ಆ್ಯಪ್ನಗರ

ರಾಜ್ಯ ಸರ್ಕಾರ ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಮಾಡಿದ್ದಕ್ಕೆ ಆಕ್ಷೇಪ

ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ, ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ದೇವಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Vijaya Karnataka Web 28 Oct 2020, 11:29 am
ಸಾಗರ: ತಾಲೂಕಿನ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಆಡಳಿತ ನಿರ್ವಹಣೆಗೆ ಜಿಲ್ಲಾಧಿಕಾರಿ ಸಲಹಾ ಸಮಿತಿ ರಚಿಸಿ ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಖಂಡನೀಯ ಎಂದು ತಾಲೂಕು ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಮೇಶ್‌ ಕೆ.ಎಚ್‌.ಮರಸ ತಿಳಿಸಿದ್ದಾರೆ.
Vijaya Karnataka Web sigandur chowdeshwari temple


ಮಲೆನಾಡಿನಲ್ಲಿ ಭಾರೀ ಮಳೆ; ಭದ್ರಾ, ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

ಸಿಗಂದೂರು ದೇವಸ್ಥಾನದಲ್ಲಿಈಚೆಗೆ ಸಣ್ಣಪುಟ್ಟ ಗೊಂದಲಗಳು ನಿರ್ಮಾಣವಾಗಿದ್ದರೂ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಅದು ಬಗೆಹರಿದಿತ್ತು. ಸರಕಾರ ಮಧ್ಯಪ್ರವೇಶಿಸುವ ಯಾವುದೇ ಗಂಭೀರ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೂ ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ, ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ದೇವಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಳದಲ್ಲಿ ಹೊಡೆದಾಟ; ಬೀದಿಗೆ ಬಿದ್ದ ಅರ್ಚಕರ-ಧರ್ಮದರ್ಶಿಗಳ ಆಂತರಿಕ ಕಲಹ..!

ರಾಜ್ಯದ ಹಲವು ಮಠ, ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳಲ್ಲಿಅನೇಕ ಬಾರಿ ಗೊಂದಲಗಳು ಏರ್ಪಟ್ಟಾಗ ಸಲಹಾ ಅಥವಾ ಮೇಲ್ವಿಚಾರಣಾ ಸಮಿತಿ ನೇಮಕ ಮಾಡಲು ಮುಂದಾಗದ ಸರಕಾರ ಸಿಗಂದೂರು ದೇವಸ್ಥಾನದ ವಿಷಯದಲ್ಲಿ ಮಾತ್ರ ಈ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ. ಚೌಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡಿರುವುದು ಹಿಂದುಳಿದ ವರ್ಗಗಳ ನಂಬಿಕೆಯನ್ನು ಹಾಳು ಮಾಡುವ ಹುನ್ನಾರವಾಗಿರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಸಿಗಂದೂರು ದೇವಸ್ಥಾನ ಸುಗಮ ನಿರ್ವಹಣೆಗೆ ಸಮಿತಿ ರಚನೆ: ಜಿಲ್ಲಾಡಳಿತದಿಂದ ಇನ್ನಷ್ಟು ಕ್ರಮ!

ಧರ್ಮದರ್ಶಿ ರಾಮಪ್ಪ ಅವರು ಮುಖ್ಯಸ್ಥರಾಗಿರುವ ಖಾಸಗಿ ಟ್ರಸ್ಟ್‌ ಮೂಲಕ ಚೌಡೇಶ್ವರಿ ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯುತ್ತಿರುವುದನ್ನು ಸಹಿಸದ ಕೆಲವರು ನಡೆಸಿರುವ ಪಿತೂರಿಗೆ ಸರಕಾರ ಬೆಂಬಲ ನೀಡಿರುವುದು ದುರದೃಷ್ಟಕರ ಸಂಗತಿ. ಸರಕಾರ ಮತ್ತು ಜಿಲ್ಲಾಧಿಕಾರಿಗಳು ತಕ್ಷಣವೇ ಸಲಹಾ ಸಮಿತಿಯನ್ನು ಹಿಂದಕ್ಕೆ ಪಡೆಯಬೇಕು. ಚೌಡೇಶ್ವರಿ ದೇವಸ್ಥಾನದಲ್ಲಿ ಹಿಂದಿನಂತೆ ಆಡಳಿತ ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ