಇಳುವರಿ ಪಡೆಯಲು ಸಹಕಾರ ಆಗುತ್ತದೆ ಎಂದು ಕೃಷಿ ಅಧಿಕಾರಿ ಶಿವಕುಮಾರ್‌ ಹೇಳಿದರು.

Vijaya Karnataka 8 Sep 2019, 5:00 am
ಹೊಳೆಹೊನ್ನೂರು: ಕೃಷಿಯಲ್ಲಿಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಅಧಿಕ ಇಳುವರಿ ಪಡೆಯಲು ಸಹಕಾರ ಆಗುತ್ತದೆ ಎಂದು ಕೃಷಿ ಅಧಿಕಾರಿ ಶಿವಕುಮಾರ್‌ ಹೇಳಿದರು.
Vijaya Karnataka Web advice on the use of organic fertilizer
ಸಾವಯವ ಗೊಬ್ಬರ ಬಳಕೆಗೆ ಸಲಹೆ


ಸಮೀಪದ ಆಗರದಹಳ್ಳಿದಲ್ಲಿಇತ್ತೀಚೆಗೆ ಏರ್ಪಡಿಸಿದ್ದ ಸಾವಯವ ಕೃಷಿ ಕ್ಷೇತ್ರೋತ್ಸವದಲ್ಲಿಅವರು ಮಾತನಾಡಿದರು.

ರೈತರು ತಮ್ಮ ತೋಟದ ಬೆಳೆಗಳಿಗೆ ಸಾವಯವ ಗೊಬ್ಬರ ಬಳಸಬೇಕು. ಇದರಿಂದ ಪ್ರಮುಖವಾಗಿ ಅಡಕೆ ಬೆಳೆಯಲ್ಲಿಅರಳು ಉದುರುವುದು ಕಡಿಮೆ ಆಗುತ್ತದೆ. ಗಿಡಗಳು ದೀರ್ಘ ಬಾಳಿಕೆ ಬರುತ್ತವೆ. ರಾಸಾಯನಿಕ ಗೊಬ್ಬರಗಳು ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಜತೆಗೆ ಆರೋಗ್ಯಕ್ಕೆ ಹಾನಿಕಾರಕ. ಸಾವಯವ ಗೊಬ್ಬರದಲ್ಲಿಪ್ರಮುಖ ಪೋಷಕಾಂಶ ಸಮ ಪ್ರಮಾಣದಲ್ಲಿದೊರೆಯುತ್ತವೆ ಎಂದರು.

ಸ್ಥಳೀಯ ಶಾಖೆ ಮುಖ್ಯಸ್ಥ ಎ.ಎಂ.ಶೇಖರಪ್ಪ ಮಾತನಾಡಿ, ತೋಟಗಳಿಗೆ ಕಳೆನಾಶಕ ಸಿಂಪಡಣೆ ಮಾಡಬಾರದು. ಕಳೆನಾಶಕ ಬಳಕೆಯಿಂದ ಕಳೆ ನಾಶ ಆಗುವುದರೊಂದಿಗೆ ಬೆಳೆ ಬಹುಬೇಗ ಹಾಳಾಗುತ್ತದೆ ಎಂದರು.

ಸ್ಥಳೀಯ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತ ಗೋವಿಂದಸ್ವಾಮಿ, ಮೆರಫುನ್‌, ಸಿಬ್ಬಂದಿ ಮಂಜುನಾಥ್‌, ಶೇಖರಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ